ಮುಂಬೈ:ತನ್ನನ್ನು ತಾನು ಅಬುಧಾಬಿಯ ರಾಜಮನೆತನದ ಉದ್ಯೋಗಿ ಎಂದು ನಂಬಿಸಿ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ಲಕ್ಷಗಟ್ಟಲೆ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿದ್ದ 41 ವರ್ಷದ ವ್ಯಕ್ತಿಯೊಬ್ಬರು ಬಂಧಿಸಲ್ಪಟ್ಟಿದ್ದಾರೆ. ದುಬೈನಲ್ಲಿ ಶೇಖ್‌ನೊಂದಿಗೆ ಕೆಲಸ ಮಾಡುತ್ತಿದ್ದ ಈತ ಅವರ ಐಷಾರಾಮಿ ಜೀವನಶೈಲಿಗೆ ಮಾರು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ. ಅವರು ಕರ್ನಾಟಕದ ಪುತ್ತೂರು ಜಿಲ್ಲೆಯ ತಮ್ಮ ಮನೆಗೆ ಮರಳಿ ಬಂದಾಗ, ಐಷಾರಾಮದ ಅಭ್ಯಾಸವಾಗಿದ್ದ ಅವರಿಗೆ ಅಲ್ಲಿ ವಾಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಐಷಾರಾಮಿ ಜೀವನವನ್ನು ಅನುಭವಿಸಲು ಪಂಚತಾರಾ ಹೋಟೆಲ್‌ನಲ್ಲಿ ಉಳಿಯಲು ನಿರ್ಧರಿಸಿದ್ದ.
ಆರೋಪಿ ಮೊಹಮ್ಮದ್ ಷರೀಫ್ ಕಳೆದ ವರ್ಷ ಮೂರು ತಿಂಗಳ ಕಾಲ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದು, ಅಬುಧಾಬಿಯ ರಾಜಮನೆತನದ ಸದಸ್ಯ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಉದ್ಯೋಗಿಯಂತೆ ನಟಿಸಿ ಬಿಲ್ ಪಾವತಿಸದೆ ತೆರಳಿದ್ದರು. ಅದಲ್ಲದೇ ಹೋಟೆಲ್ ಕೊಠಡಿಯಲ್ಲಿದ್ದ ಬೆಳ್ಳಿ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿರುವ ಹೋಟೆಲ್​ ಆಡಳಿತ ಮಂಡಳಿ, 23 ಲಕ್ಷ ರೂ. ಶರೀಫ್ ಬಾಕಿ ಉಳಿಸಿದ್ದಾರೆ ಎಂದಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್​ ಆಡಳಿತ ಮಂಡಳಿಯ ದೂರಿನ ಆಧಾರದ ಮೇಲೆ ಶರೀಫ್​ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ಶರೀಫ್, ಬ್ರಾಂಡೆಡ್ ಶೂಗಳು, ಬಟ್ಟೆಗಳು ಮತ್ತು ಕಾರುಗಳನ್ನು ಇಷ್ಟಪಡುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ. ಅಧಿಕಾರಿಗಳು ಹೇಳುವಂತೆ ಹೋಟೆಲ್‌ನಲ್ಲಿ ಇಲ್ಲದಿದ್ದರೆ ನಿದ್ರೆ ಬರುವುದಿಲ್ಲ. “ನಾವು ಅವನನ್ನು ಗಂಟೆಗಳ ಕಾಲ ಪ್ರಶ್ನಿಸಿದ್ದೇವೆ. ಆಗ ಆತ ಶೇಖ್ ಬಗ್ಗೆ ನಮಗೆ ಹೇಳಿದ್ದು ಅವರ ಜೀವನಶೈಲಿಯಿಂದ, ವಿಶೇಷವಾಗಿ ಭವ್ಯವಾದ ಮನೆಗಳಿಂದ ಅವರು ಎಷ್ಟು ಪ್ರಭಾವಿತರಾಗಿದ್ದರು ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಈ ಶರೀಫ್​, ಭಾರತದಲ್ಲಿ ಆ ರೀತಿಯ ಜೀವನವನ್ನು ಪಡೆಯಲು ಬಯಸಿದ್ದರು. ಅವರು ನಮಗೆ ತಮ್ಮ ಶೂಗಳನ್ನು ತೋರಿಸಿದ್ದು ಅವು 1 ಲಕ್ಷ ರೂ. ಬೆಲೆ ಬಾಳುತ್ತವೆ. 10,000 ರೂಪಾಯಿಗೆ ಟಿ-ಶರ್ಟ್ ಖರೀದಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಶರೀಫ್, ಕರ್ನಾಟಕದಿಂದ ಹಣಕಾಸು ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಎಂಬಿಎ ಮಾಡಿದ್ದಾರೆ. ಅವರು 7-10 ವರ್ಷಗಳ ಕಾಲ ದುಬೈನಲ್ಲಿ ಉಳಿದುಕೊಂಡು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಅವರು ಇಂದಿಗೂ ಮದುವೆಯಾಗಿಲ್ಲ. ಅವರು ಆಗಾಗ್ಗೆ ಶೇಖ್ ಜೊತೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ 2020ರಲ್ಲಿ, ಅವರು ಭಾರತಕ್ಕೆ ಹಿಂತಿರುಗಬೇಕಾಯಿತು ಎಂದು ಪೊಲೀಸರು ಮತ್ತಷ್ಟು ವಿವರಿಸಿದ್ದಾರೆ.
“ಅವರು ಭಾರತಕ್ಕೆ ಮರಳಿದ ಮೇಲೆ ಹೆಚ್ಚು ದಿನ ಪುತ್ತೂರಿನಲ್ಲಿ ಇರಲಿಲ್ಲ. ಮುಂಬೈನ ಪಂಚತಾರಾ ಹೋಟೆಲ್‌ಗೆ ಹೋಗಿ 6-8 ತಿಂಗಳು ತಂಗಿದ್ದರು ಎನ್ನಲಾಗಿದೆ. ಅಲ್ಲಿ ಬಿಲ್ ಸುಮಾರು 80-90 ಲಕ್ಷ ರೂ. ಆಗಿದ್ದು ನಾವು ಆ ಹೋಟೆಲನ್ನು ಸಂಪರ್ಕಿಸುತ್ತಿದ್ದೇವೆ. ಸ್ವಲ್ಪ ಸಮಯದ ನಂತರ ನಿಖರವಾದ ವಿವರಗಳನ್ನು ಪಡೆಯಲಿದ್ದೇವೆ. ಬಿಲ್ ಪಾವತಿಸದೆ ಪರಾರಿಯಾಗಲು ಮುಂದಾಗಿದ್ದ ಈತ ಹೋಟೆಲ್ ಸಿಬ್ಬಂದಿಗೆ ಸಿಕ್ಕಿಬಿದ್ದು 50-60 ಲಕ್ಷ ರೂ. ಆಸ್ತಿ ಹೊಂದಿದ್ದರೂ ಸದ್ಯ ನಿರುದ್ಯೋಗಿಯಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 1 =
Remember me
