ಹುಬ್ಬಳ್ಳಿ: ಕರೊನಾ ವೈರಸ್ Covid19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ತೆಗೆದುಕೊಳ್ಳಲಾರಂಭಿಸಿದ್ದಾರೆ. ಆದರೆ, ಕೆಲವೊಮ್ಮೆ ನಮ್ಮ ಈ ಮುಂಜಾಗ್ರತಾ ಕ್ರಮಗಳು ಅಪಹಾಸ್ಯಕ್ಕೆ ಗುರಿಯಾಗದಂತೆ ನೋಡಿಕೊಳ್ಳಬೇಕಾದ ಸಾಮಾನ್ಯ ಅರಿವು ಕೂಡ ಎಚ್ಚರವಾಗಿರಬೇಕು ಎಂಬುದು ಕೂಡ ಅಷ್ಟೇ ಸತ್ಯ.
ಕರೊನಾ ವೈರಸ್ ಸೋಂಕಿನ ಬಗ್ಗೆ ಭಯ ಬೇಕಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಕೂಡ ನಿರಾಕರಿಸಲಾಗದ ಕಟುವಾಸ್ತವ. ಇದಕ್ಕಾಗಿಯೇ #SocialDistancing ಕ್ರಮದ ಬಗ್ಗೆ ತಿಳಿವಳಿಕೆಯನ್ನೂ ಮೂಡಿಸಲಾಗುತ್ತಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಟ್ವೀಟ್​ಗಳು, ಫೇಸ್​ಬುಕ್ ಅಪ್ಡೇಟ್ಸ್ ಎಲ್ಲವೂ ದೇಶವಾಸಿಗಳ ಗಮನಸೆಳೆದಿದೆ.
ಈಗ ಈ ವಿಚಾರದಲ್ಲಿ ಗಮನಸೆಳೆದಿರುವುದ ಹುಬ್ಬಳ್ಳಿ ಕೇಶ್ವಾಪುರದ ಎಸ್​ಬಿಐ ಮೇನ್ ಬ್ರಾಂಚ್​. ಈ ಶಾಖೆಯಲ್ಲಿ ಕರೊನಾ ವೈರಸ್ ಆತಂಕದಿಂದ ಗ್ರಾಹಕರಿಂದ ಅಂತರ ಕಾಯ್ದುಕೊಳ್ಳಲು ಬ್ಯಾಂಕ್ ಸಿಬ್ಬಂದಿ ಇನ್ನೋವೇಟಿವ್ ಐಡಿಯಾ ಕಂಡುಕೊಂಡಿದ್ದಾರೆ. ಸಿಬ್ಬಂದಿಯ ಟೇಬಲ್ ಬಳಿ ಗ್ರಾಹಕರು ಬರದಂತೆ ಒಂದು ಮೀಟರ್ ದೂರದವರೆಗೆ ಪ್ಲಾಸ್ಟಿಕ್ ದಾರ ಕಟ್ಟಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕರೊನಾ ಸೋಂಕಿತರಲ್ಲಿ ಇಬ್ಬರು ಗುಣಮುಖ, ಕೊಂಚ ತಗ್ಗಿದ ಆತಂಕ

ಇಟಲಿಯಲ್ಲಿ ಕರೊನಾದಿಂದ ಮೃತರಾದ ಶೇ. 99 ರೋಗಿಗಳಲ್ಲಿ ಮೊದಲೇ ಕಾಯಿಲೆ ಇತ್ತು: ನೂತನ ಸಂಶೋಧನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
