| ಶಶಿಧರ ಕುಲಕರ್ಣಿ ಮುಂಡಗೋಡ
ಹೊಲಗಳಿಗೆ ದಾಳಿ ಇಟ್ಟು ಬೆಳೆ ಹಾನಿ ಮಾಡುವ ಆನೆಗಳ ಹಿಂಡನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಯಲ್ಲಾಪುರದ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿಯವರು ಈ ನಿಟ್ಟಿನಲ್ಲಿ ಸಹಕಾರ ನೀಡಿದ್ದಾರೆ.
ಮುಂಡಗೋಡ ತಾಲೂಕಿಗೆ ಪ್ರತಿ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಿಗೆ ವರ್ಷದ ಅತಿಥಿಗಳಂತೆ ಆನೆಗಳು ದಂಡು-ದಂಡಾಗಿ ಬಂದು ಬೆಳೆದು ನಿಂತ ರೈತರ ಪೈರನ್ನು ತಿಂದು-ತುಳಿದು ಹಾನಿ ಮಾಡುತ್ತವೆ. ಇವುಗಳ ನಿಯಂತ್ರಣಕ್ಕೆ ರೈತರ ಹೊಲಗಳಲ್ಲಿ ಅಲಾರಾಂ ಮತ್ತು ಫ್ಲಾಶ್ ಲೈಟ್ ಅಳವಡಿಕೆಗೆ ಮಾಡಿಸುತ್ತಾ ಇವೆ.
2010ರಿಂದ ಜಿಲ್ಲೆಯ ಕೆನರಾ ವೃತ್ತದ ಯಲ್ಲಾಪುರ, ಹಳಿಯಾಳ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್) ವ್ಯಾಪ್ತಿಯಲ್ಲಿ ಬರುವ ಎಲ್ಲ 13 ವಲಯಗಳಲ್ಲಿ ರೈತರಿಗೆ ಅತಿ ಕಡಿಮೆ 400-450 ರೂ. ಖರ್ಚಿನಲ್ಲಿ ಹೊಲದ ಅಂಚಿನಲ್ಲಿ 5 ವರ್ಷ ಬಾಳಿಕೆ ಬರುವ ಟ್ರಿಪ್ ಅಲಾರಾಂ ಅಳವಡಿಸಲಾಗುತ್ತಿದೆ. ರೈತನ ಹೊಲದಿಂದ ಸುಮಾರು 200 ಮೀ. ಅಂತರದವರೆಗೆ ಇದರ ಸೈರನ್ ಶಬ್ದ ಕೇಳುತ್ತದೆ. ಸ್ವತಃ ರೈತನೇ ಬಂದು ಬಂದ್ ಮಾಡುವವರೆಗೆ ಸೈರನ್ ಬಂದ್ ಆಗುವುದಿಲ್ಲ. ಕಳೆದ 5-6 ವರ್ಷಗಳಿಂದ ಟ್ರಿಪ್ ಅಲಾರಾಂ ಅಳವಡಿಕೆಯಿಂದ ಹಳಿಯಾಳ ಮತ್ತು ಯಲ್ಲಾಪುರ ಭಾಗಗಳಲ್ಲಿ ಕಾಡಾನೆ ಹಾವಳಿ ಕಡಿಮೆ ಆಗಿದೆ.
ಮೂರು ವರ್ಷದ ಹಿಂದೆ ಪ್ರಾಯೋಗಿಕವಾಗಿ ತಾಲೂಕಿನ ಗುಂಜಾವತಿ ಗ್ರಾಮದ ಹೊಲಗಳಲ್ಲಿ ಟ್ರಿಪ್ ಅಲಾರಾಂ ಅಳವಡಿಸಿದ ನಂತರ ಆನೆ ಬಂದರೂ ಒಂದೇ ದಿವಸಕ್ಕೆ ವಾಪಸಾಗುತ್ತಿದ್ದು ಸಂಪೂರ್ಣವಾಗಿ ಬೆಳೆ ಹಾನಿ ಹತೋಟಿಗೆ ಬಂದಿದೆ. ಮುಂಡಗೋಡ ವಲಯದ ಕ್ಯಾತನಳ್ಳಿ, ಕವಲಗಿ ಮತ್ತು ಕಾತೂರ ವಲಯದ ಸುಳ್ಳಳ್ಳಿ, ಬಸವನಕೊಪ್ಪ ಗ್ರಾಮಗಳಲ್ಲಿ ಸಂಪೂರ್ಣವಾಗಿ ಟ್ರಿಪ್ ಅಲಾರಾಂ ಅಳವಡಿಸಲಾಗಿದೆ.
ಸೋಲಾರ್ ಚಾರ್ಜ್​ನಲ್ಲಿ ನಡೆಯುವ ಫ್ಲಾ್ಯಶ್ ಲೈಟ್ ಕೂಡ ಅಳವಡಿಸಲಾಗುತ್ತಿದ್ದು ಇದಕ್ಕೆ ಸುಮಾರು 3500 ಸಾವಿರ ರೂ. ಖರ್ಚು ತಗಲುತ್ತದೆ. ಹಗಲು ಬಂದ್ ಇದ್ದು ರಾತ್ರಿ ವೇಳೆ ಮಿನುಗುತ್ತದೆ. ಒರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಮೊದಲ ಬಾರಿ ಪ್ರಾಯೋಗಿಕವಾಗಿ ಬ್ಯಾನಳ್ಳಿ ಮತ್ತು ಮಲವಳ್ಳಿ ಗ್ರಾಮಗಳ ಹೊಲಗಳಲ್ಲಿ ಅಳವಡಿಸಲಾಗಿದೆ.
ಆನೆ ದಾರಿದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್)ದಲ್ಲಿ 70-90 ಕಾಡಾನೆಗಳಿವೆ. ಇಲ್ಲಿಂದ ಹೊರಡುವ ಆನೆಗಳು ಮೂರು ಭಾಗಗಳಾಗಿ ಬೇರ್ಪಡುತ್ತವೆ. ಹಳಿಯಾಳ, ಖಾನಾಪುರ, ಲೋಂಡಾ, ಮೂಲಕ ಬೆಳಗಾವಿ ಕಡೆಗೆ ಒಂದು ಕಾಡಾನೆ ಹಿಂಡು ಚಲಿಸುತ್ತದೆ. ಸಾಂಬ್ರಾಣಿ, ಹಳಿಯಾಳ ಮೂಲಕ ಸುತ್ತಮುತ್ತ ಇನ್ನೊಂದು ಹಾಗೂ ಮತ್ತೊಂದು ಗುಂಪು ಭಗವತಿ ವಲಯದಿಂದ ಕಿರವತ್ತಿ, ಮುಂಡಗೋಡ, ಕಾತೂರ, ಹಾನಗಲ್ಲ ಮೂಲಕ ದಾವಣಗೆರೆ ಮತ್ತು ಚನ್ನಗಿರಿವರೆಗೂ ಚಲಿಸುತ್ತವೆ. ಫೆಬ್ರವರಿ-ಮಾರ್ಚ್ ತಿಂಗಳಿಗೆ ದಾಂಡೇಲಿಯತ್ತ ವಾಪಸ್ ಮುಖ ಮಾಡುತ್ತವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
