ಬೆಂಗಳೂರುರಾಮನಗರದಲ್ಲಿ ನಾಗೇಗೌಡರು ನಿರ್ಮಿಸಿರುವ ಜಾನಪದ ಲೋಕವು ರಾಜ್ಯ, ದೇಶಕ್ಕೆ ಮಾತ್ರವಲ್ಲದೆ, ವಿದೇಶಗಳಿಗೂ ಮಾದರಿಯಾಗಿದೆ. ಇತ್ತೀಚೆಗೆ ಸ್ಪೇನ್, ಇಂಗ್ಲೆಂಡಿನಿಂದಲೂ ಜಾನಪದ ತಜ್ಞರು ಭೇಟಿ ಮಾಹಿತಿ ಪಡೆದಿದ್ದಾರೆಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಶ್ಲಾಘನೆ ವ್ಯಕ್ತಪಡಿಸಿದರು.
ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಜಾನಪದ ಪರಿಷತ್ತು ಆಯೋಜಿಸಿದ್ದ ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೊಮ್ಮೆ ಜಾನಪದ ಲೋಕದ ಬಗ್ಗೆ ರಷ್ಯಾದಲ್ಲಿ ಉಲ್ಲೇಖಿಸಿದ್ದ ಸಂದರ್ಭದಲ್ಲಿ ಅಲ್ಲಿನ ಕಲಾವಿದರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ್ದರು. ್ರಾನ್ಸ್, ಜಪಾನ್ ಹೊರತುಪಡಿಸಿದರೆ, ಜಾನದಪ ಲೋಕದಷ್ಟು ದೊಡ್ಡ ವಸ್ತು ಸಂಗ್ರಹಾಲಯ ಮತ್ತೊಂದಿಲ್ಲ ಎಂದು ತಿಳಿಸಿದರು.
ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ, ಜಾನಪದವು ವೈವಿಧ್ಯಮಯ ಸಂಸ್ಕೃತಿಯಾಗಿದ್ದು, ಆಧುನಿಕತೆಯು ಸಂಕುಚಿತ ಮನೋಭಾವವುಳ್ಳ ಸಂಸ್ಕೃತಿಯಾಗಿದೆ. ಸಮಾಜವನ್ನು ಬೇರ್ಪಡಿಸುತ್ತಿದೆ. ಆಧುನಿಕ ಸಮಾಜದಲ್ಲಿ ಗಂಡಸರು ಕ್ರೂರಿಗಳಾಗುತ್ತಿದ್ದರೆ, ಹೆಂಗಸರನ್ನು ಸರಕುಗಳಂತೆ ಕಾಣಲಾಗುತ್ತಿದೆ. ಈ ಹಿಂದೆ ಬ್ರಿಟೀಷರಿಗೆ ಸಲಾಂ ಹೊಡೆಯುತ್ತಿದ್ದರು. ಈಗ ಕಾರ್ಪೋರೇಟ್ ಸಂಸ್ಥೆಗಳಿಗೆ ಸಲಾಂ ಹೊಡೆಯುವಂತಹ ಸಂಸ್ಕೃತಿ ಬೆಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಶೋಧನಾ ಕೇಂದ್ರ ಆರಂಭ:ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಜಾನಪದಕ್ಕೆ ಸಂಬಂಧಿಸಿದ ವಿಷಯಗಳ ಸಂಶೋಧನೆಗಾಗಿ ಸದ್ಯದಲ್ಲಿಯೇ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಪಿಎಚ್.ಡಿ. ಎಂ.ಫಿಲ್ ಮತ್ತು ಡಿಪ್ಲೊಮೊ ಕೋರ್ಸ್‌ಗಳನ್ನು ಕೂಡ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಧುನಿಕ ಕಾಲದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ನೆಲಮೂಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಜಾನಪದವು ಸಾಕಷ್ಟು ಸಹಕಾರಿಯಾಗಿದೆ. ಇಂತಹ ಸಂಸ್ಕೃತಿಯನ್ನು ಆಧುನಿಕ ಕಾಲದ ಜನರಿಗೆ ತಿಳಿಸಬೇಕೆಂಬ ಉದ್ದೇಶದಿಂದ ನಾಗೇಗೌಡರು ಜಾನಪದ ಲೋಕವನ್ನು ನಿರ್ಮಾಣ ಮಾಡಿದರು. 15 ಎಕರೆ ಪ್ರದೇಶದಲ್ಲಿರುವ ಜಾನಪದ ಲೋಕವು ನಗರ ಪ್ರದೇಶದವರಿಗೆ ವಿಸ್ಮಯಕಾರಿಯಾಗಿದೆ ಎಂದರು.
ಪರಿಷತ್ತಿನ ವತಿಯಿಂದ ಪ್ರತಿವರ್ಷ ನೀಡಲಾಗುವ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ಆಂಧ್ರ ಪ್ರದೇಶದ ಮೃದಂಗ ಕಲಾವಿದ ದೇವಗುಪ್ತವು ವೀರವೆಂಕಟ ಜಗನ್ನಾಥ ರಾವ್ ಅವರಿಗೆ ನೀಡಲಾಯಿತು. ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ಲಕ ನೀಡಿ ಗೌರವಿಸಲಾಯಿತು.
ಜಗನ್ನಾಥರಾವ್ ಅವರು ಆಂಧ್ರ ಪ್ರದೇಶದ ಪ್ರಾಚೀನ ಜಾನಪದ ಕಲೆಯಾಗಿರುವ ತೂರ್ಪು ಭಾಗವತಂನಲ್ಲಿ ಮೃದಂಗ ಕಲಾವಿದರಾಗಿದ್ದಾರೆ. ಜಗನ್ನಾಥರಾವ್ ಅವರು ನಿರಂತರವಾಗಿ ಮೃದಂಗ ನುಡಿಸುತ್ತಿರುವ 12ನೇ ತಲೆಮಾರಿನವರಾಗಿದ್ದಾರೆ. ತೂರ್ಪು ಭಾಗವತಂ ಕರ್ನಾಟಕದ ಯಕ್ಷಗಾನ ಮಾದರಿಯ ಕಲೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
