ಕಲಬುರಗಿ:ನಿನ್ನೆ ಸುರಿದ ಭಾರಿ ಮಳೆಯಿಂದ ಹಳ್ಳದ ಸೇತುವೆ ಕಿತ್ತು ಹೋದ ಪರಿಣಾಮವಾಗಿ ಅದೇ ಸೇತುವೆಯ ಮೇಲಿಂದ ಪರೀಕ್ಷೆಗೆ ತೆರಳಬೇಕಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆತಂಕಗೊಂಡ ಪ್ರಸಂಗ ನಡೆದಿದೆ.
ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಈ ಪರೀಕ್ಷಾ ಕೇಂದ್ರಕ್ಕೆ ಹೋಗುವ ಏಕೈಕ ದಾರಿ ಈ ಸೇತುವೆಯೇ ಆಗಿದ್ದರಿಂದ ವಿದ್ಯಾರ್ಥಿಗಳು ಬೇರೆ ದಾರಿ ಕಾಣದೆ ಕಂಗಾಲಾಗಿದ್ದರು.
ಇದನ್ನೂ ಓದಿ:ದೂರು ಕೊಡಲು ಹೊರಟವಳ ಹತ್ಯೆ
ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಹಗ್ಗ ಮತ್ತು ಏಣಿಯ ವ್ಯವಸ್ಥೆ ಮಾಡಿದರು. ವಿದ್ಯಾರ್ಥಿಗಳು ಹಗ್ಗ ಹಿಡಿದು ಹಳ್ಳ ದಾಟಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರು.
ಕೋ-ಆಪರೇಟಿವ್ ಬ್ಯಾಂಕ್, ಸೊಸೈಟಿ ವಂಚನೆ ಪ್ರಕರಣ ಸಿಐಡಿಗೆ

Sign in to your account
Please enter an answer in digits:fourteen − six =
Remember me
