ಹಾಸನ:ಹಳ್ಳಿ ಸೊಗಡಿನಲ್ಲಿ ಮಹಾಮಾರಿ ಕರೊನಾ ವೈರಸ್​ ಬಗ್ಗೆ ಹೇಳಿ ಹಳ್ಳಿ ರೈತರಿಗೆ ಅರಸಿಕೆರೆ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ ಪ್ರಸಂಗವೊಂದು ಜರುಗಿದೆ.
ಚೀನಾ ದೇಶದವರು ಹೇಳಿದ ಮಾತಿಗೆ ಟ್ರಂಪ್ ಉದಾಸಿನಾ ಮಾಡಿದ. ಈಗ ಏನಾಗಿದೆ ಅಮೆರಿಕದಲ್ಲಿ? 50 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇಟಲಿಯಲ್ಲಿ ರಜೆ ಕೊಟ್ರೆ ಜನ ಬಾರಿಗೆ ಹೋಗಿ ಮಜಾಮಾಡಿದರು. ಅಲ್ಲಿಯೂ ಸರಿಯಾಗಿ ಲಾಕ್​ಡೌನ್​ ಮಾಡಲಿಲ್ಲ. ಹೀಗಾಗಿ 25 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇಂಡಿಯಾದಲ್ಲಿ ಲಾಕ್​ಡೌನ್ ಮಾಡಿದರಿಂದ ಸಾವಿನ ಸಂಖ್ಯೆ ಸಾವಿರ ಮಾತ್ರ ದಾಟಿದೆ. ಲಾಕ್​ಡೌನ್​ ಕೆಲಸ ಮಾಡಿದೆ ಎಂಬುದು ಸಾಬೀತಾಗಿದೆ ಎಂದರು.
ಇದನ್ನೂ ಓದಿ:ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ ಹಿಂದು ಮಹಿಳೆ ಮೇಲೆ ಆರ್​ಎಸ್​ಎಸ್ ಹಲ್ಲೆ​ ನಡೆಸಿತೇ?: ಫ್ಯಾಕ್ಟ್​ಚೆಕ್​​ನಲ್ಲಿ ಸತ್ಯಾಂಶ ಬಹಿರಂಗ
ಇದನೆಲ್ಲವನ್ನು ಬಿಟ್ಟು ಬಸ್ ಬಿಡಿ ,ಟ್ರೈನ್ ಬಿಡಿ, ವಿಮಾನ ಬಿಡಿ ಎಂದು ಸರ್ಕಾರಕ್ಕೆ ಹೇಳೋಕೆ ಆಗುತ್ತಾ? ಎಂದು ರೈತರನ್ನು ಪ್ರಶ್ನಿಸಿ ಲಾಕ್​ಡೌನ್ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಸರ್ಮರ್ಥಿಸಿಕೊಂಡರು.
ನಿಮಗೆಲ್ಲ ಏನಾಗಿದೆ? ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದರ ಜತೆ ನಾವು ಇರಬೇಕು. ಸರ್ಕಾರ ಅಕ್ಕಿ ಕೊಟ್ಟಿದೆ. ಒಂದು ಮನೆಗೆ 50 ಕೆಜಿ ಅಕ್ಕಿ ಸಿಗುತ್ತದೆ. ನಮ್ಮ ಕೈಲಾಗಿದ್ದು ತಂದು ಕೊಡುತ್ತೇವೆ. ಅಚ್ಚುಕ್ಕಟ್ಟಾಗಿ ದೋಸೆ ಬಿಡ್ಕಂಡು, ಇಡ್ಲಿ ಮಾಡ್ಕಂಡು, ಅನ್ನ ಮಾಡ್ಕೊಂಡು ಉಣ್ಣದು ಕಲಿತುಕೊಳ್ಳಿ ಎಂದು ಗ್ರಾಮೀಣ ಶೈಲಿಯಲ್ಲೇ ಹಳ್ಳಿಗಳಿಗೆ ಹೋಗಿ ಶಿವಲಿಂಗೇಗೌಡರು ಜಾಗೃತಿ ಮೂಡಿಸಿದರು.
ಇದನ್ನೂ ಓದಿ:ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು
https://www.facebook.com/VVani4U/videos/2573134102792249/
VIDEO| ಕರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಗ್ರಾಮದ ಜನರ ಹಿತ ಕಾಯಲು ಮನೆಯನ್ನೇ ಅಡವಿಟ್ಟ ಗ್ರಾಪಂ ಸದಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
