ಕಲಬುರಗಿ: ಜಾಗತಿಕವಾಗಿ ಎಲ್ಲರನ್ನೂ ಚಿಂತೆಗೀಡುಮಾಡಿರುವ ಕರೋನಾ ವೈರಸ್​ Covid19 ಸೋಂಕು ತಗುಲಿ ತಂದೆ ಮಹ್ಮದ್ ಹುಸೇನ್ ಸಿದ್ಧಿಕಿ ಸಾವನ್ನಪ್ಪಲು ವೈದ್ಯರ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸುವ ಮೂಲಕ ಖಾಜಿ ಹಾಮೀದ್ ಫೈಸಲ್ ಸಿದ್ಧಿಕಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸರ್ಕಾರಿ ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ತಂದೆ ಸಿದ್ಧಿಕಿ ಜ.20ರಂದು ಸೌದಿಯ ಉಮ್ರಾನ್​ಗೆ ತೆರಳಿ ಸಹೋದರನ ಮನೆಯಲ್ಲಿದ್ದರು. ಫೆ.29ರಂದು ಯಾತ್ರೆ ಮುಗಿಸಿ ಕಲಬುರಗಿಗೆ ಮರಳಿದ್ದರು. ಮಾರ್ಚ್​ 6ರಂದು ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಾಗ ಕುಟುಂಬ ವೈದ್ಯರಲ್ಲಿ ತೋರಿಸಿದೆವು. ಜ್ವರ ಹೆಚ್ಚಾದಾಗ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ಅವರ ಔಷಧ ಹಿಡಿಯಲಿಲ್ಲ. ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿಸಿದೆವು. ಒಂದು ದಿನ ನಂತರ ಅವರೂ ಹೈದರಾಬಾದ್​ಗೆ ಕರೆದೊಯ್ಯುವಂತೆ ಸೂಚಿಸಿದರು.
ಸೌದಿಯಿಂದ ವಾಪಸಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಹೈದರಾಬಾದಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಅಂತೂ ಇಂತು ಸುಳ್ಳು ಹೇಳಿ ಕೇರ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಯಿತು. ಅಡ್ಮಿಟ್ ಆದ ಎರಡು ಗಂಟೆಯಲ್ಲಿ ಅವರಿಗೂ ವಿಷಯ ಗೊತ್ತಾಗಿ ತಂದೆಯನ್ನು ಹೊರಗೆ ಕಳುಹಿಸಿದರು. ಅನಿವಾರ್ಯವಾಗಿ ಕಲಬುರಗಿ ಜಿಮ್ಸ್​ಗೆ ಕರೆತರಲಾಯಿತು. ವೈದ್ಯರು ತಪಾಸಣೆ ಮಾಡುವಷ್ಟರಲ್ಲೇ ಕೊನೆಯುಸಿರೆಳೆದಿದ್ದರು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್​: ಒಂದು ವಾರ ಕರ್ನಾಟಕ ಬಂದ್​- ಆರೋಗ್ಯ ತುರ್ತುಪರಿಸ್ಥಿತಿ: ಸಿಎಂ ಯಡಿಯೂರಪ್ಪ ಅವರ ಪತ್ರಿಕಾಗೋಷ್ಠಿ ವಿಡಿಯೋ ಇಲ್ಲಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − four =
Remember me
