ವೇಣುವಿನೋದ್ ಕೆ.ಎಸ್.
ಮಂಗಳೂರು:ಮುಂಬೈ ಸಹಿತ ನಾಡಿನ ಹಲವೆಡೆ ಅಧಿಕ ಬೇಡಿಕೆ ಹೊಂದಿರುವ ಉಡುಪಿ ಜಿಲ್ಲೆಯ ಕಾರ್ಕಳದಲ್ಲೇ ಹೆಚ್ಚು ಬೆಳೆಯಲಾಗುವ ಕಾರ್ಕಳ ಕಜೆ ಅಕ್ಕಿ ಈಗ ಬ್ರ್ಯಾಂಡಿಂಗ್ ಆಗುವ ಹಂತಕ್ಕೆ ತಲುಪಿದೆ.
ಕಾರ್ಕಳ ಕಜೆ ವೈಶಿಷ್ಟ್ಯ
*ಅನ್​ಪಾಲಿಷ್ಡ್ ಅಕ್ಕಿಗೆ ತುಂಬಾ ಬೇಡಿಕೆ
*ಭತ್ತ ಅಡ್ಡ ಬೀಳುವುದಿಲ್ಲ, ಕಾಂಡ ಗಟ್ಟಿ
*ಇದರ ಬೈಹುಲ್ಲೂ ಜಾನುವಾರುಗಳಿಗೆ ಇಷ್ಟ, ಪ್ರೊಟೀನ್ ಅಂಶವೂ ಜಾಸ್ತಿ
ಕುಚ್ಚಲು ಅಕ್ಕಿ ಕರಾವಳಿಗರಿಗೆ ಅಚ್ಚುಮೆಚ್ಚು. ಅದರಲ್ಲೂ ಕಜೆ ಇರುವ ಅಕ್ಕಿಗೆ ಬೇಡಿಕೆ ಜಾಸ್ತಿ. ಆರೋಗ್ಯಕ್ಕೂ ಅದು ಪೂರಕ, ಬೇಗ ಜೀರ್ಣವಾಗುತ್ತದೆ ಎಂಬ ವಾದವೂ ಇದೆ. 500ಕ್ಕೂ ಹೆಚ್ಚು ಕೃಷಿಕರು ಇದನ್ನು ಕಾರ್ಕಳ ಆಸುಪಾಸಿನಲ್ಲಿ ಬೆಳೆಯುತ್ತಿದ್ದು, ಮಿಲ್​ಗಳಲ್ಲಿ ಬೇರೆ ತಳಿಯೊಂದಿಗೆ ಮಿಶ್ರ ಆಗುವುದರಿಂದ ಅಸಲಿ ಕಾರ್ಕಳ ಕಜೆ ಸಿಗುತ್ತಿಲ್ಲ. ಈ ಕಾರಣಕ್ಕಾಗಿ ಬ್ರ್ಯಾಂಡಿಂಗ್ ಮಾಡಲು ಮುಂದಾಗಿದ್ದೇವೆ ಎನ್ನುತ್ತಾರೆ ಕಾರ್ಕಳ ನಿಟ್ಟೆಯ ಪ್ರಗತಿಪರ ಕೃಷಿಕ ಹಾಗೂ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ನವೀನ್​ಚಂದ್ರ ಜೈನ್.
ಇದನ್ನೂ ಓದಿ:‘ಮತ್ತೆ ಬರ್ತಿದ್ದಾರೆ ಚಿರು ಎಂದ್ರು ಮೇಘನಾ…’: ಇದು ಮಗುವಿಗೆ ಸಂಬಂಧಪಟ್ಟದ್ದಲ್ಲ, ಇನ್ನೊಂದು ಸಿಹಿ ಸಮಾಚಾರ
ರೈತರನ್ನು ಸೇರಿಸಿ ಬ್ರ್ಯಾಂಡಿಂಗ್:ಕೆ.ಜಿ.ಗೆ 20 ರೂ.ನಂತೆ ಕಜೆ ಭತ್ತವನ್ನು ಮಿಲ್​ನವರು ಖರೀದಿಸುತ್ತಾರೆ, ಬೇರೆ ತಳಿಗಳನ್ನು ಕಡಿಮೆಗೆ ಖರೀದಿಸಿ ಎಲ್ಲವನ್ನೂ ಮಿಶ್ರ ಮಾಡುವುದರಿಂದ ಒರಿಜಿನಲ್ ಕಜೆ ಕಾರ್ಕಳ ಸಿಗುತ್ತಿಲ್ಲ. ಹಾಗಾಗಿ ನಾವೇ ಈಗಾಗಲೇ 260 ಮಂದಿಯನ್ನು ಸಂರ್ಪಸಿ ಸಹಕಾರ ಕೇಳಿದ್ದೇವೆ. ಸದ್ಯ ಮುಂಡ್ಕೂರಿನ ಒಬ್ಬ ಮಿಲ್ ಮಾಲೀಕರು ಕಾರ್ಕಳ ಕಜೆ ಬ್ರ್ಯಾಂಡ್ ಮಾಡಿಕೊಡುವುದಕ್ಕೂ ಒಪ್ಪಿದ್ದಾರೆ ಎಂದು ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ:ವೆಹಿಕಲ್​ ಫಿಟ್​ನೆಸ್ ಸರ್ಟಿಫಿಕೇಟ್ ತಗೊಳ್ಳೋಕೆ ಇನ್ನು ಪರದಾಡಬೇಕಾಗಿಲ್ಲ !
ಕನಿಷ್ಠ 5 ಸಾವಿರ ಕ್ವಿಂಟಾಲ್ ಕಾರ್ಕಳ ಕಜೆ ಭತ್ತ ಸಿಕ್ಕಿದರೆ, ಅದರಲ್ಲಿ 3500 ಕ್ವಿಂಟಾಲ್ ಅಕ್ಕಿ ಸಿಗಲಿದೆ. ಕಾರ್ಕಳ ಬ್ರ್ಯಾಂಡ್​ಗೆ ಬೇಕಾದ ಮೌಲ್ಡ್ ತಯಾರಿಸಿ, ಗೋಣಿಚೀಲಗಳನ್ನು ಮುದ್ರಿಸುವುದಕ್ಕೆ ಸುಮಾರು 2 ಲಕ್ಷ ರೂ. ವೆಚ್ಚವಿದೆ. ಅದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ನವೆಂಬರ್​ಗೆ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಕೃಷಿಕರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಕಾರ್ಕಳ ಬ್ರ್ಯಾಂಡ್ ಅಕ್ಕಿಗೆ ಉತ್ತೇಜನ ನೀಡುವ ಮನಸ್ಸಿದೆ. ಹಾಗಾಗಿ ಎರಡು ಬಾರಿ ಮೀಟಿಂಗ್ ಮಾಡಲಾಗಿದೆ, ಇದೊಂದು ಉತ್ತಮ ಯೋಚನೆ. ಬ್ರ್ಯಾಂಡಿಂಗ್ ಆದಲ್ಲಿ, ಸಂಘದ ಮೂಲಕವೇ ಭತ್ತ ಖರೀದಿಯಾಗುತ್ತದೆ.-ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ
ಸ್ಥಳೀಯವಾಗಿ ಜನರಿಂದ ಬೇಡಿಕೆಯುಳ್ಳ ಅಕ್ಕಿ ಕಾರ್ಕಳ ಕಜೆ. ಅದನ್ನು ಬ್ರ್ಯಾಂಡ್ ಮಾಡುವ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಹಾಗೂ ಅಗತ್ಯವಿರುವವರಿಗೆ ಶುದ್ಧ ಕಜೆಯ ಲಭ್ಯತೆ ಸಿಗುವಂತೆ ಮಾಡುವುದಕ್ಕೆ ಶಾಸಕರ ನೆರವಿನೊಂದಿಗೆ ಈ ಯೋಜನೆ ಹಮ್ಮಿಕೊಂಡಿದ್ದೇವೆ.– ನವೀನ್​ಚಂದ್ರ ಜೈನ್, ನಿಟ್ಟೆ, ಕೃಷಿಕರು
ಮಹಾರಾಷ್ಟ್ರದಲ್ಲಿ ಶೀಘ್ರವೇ ನಡೆಯಲಿದೆ ರಾಜಕೀಯ ಸಂಚಲನ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸುಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + two =
Remember me
