ಬೆಂಗಳೂರು:ತಮ್ಮ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ಕಾನೂನು ದೌರ್ಜನ್ಯ ನಡೆಸುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ 24/7 ಸಹಾಯವಾಣಿಯನ್ನು‌ ಆರಂಭಿಸಿದೆ. ಬಿಜೆಪಿ ಕಾರ್ಯಕರ್ತರಿಗೆ ಏನಾದರೂ ತೊಂದರೆಯಾದರೆ, ಈ ಸಹಾಯವಾಣಿ ನಂ. 18003091907 ಕರೆ ಮಾಡಬಹುದಾಗಿದೆ.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು (ಜೂ.10)‌ ನಡೆದ ಕಾರ್ಯಕ್ರಮದಲ್ಲಿ ಸಹಾಯವಾಣಿ ನಂಬರ್​ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ:ಪಾಕಿಸ್ತಾನಿ ವಿಮಾನದ ಆಕಾರ ಹೋಲುವ ಬಲೂನ್ ಜಮ್ಮು-ಕಾಶ್ಮೀರದಲ್ಲಿ ಪತ್ತೆ; ತನಿಖೆ ಆರಂಭ
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಹೋರಾಟದ ಮೂಲಕವೇ ಬಿಜೆಪಿ‌ ಈ ಹಂತಕ್ಕೆ ಬಂದು ನಿಂತಿದೆ. ಹಿಂದಿನಿಂದಲೂ ಈ ಪಾರ್ಟಿಯನ್ನು ದಮನ ಮಾಡಲು ಯತ್ನಿಸಿದರು. ಯಾವುದೇ ಕಾರಣಕ್ಕೂ ನಾವು ವಿಶ್ವಾಸ ಕಳೆದುಕೊಳ್ಳಲ್ಲ. ಈ ಸರ್ಕಾರ, ಪೊಲೀಸ್‌ ಬಳಸಿ ದೌರ್ಜನ್ಯ ಎಸಗಿದರೆ ಸಹಾಯವಾಣಿ ನಂಬರ್​ಗೆ ಕರೆ ಮಾಡಿ, ನಮ್ಮ‌ ವಕೀಲರು ನಿಮ್ಮ ಸಹಾಯಕ್ಕೆ ಬರುತ್ತಾರೆ ಎಂದರು.
ಬಿಜೆಪಿ ಕಾರ್ಯಕರ್ತರ ಹಕ್ಕುಗಳ ರಕ್ಷಣೆಗಾಗಿ‌ ಸಹಾಯವಾಣಿ ಆರಂಭಿಸೋದಾಗಿ ಹೇಳಿದ್ದೆವು. ಕಾನೂನು ರಕ್ಷಣೆಗೆ‌ ನೂರಕ್ಕೂ ಹೆಚ್ಚು ವಕೀಲರು ಮುಂದೆ ಬಂದಿದ್ದಾರೆ. ದ್ವೇಷದ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿಶೀಟ್ ಓಪನ್ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವವರಿಗಾಗಿ ಈ ಸಹಾಯವಾಣಿ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಅವರ ಕಾರ್ಯವೈಖರಿ ಟೀಕಿಸಿದ್ದಕ್ಕೇ ಪ್ರಕರಣ ದಾಖಲಿಸಲಾಯಿತು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ಈ ಸರ್ಕಾರದ ಕೆಲವು ಮಂತ್ರಿಗಳು ನೈತಿಕ ಪೊಲೀಸ್ ಗಿರಿ ಸಹಿಸೋದಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದ ಗೃಹ ಮಂತ್ರಿಗಳೇ ಕರಾವಳಿ ಭಾಗದಲ್ಲಿ ಟಾಸ್ಕ್ ಫೋರ್ಸ್ ರಚಿಸುತ್ತೇವೆ ಅಂದಿದ್ದಾರೆ. ಇದೆಲ್ಲ ದ್ವೇಷ ರಾಜಕಾರಣ ಮುನ್ಸೂಚನೆ. ಹೀಗಾಗಿ ನಾವು ಎದೆಗುಂದದೆ ಪೊಲೀಸ್ ಸ್ಟೇಷನ್‌ ಒಳಗಡೆ, ಕೋರ್ಟಿನಲ್ಲಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ:ವಿಮಾನ ಪತನ: ಅಮೆಜಾನ್​ ಕಾಡಲ್ಲಿ ಮೃತದೇಹಗಳ ಮಧ್ಯೆ ಬದುಕುಳಿದಿದ್ದ ನಾಲ್ವರು ಮಕ್ಕಳು 40 ದಿನಗಳ ಬಳಿಕ ಪತ್ತೆ
ಪಠ್ಯ ಪುಸ್ತಕ ಬದಲಾವಣೆ ವಿಚಾರವಾಗಿ ಮಾತನಾಡಿ, ಕಳೆದ‌ ಒಂದು ವಾರದಿಂದ ರಾಜ್ಯದಲ್ಲಿ ಆರ್​ಎಸ್ಎಸ್ ಸಂಸ್ಥಾಪಕರ ಪಠ್ಯವನ್ನು ತೆಗೆಯುವ ಪ್ರಯತ್ನ‌ ನಡೆಯುತ್ತಿದೆ. ಹೆಡ್ಗೇವಾರ್ ಬಗ್ಗೆ ಪಾಠ ಇದೆ ಅಂದರೆ ಸತ್ಯ, ಇತಿಹಾಸ ಜನರಿಗೆ ತಿಳಿಯಲಿದೆ. ಅದನ್ನು ತೆಗೆದು ಹಾಕಿ, ಕಾಗಕ್ಕ, ‌ಗೂಬಕ್ಕ ಇತಿಹಾಸವನ್ನೇ ಓದಿಸೋಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠ ಚಾಲಕ ಯೋಗೇಂದ್ರ ಹೂಡಘಟ್ಟ ಉಪಸ್ಥಿತರಿದ್ದರು.(ದಿಗ್ವಿಜಯ ನ್ಯೂಸ್​)
ಡೇಟಿಂಗ್​​ ಆ್ಯಪ್​ನಲ್ಲಿ ಪರಿಚಯವಾದ ಯುವಕನನ್ನು ನಂಬಿ ದೇಹ ಅರ್ಪಿಸಿದ ಯುವತಿಗೆ ಸಾಲು ಸಾಲು ಆಘಾತ!

ಡೇಟಿಂಗ್​​ ಆ್ಯಪ್​ನಲ್ಲಿ ಪರಿಚಯವಾದ ಯುವಕನನ್ನು ನಂಬಿ ದೇಹ ಅರ್ಪಿಸಿದ ಯುವತಿಗೆ ಸಾಲು ಸಾಲು ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 4 =
Remember me
