ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಮುಂಗಡಪತ್ರ ಮಂಡನೆ ಆರಂಭಿಸಿದ ಬೆನ್ನಲ್ಲೇ, ಬಜೆಟ್​ನ ಮುದ್ರಿತ ಪ್ರತಿ ಹಂಚಿಕೆ ಮಾಡುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು.
ಇದರ ನಡುವೆಯೇ ಬಜೆಟ್ ಭಾಷಣ ಮುಂದುವರಿಸಿದ ಸಿಎಂ ಯಡಿಯೂರಪ್ಪ ಅವರ ಗಮನಸೆಳೆದ ಪ್ರತಿಪಕ್ಷ ಸದಸ್ಯರು, ಮುಂಗಡಪತ್ರದ ಮುದ್ರಿತ ಪ್ರತಿ ಹಂಚಿಕೆ ಮಾಡಬೇಕು ಎಂದು ಪಟ್ಟು ಹಿಡಿದರು. ಇದೇ ವೇಳೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಕ್ರಿಯಿಸಿ, ಸಿಎಂ ಮುಂಗಡ ಪತ್ರದ ಪ್ರತಿ ಹಂಚುವಂತೆ ಹೇಳಿದ್ದಾರೆ. ಹಂಚುತ್ತೇವೆ. ಭಾಷಣ ಮುಂದುವರಿಸಲು ಬಿಡಿ. ಇದನ್ನು ವಿವಾದ ಮಾಡಬೇಡಿ. ಸ್ಪೀಕರ್ ಆಗಿ ನನ್ನ ಅಧಿಕಾರವನ್ನೂ ಬಳಸಿ ಪ್ರತಿಯನ್ನು ಹಂಚಿಕೆ ಮಾಡುತ್ತೇವೆ ಎಂದರು.
ಇನ್ನೊಂದೆಡೆ ಸಿಎಂ ಯಡಿಯೂರಪ್ಪ ಅವರು ಕೂಡಲೇ ಪ್ರತಿಯನ್ನು ನೀಡುವಂತೆ ಹೇಳಿದರಲ್ಲದೆ, ಪತ್ರಕರ್ತರಿಗೂ ಬಜೆಟ್ ಭಾಷಣ ಕೇಳುವಂತೆ ಹೇಳಿದ್ದು ಕಂಡುಬಂತು.
ಕಳೆದ ಸಲ ಬಜೆಟ್ ಮಂಡಿಸುವಾಗಲೂ ಬಾಷಣದ ವೇಳೆ ಮುದ್ರಿತ ಪ್ರತಿ ಹಂಚಲಾಗಿರಲಿಲ್ಲ. ಮುಖ್ಯಮಂತ್ರಿಗಳ ಭಾಷಣ ಮುಗಿಯುತ್ತಿದ್ದಂತೆ ಪ್ರತಿಯನ್ನು ಹಂಚಿದ್ದರು ಎಂಬ ಅಂಶವನ್ನು ಅನೇಕರು ಹೇಳಿದ್ದು ಕೇಳಿಸಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
