ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನ ‘ನಾಮಪತ್ರದ ಜತೆ ಕೊಡಬೇಕಾದ 10 ಸಾವಿರ ರೂ. ಠೇವಣಿ ಹಣ ಯಾರು ಕೊಡ್ತೀರಿ’ ಎಂದು ಪ್ರಶ್ನಿಸಿದ ಪ್ರಸಂಗ ನಡೆಯಿತು.
ನಾಮಪತ್ರ ಸಲ್ಲಿಸುವುದಕ್ಕೆ ಹೋಗುವ ಮುನ್ನ ಕೆಪಿಸಿಸಿ ಕಚೇರಿಗೆ ಬಂದ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಬಿ ಫಾರ್ಮ್ ಸ್ವೀಕರಿಸಿದರು. ಆಗ ‘ನೀವೇ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೀರಿ. ನಾಮಪತ್ರ ಸಲ್ಲಿಸುವಾಗ ಅದರ ಜತೆ 10 ಸಾವಿರ ರೂ. ಠೇವಣಿ ದುಡ್ಡು ಕೊಡಬೇಕಲ್ಲ, ಯಾರು ಕೊಡ್ತೀರಿ’ ಎಂದು ನೇರವಾಗಿ ಲಘುಧಾಟಿಯಲ್ಲಿ ಪ್ರಶ್ನಿಸಿದರು.
ಇದನ್ನೂ ಓದಿಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರೀಗ ಫುಲ್​ ಖುಷ್! ಕಾರಣ ಇಲ್ಲಿದೆ ನೋಡಿ…
ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನಾನು ಕೊಡ್ತೀನಿ’ ಎಂದು ಕಿಸೆಗೆ ಕೈ ಹಾಕಿಕೊಂಡರು. ಆದರೆ ಕಿಸೆಯಲ್ಲಿ ದುಡ್ಡಿರಲಿಲ್ಲ. ಪಕ್ಕದಲ್ಲೇ ಇದ್ದ ದಿನೇಶ್ ಗುಂಡೂರಾವ್ ಅವರತ್ತ ನೋಡಿದರು. ಆಗ ದಿನೇಶ್, ‘ನಾನು ಕೊಡ್ತೀನಿ ಇರಿ’ ಎಂದು ಜೇಬು ತಡಕಾಡಿಕೊಂಡರು.
ಅಚ್ಚರಿಯೆಂದರೆ ಅವರ ಜೇಬಲ್ಲೂ ದುಡ್ಡಿರಲಿಲ್ಲ! ‘ಸ್ವಲ್ಪ ತಡೀರಿ, ಇಲ್ಲೇ ಕೊಡಿಸ್ತೀನಿ’ ಎಂದು ಹೇಳಿ ಅಕ್ಕಪಕ್ಕ ಇದ್ದ ಕಾರ‌್ಯಕರ್ತರ ಬಳಿ ವಿಚಾರಿಸಿದರು. ಕೊನೆಗೂ ಕಾರ‌್ಯಕರ್ತರೊಬ್ಬರು ಹಣ ನೀಡಿದರು. ನಂತರ ಖರ್ಗೆ ಮತ್ತು ಇತರ ಎಲ್ಲ ನಾಯಕರು ನಗುತ್ತ ನಾಮಪತ್ರ ಸಲ್ಲಿಸಲು ಹೋದರು.
ಖರ್ಗೆ ನಾಮಪತ್ರ- ಜೆಡಿಎಸ್​ ಬೆಂಬಲದ ವಿಚಾರದ ಕುರಿತು ನಾಯಕರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 1 =
Remember me
