ಹಾವೇರಿ:ಮನಕಲುಕುವ ಘಟನೆ ಒಂದರಲ್ಲಿ ಅಜ್ಜಿಯೊಬ್ಬರನ್ನು ಉಳಿಸಲು ಕೆಎಸ್​ಆರ್​ಟಿಸಿ ಬಸ್ ಚಾಲಕನೋರ್ವ ನದಿಗೆ ಹಾರಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಬಳಿ ನಡೆದಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಕುಮದ್ವತಿ ನದಿಗೆ ಅಜ್ಜಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿರುವ ಕುಮದ್ವತಿ ನದಿಗೆ ಹಾರಿದ್ದಾರೆ. ಅದೇ ವೇಳೆ ಮಜೀದಸಾಬ್ ಗುಬ್ಬಿ ಎಂಬ ಕೆಎಸ್​ಆರ್​​ಟಿಸಿ ಡ್ರೈವರ್​ ರಟ್ಟಿಹಳ್ಳಿಯಿಂದ ಹಿರೇಕೆರೂರಿಗೆ ಬಸ್ ಓಡಿಸಿಕೊಂಡು ಹೋಗುತ್ತಿದ್ದರು.
ಇದನ್ನೂ ಓದಿ:ನಾಯಕನಾದ ಮೊದಲ ಪಂದ್ಯದಲ್ಲೇ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸೂರ್ಯಕುಮಾರ್
ವೃದ್ದೆ ನೀರಿಗೆ ಜಿಗಿದಿದ್ದನ್ನು ಗಮನಿಸಿದ ಚಾಲಕ ಕೂಡಲೇ ಚಾಲಕ ಬಸ್​ಅನ್ನು ನಿಲ್ಲಿಸಿ ಅಜ್ಜಿಯನ್ನು ಕಾಪಾಡಲು ಜೀವದ ಹಂಗು ತೊರೆದು ಜಿಗಿದಿದ್ದಾರೆ. ಈಜಿಕೊಂಡು ಹೋಗಿ ಅಜ್ಜಿಯ ದೇಹವನ್ನು ನದಿಯ ದಂಡೆಗೆ ಎಳೆದುಕೊಂಡು ಬಂದಿದ್ದಾರೆ. ಕೂಡಲೇ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನೂ ಜೀವದ ಹಂಗು ತೊರೆದು ಅಜ್ಜಿಯನ್ನು ಕಾಪಾಡಲು ನದಿಗೆ ಹಾರಿದ ಡ್ರೈವರ್ ಮಜೀದಸಾಬ್ ಗುಬ್ಬಿಯವರ ಪ್ರಯತ್ನಕ್ಕೆ ಜನರು ಹಾಗೂ ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದು,  ಮಜೀದಸಾಬ್​ ನದಿಗೆ ಜಿಗಿದಾಗ ಅವರ ಅಜ್ಜಿಯನ್ನುಳಿಸುವ ಪ್ರಯತ್ನಕ್ಕೆ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಮಜೀದಸಾಬ್ ಅವರ ಮೆರೆದ ಮಾನವೀಯತೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಆತ್ಮಹತ್ಯೆಗೆ ಮುಂದಾದ ವೃದ್ಧೆ ಯಾರು ಏನು ಎಂಬುದು ಸ್ಪಷ್ಟವಾಗಿಲ್ಲ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲೆಗೊಂಡಿದ್ದು, ಅಜ್ಜಿಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
