ಬೆಂಗಳೂರು:ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಕಳೆದುಕೊಂಡು, ಟಿಕೆಟ್ ತನಿಖಾ ಅಧಿಕಾರಿಗಳ ಕೈಗೆ ಸಿಕ್ಕರೆ ಇನ್ನು ದಂಡ ಪಾವತಿಸುವ ಹಾಗಿಲ್ಲ!
ಹೌದು ಇಂತಹ ಒಂದು ಆದೇಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ ಟಿಕೆಟ್​ನ್ನು ಪಡೆದು ಕಳೆದುಕೊಂಡಿದ್ದರೆ, ಅಂತಹ ಪ್ರಯಾಣಿಕರಿಗೆ ದಂಡ ವಿಧಿಸುವಂತಿಲ್ಲ. ಹಾಗೂ ನಿರ್ವಾಹಕನಿಗೂ ದಂಡ ವಿಧಿಸುವಂತಿಲ್ಲ.
ಬದಲಾಗಿ ಮತ್ತೊಂದು ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೂ ಮುನ್ನ ತನಿಖಾಧಿಕಾರಿಗಳು ಆತ ಟಿಕೆಟ್​ ಪಡೆದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಇದು ಮುಂಗಡ ಕಾಯ್ದಿರಿಸಿದ ಟಿಕೆಟ್​ ಆಗಿದ್ದರೆ ಚಾರ್ಟ್​ನಿಂದ ಅಥವಾ ಇಟಿಎಂ ಮಷಿನ್​ನಿಂದ ಟಿಕೆಟ್​ ಪಡೆದಿದ್ದರೆ ಮಷಿನ್​ನಿಂದ ಖಾತರಿ ಪಡಿಸಿಕೊಳ್ಳಬೇಕು.
ಹೀಗೆ ಖಾತರಿ ಪಡಿಸಿಕೊಂಡ ಮೇಲೆ ಪ್ರಯಾಣಿಕ ಟಿಕೆಟ್​ ಪಡೆದಿದ್ದರೆ, ಆ ಸ್ಥಳದಿಂದ ಆತ ತೆರಳಲಿರುವ ಸ್ಥಳಕ್ಕೆ ಟಿಕೆಟ್​ ನೀಡಿ, ಅದರ ಹಣ ಪಡೆಯಬೇಕು ಎಂದು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ನಿರ್ವಾಹಕನಿಗೂ ದಂಡ ವಿಧಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ ಸುತ್ತೋಲೆಯನ್ನು ನಿಗಮದ ಎಂಡಿ ಶಿವಯೋಗಿ ಕಳಸದ ಹೊರಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
