ಬೀದರ್:ಇಲ್ಲೊಬ್ಬ ಭೂ ಅಧೀಕ್ಷಕ, ಸರ್ಕಾರಿ ಕಚೇರಿಯಿ ಹೊರಗೆ ಲಂಚ ಕೇಳಿದ್ರೆ ಸೇಫ್​ ಅಂದುಕೊಂಡಿದ್ದ ಎನಿಸುತ್ತೆ. ಭೂ ಅಧೀಕ್ಷಕ ಚಿತ್ತಣ್ಣ ಪಾಟೀಲ್, ಭೂ ಸರ್ವೇ ಸಂಬಂಧ ರೈತರನಿಂದ ಲಂಚ ಕೇಳಿದ್ದ. ಆದರೆ ಇದರ ವಾಸನೆ ಹಿಡಿದ ಲೋಕಾಯುಕ್ತರು ಈತನನ್ನು ಬಂಧಿಸಿದ್ದಾರೆ.
ಬೀದರನ ಭಾಲ್ಕಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಪಟ್ಟಣದ ಹೊರವಲಯದ ಢಾಬಾ ಒಂದರಲ್ಲಿ ಜಮೀನು ಸರ್ವೇ ಸಂಬಂಧ ರೈತನಿಂದ 40 ಸಾವಿರ ಬೇಡಿಕೆ ಇಟ್ಟಿದ್ದ. ಕಡೆಗೆ 5 ಸಾವಿರ ರೂಪಾಯಿ ನಗದು ಹಣ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಿದ್ದರು.

ಆರೋಪಿಯು ತಾಲ್ಲೂಕಿನ ಲಖನಗಾಂವ ಗ್ರಾಮದ ರೈತ ಸಂಜೀವಕುಮಾರ ಚಂದ್ರಕಾಂತ ರಿಂದ ಹೊಲ ಸರ್ವೇಗಾಗಿ ಸುಮಾರು 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ 15 ಸಾವಿರ ರೂಪಾಯಿ ಲಂಚಕ್ಕೆ ಒಪ್ಪಿದ್ದರು. ಭಾನುವಾರ 5 ಸಾವಿರ ರೂಪಾಯಿ ಹಣ ಮುಂಗಡ ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ನೀಲಪ್ಪ ಓಲೇಕಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿ ಚಿತ್ತಣ್ಣ ಅವರನ್ನು ಬಂಧಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + two =
Remember me
