ಬೆಂಗಳೂರು:ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ನವವಿವಾಹಿತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಚೇತನ್ (25) ಕೊಲೆಯಾದವ. ಎರಡು ತಿಂಗಳ ಹಿಂದಷ್ಟೇ ಭೂಮಿಕಾ ಜತೆ ಚೇತನ್​ ಮದುವೆ ಆಗಿದ್ದ. ಪ್ರೀತಿಸಿ ಮದ್ವೆ ಆಗಿದ್ದ ಇವರಿಬ್ಬರೂ ಲಗ್ಗೆರೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಬರ್ತ್​ ಡೇಗೆ ವಿಶ್​ ಮಾಡೋ ನೆಪದಲ್ಲಿ ಮನೆಗೆ ಮಂಗಳವಾರ ಚೇತನ್​ ಮನೆಗೆ ಭೂಮಿಕಾಳ ತಮ್ಮ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಬಂದಿದ್ದರು. ತಮ್ಮ-ಚಿಕ್ಕಪ್ಪನೇ ತನ್ನ ಗಂಡನ್ನು ಪ್ರಾಣ ತೆಗೆಯುತ್ತಾರೆ ಎಂದು ಕನಸಲ್ಲೂ ಎಣಿಸದ ಭೂಮಿಕಾ, ತವರಿನವರು ಮನೆ ಬಂದ ಖುಷಿಯಲ್ಲಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ.ಇದನ್ನೂ ಓದಿರಿನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ
ಭೂಮಿಕಾ ಮತ್ತು ಚೇತನ್​ ಪ್ರೀತಿ ಮಾಡಿ ಮದ್ವೆ ಆಗಿದ್ದು ಆಕಾಶ್-ನಂಜೇಗೌಡ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೆ ಭೂಮಿಕಾ ಮೊದಲ ಗಂಡನನ್ನ ಬಿಟ್ಟು ಚೇತನ್​ ಜತೆ ಬಂದಿದ್ದಳು. ಇದೇ ವಿಚಾರಕ್ಕೆ ಚೇತನ್​ ಮೇಲೆ ಸೇಡು ತೀರಿಸಿಕೊಳ್ಳಲೆಂದು ಸಂಚು ರೂಪಿಸಿದ್ದ ಅವರು, ಮಂಗಳವಾರ ಮಧ್ಯಾಹ್ನ ಚೇತನ್ ಕುತ್ತಿಗೆಯನ್ನ ಚಾಕುವಿನಿಂದ ಕೊಯ್ದು ಹತ್ಯೆ ಮಾಡಿದ್ದಾರೆ.
ಬಾಮೈದ ಹಾಗೂ ಮಾವನಿಂದಲೇ ಕೊಲೆಯಾದ ಚೇತನ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಾಜಗೋಪಾಲ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ

ಸುಂದರಿ ಮೋಹಕ್ಕೆ ಸಿಲುಕಿದ್ದ ಗಂಡನಿಂದಲೇ ಗರ್ಭಿಣಿ ಕೊಲೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಗ್ರಾಪಂ ಸದಸ್ಯೆ ಮಗನ ಕಗ್ಗೊಲೆ: ಮನೆ ಬಾಗಿಲಿಗೆ ಬಂದ ಸೋತ ಅಭ್ಯರ್ಥಿ ಗುಂಪಿನಿಂದಲೇ ಕೃತ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 1 =
Remember me
