ಗದಗ:ಪ್ರೇಮವಿವಾಹವಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ಈ ಜೋಡಿಯ ದಾಂಪತ್ಯದಲ್ಲಿ ಬಿರುಗಾಳಿ ಎದ್ದಂತಾಗಿದೆ. ಪತಿಯ ಕಣ್ಣಿಗೆ ಕಾರದಪುಡಿ ಎರಚಿದ್ದಲ್ಲದೆ, ಪತ್ನಿಯನ್ನು ಹೊತ್ತೊಯ್ಯಲಾಗಿದೆ. ಗದಗದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಗದಗದ ಡಿಸಿ ಮಿಲ್ ಪ್ರದೇಶದಲ್ಲಿ ಘಟನೆ ನಡೆದಿದೆ. ಗದಗದ ಅಭಿಷೇಕ್ ಹಾಗೂ ಹುಬ್ಬಳ್ಳಿಯ ಐಶ್ಬರ್ಯ ಪ್ರೀತಿಸುತ್ತಿದ್ದು, ಪ್ರೇಮವಿವಾಹ ಆಗಿದ್ದರು. ಇವರ ಮದುವೆಯೆ ಐಶ್ವರ್ಯ ಮನೆಯವರ ವಿರೋಧವಿದ್ದರೂ ಅದನ್ನು ಲೆಕ್ಕಿಸದೆ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದರು. ಒಂದು ತಿಂಗಳ ಹಿಂದೆ ದೇವಸ್ಥಾನದಲ್ಲಿ‌ ಮದುವೆಯಾಗಿದ್ದ ಇವರು, ಜೂ. 23ರಂದು ಗದಗದ ಸಬ್​ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ಡ್​ ಮದುವೆಯಾಗಿದ್ದರು.
ಇದನ್ನೂ ಓದಿ:ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಪೊಲೀಸರಿಬ್ಬರ ಅಮಾನತು!
ಅಭಿಷೇಕ್ ಹಾಗೂ ಐಶ್ವರ್ಯ ಜುಲೈ 14ರಂದು ಆರತಕ್ಷತೆ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದ್ದಾಗಲೇ ದೊಡ್ಡದೊಂದು ಆಘಾತ ಎದುರಾಗಿದೆ. ಇಂದು ಐಶ್ವರ್ಯ ಮನೆಯವರು ಅಭಿಷೇಕ್​ ನಿವಾಸಕ್ಕೆ ಬಂದು ಆತನ ಕಣ್ಣಿಗೆ ಕಾರದಪುಡಿ ಎರಚಿ, ಐಶ್ವರ್ಯಳನ್ನು ಹೊತ್ತುಕೊಂಡು ವಾಹನದಲ್ಲಿ ತುಂಬಿಸಿಕೊಂಡು ಕರೆದೊಯ್ದಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಅಭಿಷೇಕ್ ಗದಗ ಪೊಲೀಸರ ಮೊರೆ ಹೋಗಿದ್ದಾನೆ.
ಅಂತ್ಯಸಂಸ್ಕಾರದ ಬಳಿಕ ವಾಗ್ವಾದ: ಆಕೆಯ ಸಾವಿಗೆ ಕಾರಣ ಹೊಟ್ಟೆನೋವೋ, ಆತನೋ?

ಈ ದಿನಾಂಕದೊಳಗೆ ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದರೆ ಮಾತ್ರ ಆಗಸ್ಟ್​ನಲ್ಲಿನ ವಿದ್ಯುತ್ ಬಿಲ್​ ಶೂನ್ಯ; ವಿವರ ಇಲ್ಲಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + eight =
Remember me
