ಬೆಂಗಳೂರು:ರಷ್ಯಾದಲ್ಲಿ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದ ಈತ, ರಜೆಯ, ಮೇಲೆ ಭಾರತಕ್ಕೆ ಬಂದು ಬೇರೆಯವರ ವಿಚಾರಕ್ಕೆ ಮೂಗು ತೂರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಈತ ಮಾಡಿದ್ದು ಯುವತಿಯೋರ್ವಳ ನಿಂದನೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ನಂತರ ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಈತ ಅನ್ಯ ಧರ್ಮದ ಹುಡುಗನ ಜತೆ ಹೋಗುತ್ತಿದ್ದಕ್ಕೆ ನಿಂದಿಸಿ ವಿಡೀಯೋ ಮಾಡಿದ್ದು ಈ ಕುರಿತಾಗಿ ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದರು. ಸದ್ಯ ಸೆನ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
Case was registered immediately in Cyber crime police sttaion east Bangalore and within 24 hrs, police have nabbed the accused.@CPBlr@BlrCityPolice@DgpKarnataka@KarnatakaCops— DCP EAST (@DCPEASTBCP)August 27, 2023
Case was registered immediately in Cyber crime police sttaion east Bangalore and within 24 hrs, police have nabbed the accused.@CPBlr@BlrCityPolice@DgpKarnataka@KarnatakaCops
ಬಂಧಿತ ಆರೋಪಿಯನ್ನು ಜಾಕೀರ್ ಎಂದು ಗುರುತಿಸಲಾಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಆರೋಪಿ ಜಾಕೀರ್ ಅಹಮದ್ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಈತ ರಜೆ ಎಂದು ಬೆಂಗಳೂರಿನ ಗೋವಿಂದಪುರದ ತನ್ನ ಅಕ್ಕನ ಮನೆಗೆ ಬಂದಿದ್ದ. ಅಕ್ಕನ ಮನೆಗೆ ಬಂದಿದ್ದ ಜಾಕೀರ್ ಅಹಮದ್.
ಈತ ಅನ್ಯಧರ್ಮಿಯ ಯುವಕನ ಜೊತೆಗೆ ಬುರ್ಖಾ ಧರಿಸಿದ ಯುವತಿ ಹೋಗುತ್ತಿರುವುದು ಕಂಡಿದ್ದ. ನಂತರ ಬೈಕ್ ಅಡ್ಡಗಟ್ಟಿ ಯುವತಿ ಜೊತೆ ಗಲಾಟೆ ಮಾಡಿ ಯುವತಿಗೆ ನಿಂದಿಸಿದ್ದಾನೆ. ಈ ಸಂದರ್ಭದಲ್ಲಿ ಬುರ್ಖಾ ತೆಗೆಯುವಂತೆ ಕೆಟ್ಟದಾಗಿ ನಿಂದಿಸಿದ್ದ. ಆದರೆ ಯುವತಿ ಮತ್ತು ಬೈಕ್ನಲ್ಲಿದ್ದ ಯುವಕ ಇಬ್ಬರೂ ಪರಿಚಿತರಾಗಿದ್ದರು. ಇಬ್ಬರೂ ಕಂಪನಿಯೊಂದರ ಇಂಟರ್ ವ್ಯೂಗೆ ಹೋಗಿದ್ದರು.
ವಾಪಾಸು ಬರುವಾಗ ಯುವತಿಯನ್ನು ಬೈಕ್ನಲ್ಲಿ ಮನೆಗೆ ಡ್ರಾಪ್ ಮಾಡಲು ಯುವಕ ತೆರಳುತ್ತಿದ್ದ. ಸದ್ಯ ಯುವತಿಗೆ ನಿಂದಿಸಿದ ಜಾಕೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
