ಮಂಗಳೂರು:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಐಆರ್ ವರದಿ ಸಲ್ಲಿಕೆಯಾಗಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಇಲಾಖೆ ಸುದೀರ್ಘ ವರದಿ ಸಲ್ಲಿಸಿದೆ. ಇಂದು ಸಂಜೆ ಒಳಗೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರ ವರದಿಯನ್ನು ರವಾನಿಸಲಿದೆ.
ಬಾಂಬ್​ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಂಬರ್​ ಆದಿತ್ಯರಾವ್ ತನಿಖೆ ಇನ್ನು ಮುಂದುವರಿಯುತ್ತಿದೆ. ಫಿಂಗರ್ ಪ್ರಿಂಟ್ ಸಂಗ್ರಹಿಸಿ, ಎಲ್ಲ ವಿಧದಲ್ಲೂ ತನಿಖಾಧಿಕಾರಿಗಳು ಫೋಟೋ ತೆಗೆದಿದ್ದಾರೆ.
ಬಾಂಬ್ ಇಟ್ಟ ಸ್ಥಳಮಹಜರು ಪ್ರಕ್ರಿಯೆಯನ್ನು ಪೊಲೀಸರು ಇಂದು ನಡೆಸಲಿದ್ದಾರೆ. ಮಂಗಳೂರು ಏರ್ ಪೋರ್ಟ್ ಮತ್ತು ಸುತ್ತ ಮಹಜರು ನಡೆಸಲಿದ್ದಾರೆ.
ಅಲ್ಲದೆ ಬಾಂಬರ್​ ಆದಿತ್ಯರಾವ್ ಕೆಲಸ ಮಾಡಿರುವ ಹೊಟೇಲ್​ನಲ್ಲಿಯೂ ಮಹಜರು ನಡೆಸಲಾಗುತ್ತದೆ. ನಗರದ ಬಲ್ಮಠದ ಕ್ವಾಲಿಟಿ ಕುಡ್ಲ ಹೊಟೇಲ್​ಗೆ ಬಾಂಬರ್​ ಆದಿತ್ಯರಾವ್​ನನ್ನು ಕರೆತಂದು ಸ್ಥಳ ಮಹಜರು ನಡೆಸಲಾಗುತ್ತದೆ.
ಪೊಲೀಸರ ಕಸ್ಟಡಿಯಲ್ಲಿರುವ ಬಾಂಬರ್ ಆದಿತ್ಯರಾವ್​ನನ್ನು ಸ್ಥಳ ಮಹಜರಿಗೆ ಉಡುಪಿಗೂ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seventeen =
Remember me
