ಧಾರವಾಡ:ಸೋಮವಾರ ನಡೆದ ಹೋಳಿ ಹಬ್ಬದಲ್ಲಿ ಕಾಮಣ್ಣನಿಗೂ ಫೇಸ್​ಮಾಸ್ಕ್ ಹಾಕಿ ಪೂಜೆ ಮಾಡಿದ ಘಟನೆ ವಿಜಯಾನಂದನಗರದಲ್ಲಿ ನಡೆದಿದೆ.
ವಿಜಯಾನಂದ ನಗರದ ಸರ್ಕಲ್‌ನಲ್ಲಿ ಈ ಮಾಸ್ಕ್​ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದನ್ನು ನೋಡಿ ಕಾಮಣ್ಣನಿಗೂ ಕೊರೊನಾ ಭೀತಿನಾ? ಎಂದು ಹುಬ್ಬೇರಿಸಬೇಡಿ.
ಈ ಹೋಳಿ ಕಾಮಣ್ಣ ಕೊರೊನಾ ಭಯದಿಂದ ಮಾಸ್ಕ್​ ಹಾಕಿಕೊಂಡಿದ್ದಲ್ಲ. ಬದಲಿಗೆ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಕಿಕೊಂಡಿದ್ದ.
ವಿಜಯಾನಂದ ನಗರದ ಸರ್ಕಲ್​ನಲ್ಲಿ ಸ್ಥಳೀಯರು ಪ್ರತಿಷ್ಠಾಪಿಸಿದ್ದ ಹೋಳಿ ಕಾಮಣ್ಣನಿಗೆ ಮಾಸ್ಕ್​ ಹಾಕಿಯೇ ಪೂಜೆ ಮಾಡಿದರು. ಈಗ ಎಲ್ಲೆಡೆ ಕೊರೊನಾದ್ದೇ ಆತಂಕವಾಗಿದ್ದರಿಂದ ತಮ್ಮದೇ ವಿಭಿನ್ನ ಮಾರ್ಗದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಮಾಸ್ಕ್​ ಹಾಕಿದ್ದಂತೆಯೇ ದಹನವನ್ನೂ ಮಾಡಿದ್ದಾರೆ. (ದಿಗ್ವಿಜಯ)
ಒತ್ತುವರಿ ತೆರವು ನೆಪದಲ್ಲಿ ಅಡಕೆ ತೆಂಗು ನಾಶ

ಬಂಡವಾಳ ಪರ್ಯಾಪ್ತತಾ ಅನುಪಾತ, ಬ್ಯಾಂಕ್​ಗಳ ಸುರಕ್ಷತೆಯ ಮಾನದಂಡ: ಕರ್ಣಾಟಕ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
