ಕಾರವಾರ:ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬ ತನ್ನ ಪ್ರಿಯತಮೆಗಾಗಿ ಕಾರವಾರಕ್ಕೆ ಬಂದು ಗೌಂಡಿ(ಗಾರೆ) ಕೆಲಸ ಮಾಡಿಕೊಂಡಿರುವ ಸಂಗತಿ ಬಯಲಾಗಿದೆ. ತಮಿಳುನಾಡು ಮೂಲದ ಪುದುಕೊಟ್ಟೈ ಜಿಲ್ಲೆಯ ಬೀರ್ ಮೊಯಿದ್ದೀನ್ ಎಂಬ ಇಂಜಿನಿಯರ್ ತನ್ನ ಪ್ರಿಯತಮೆಯಾದ ವಿವಾಹಿತ ಮಹಿಳೆ ಆಯೇಶಾ ರೆಹಮತ್-ಉಲ್ಲಾ ಎಂಬಾಕೆಯೊಡನೆ ಕಾರವಾರಕ್ಕೆ ಬಂದು 6 ತಿಂಗಳಿಂದ ನೆಲೆಸಿದ್ದ ಎನ್ನಲಾಗಿದೆ.
ತಮಿಳುನಾಡು ಪೊಲೀಸ್ ಠಾಣೆಯಲ್ಲಿ ಆಯೇಶಾ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರು ಶನಿವಾರ ಕಾರವಾರಕ್ಕೆ ಬಂದು ಶಹರ ಠಾಣೆ ಪೊಲೀಸರ ಸಹಕಾರ ದಿಂದ ಪ್ರೇಮಿಗಳನ್ನು ತವರಿಗೆ ಕರೆದೊಯ್ದಿದ್ದಾರೆ.
ಆಯೇಶಾ ಹಾಗೂ ಬೀರ್ ಮೊಯಿದ್ದೀನ್ ನಡುವೆ 12 ವರ್ಷಗಳ ಹಿಂದಿನಿಂದಲೇ ಪ್ರೇಮವಿತ್ತು. ಆದರೆ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬನ ಜತೆ 10 ವರ್ಷದ ಹಿಂದೆಯೇ ವಿವಾಹ ಮಾಡಿಕೊಡಲಾಗಿತ್ತು. ಇಬ್ಬರು ಮಕ್ಕಳೂ ಇದ್ದರು. ಆದರೆ, ತನ್ನ ಹಳೆಯ ಪ್ರೇಮಿಯ ಸಂಪರ್ಕ ಬಿಡದ ಆಯೇಶಾ 6 ತಿಂಗಳ ಹಿಂದೆ ತನ್ನ ಪತಿ, ಮಕ್ಕಳನ್ನು ಬಿಟ್ಟು ಪ್ರಿಯತಮನ ಜತೆ ಬಂದಿದ್ದಳು. ಜೋಡಿ 6 ತಿಂಗಳಿಂದ ಕಾರವಾರದಲ್ಲಿ ನೆಲೆಸಿತ್ತು. ಮೊಯಿದ್ದೀನ್ ಇಂಜಿನಿಯರ್ ಆಗಿದ್ದರೂ ಇಲ್ಲಿ ಜೀವನ ಕ್ಕಾಗಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
