ಬೆಂಗಳೂರು:ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರ ಕ್ಷೇತ್ರವೇ ಫೈನಲ್‌ ಅಲ್ಲ. ಕೊನೇ ಕ್ಷಣದಲ್ಲಿ‌ ಕ್ಷೇತ್ರ ಬದಲಾವಣೆ ಆಗಬಹುದು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಕುರಿತು ಸಿದ್ದರಾಮಯ್ಯರ ಕುಟುಂಬದ ಮೂಲ ದೇವತೆ ಚಿಕ್ಕಮ್ಮತಾಯಿ ನುಡಿದ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, ಕಳೆದ ಶನಿವಾರ ಮಳವಳ್ಳಿಯ ಚಿಕ್ಕಮ್ಮತಾಯಿ ದೆವಸ್ಥಾನಕ್ಕೆ ಹೋಗಿದ್ದೆ. ಆ ವೇಳೆ ಅರ್ಚಕರ ಮೈ ಮೇಲೆ ದೇವರು ಬಂದಿಂದೆ ಎಂದು ಈ ರೀತಿ ಹೇಳಿದರು. ನಾನು ಅದನ್ನು ಯಾವ ರೀತಿ ಸ್ವೀಕರಿಸಬೇಕು ಅಂತಲೇ ಯೋಚಿಸಿಲ್ಲ. ಇದನ್ನ ತಂದೆಯರ ಬಳಿಯೂ ಚರ್ಚೆ ಮಾಡಿಲ್ಲ. ಮೇಲಾಗಿ ಅಲ್ಲಿ ಎರಡು ಕ್ಷೇತ್ರದಲ್ಲಿ ನಿಲ್ಲಿ ಎಂದು ಹೇಳಿಲ್ಲ. ಎರಡೂ ಕ್ಷೇತ್ರದಲ್ಲಿ ನಿಲ್ಲುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು. ಹೈಕಮಾಂಡ್ ಇದನ್ನು ತೀರ್ಮಾನ ಮಾಡುತ್ತದೆ ಎಂದರು.
ಚುನಾವಣೆ ಘೋಷಣೆಗೆ ಇನ್ನೂ ಸಮಯ ಇದೆ. ಆ ಕ್ಷಣದ ರಾಜಕೀಯ ಸನ್ನಿವೇಶ ನೋಡಿ ತೀರ್ಮಾನ ಮಾಡುತ್ತಾರೆ. ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರವೇ ಅಂತಿಮ ಅಲ್ಲ. ಸಿದ್ದರಾಮಯ್ಯರಿಗೆ ಕೊನೇ ಚುನಾವಣೆಯನ್ನು ವರುಣಾದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತೇನೆ. ಕೋಲಾರದಲ್ಲಿ ಎಲ್ಲರೂ ಒಟ್ಟಾಗುವ ಸಾಧ್ಯತೆ ಇದೆ. ಅಂದಿನ ರಾಜಕೀಯ ಸನ್ನಿವೇಶ ಗಮನಿಸಿ ತೀರ್ಮಾನ ಮಾಡುತ್ತಾರೆ ಎಂದರು.
ಮಾಜಿ ಸಿಎಂ ಸಿದ್ದು ಕ್ಷೇತ್ರ ಗೊಂದಲಕ್ಕೆ ತೆರೆ ಎಳೆದ ಮನೆ ದೇವರು ಚಿಕ್ಕಮ್ಮತಾಯಿ! ಮತ್ತಷ್ಟು ಕುತೂಹಲ ಮೂಡಿಸಿದ ದೇವರ ನುಡಿ

ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twelve =
Remember me
