ಬೆಂಗಳೂರು:ಶಾಸಕ ಅರವಿಂದ ಬೆಲ್ಲದ್ ಅವರ ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಂದು ತನಿಖೆ ನಡೆಸಿರುವ ಪೊಲೀಸರು ಶಾಸಕರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದನ್ನಾಧರಿಸಿ ತನಿಖೆ ಮುಂದುವರಿದಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.
ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ‌ ಅನುಚೇತ್ ನೇತೃತ್ವದಲ್ಲಿ ಎಸಿಪಿ‌ ಯತಿರಾಜ್ ತಂಡ ತನಿಖೆ ನಡೆಸಿದೆ. ಯುವರಾಜ್ ಹೆಸರಿನ ವ್ಯಕ್ತಿ ಕರೆ ಮಾಡಿರುವ ಬಗ್ಗೆ ಶಾಸಕ ಬೆಲ್ಲದ್ ಹೇಳಿಕೆ ನೀಡಿದ್ದು, ಅವರು ತಮಗೆ ಕರೆ ಬಂದಿದ್ದ ನಂಬರನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ. ಬೆಲ್ಲದ್ ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಬೆಲ್ಲದ್​ ಮಾಹಿತಿ ನೀಡಿರುವ ಆ ಫೋನ್​ ನಂಬರ್ ಯಾರ ಹೆಸರಿನಲ್ಲಿದೆ ಎಂಬುದರ ಜತೆಗೆ ಟವರ್​ ಆಧರಿಸಿ ಲೊಕೇಷನ್​ ಇತ್ಯಾದಿ ವಿವರ ಸಂಗ್ರಹಿಸಿರುವ ಪೊಲೀಸರು, ಅಷ್ಟಕ್ಕೂ ಕರೆ ಮಾಡಿದ್ದು ಯುವರಾಜನೇ ಅಥವಾ ಆತನ ಹೆಸರಿನಲ್ಲಿ ಬೇರೆ ಯಾರಾದರೂ ಕರೆ ಮಾಡಿರಬಹುದೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೂ ಸಂಚಲನ ಉಂಟಾಗಿದೆ. ಒಂದುವೇಳೆ ಕರೆ ಮಾಡಿರುವುದು ಯುವರಾಜ್​ ಆಗಿದ್ದರೆ ಜೈಲು ಸಿಬ್ಬಂದಿ-ಅಧಿಕಾರಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಜೈಲಿನಲ್ಲಿ ಮೊಬೈಲ್​ಫೋನ್ ನಿಷೇಧಿಸಲಾಗಿದ್ದರೂ ಯುವರಾಜ್​ಗೆ ಮೊಬೈಲ್​​ಫೋನ್​ ಸಿಕ್ಕಿದ್ದು ಹೇಗೆ? ಆತನಿಗೆ ಅದನ್ನು ಕೊಟ್ಟಿದ್ದು ಯಾರು? ಎಂಬುದೂ ತನಿಖೆಯಾಗಲಿದೆ. ಮಾತ್ರವಲ್ಲ ಯುವರಾಜ್ ಇನ್ನೂ ಯಾರು ಯಾರಿಗೆ ಕರೆ ಮಾಡಿದ್ದಾನೆ? ಬೆಲ್ಲದ್​ಗೆ ಕರೆ ಮಾಡಿದ್ದರ ಉದ್ದೇಶವೇನು‌? ಎಂಬೆಲ್ಲ ತನಿಖೆ ನಡೆಯಲಿದೆ.
ಇದನ್ನೂ ಓದಿ:ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮಗಳು ನಡೆಯುತ್ತಿರುವ ಕುರಿತು ಐಪಿಎಸ್​ ಅಧಿಕಾರಿ ರೂಪಾ ಅವರು ಈ ಹಿಂದೆ ಧ್ವನಿ ಎತ್ತಿದ್ದರು. ಇದರಿಂದಾಗಿ ಜೈಲಿನಲ್ಲಿ ಮೊಬೈಲ್​ಫೋನ್​, ಗಾಂಜಾ ಬಳಕೆ ಸೇರಿ ಹಲವು ವಸ್ತುಗಳ ಅಕ್ರಮ ಸರಬರಾಜು ವಿಷಯ ಸದ್ದು ಮಾಡಿತ್ತು. ಆ ಬಳಿಕ ಇಂಥ ಅಕ್ರಮಗಳಿಗೆ ಕೊಂಚ ತೆರೆಬಿದ್ದಿದ್ದರೂ ಅವುಗಳು ಮತ್ತೆ ಮುಂದುವರಿದಿರುವ ಅನುಮಾನ ಯುವರಾಜ್​ ಪ್ರಕರಣದಿಂದ ಮೂಡಿದೆ. ಒಂದುವೇಳೇ ಜೈಲಿನಿಂದ ಯುವರಾಜ್ ಕರೆ ಮಾಡಿದ್ದು ಸಾಬೀತಾದರೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆಯೂ ಇದೆ.
ದೈಹಿಕ ಅಂತರ, ಮಾಸ್ಕ್​ ಇಲ್ಲದೆ ಜನರ ಮಧ್ಯೆ ಸಚಿವರ ಪತ್ನಿಯ ಜನ್ಮದಿನಾಚರಣೆ; ಕರೊನಾಗೆ ಡೋಂಟ್​ ಕೇರ್!?

ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twelve =
Remember me
