ಚಾಮರಾಜನಗರ:ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಜನಪದ ಹಾಡಿನ ಮೂಲಕ ಮತ ಕ್ವಾರಣ್ಯ ಮಾಡಿದ್ದ ನೀಲಗಾರ ಕಲಾವಿದ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ‌.
ತಾಲೂಕಿನ ದೊಡ್ಡಮೋಳೆಯ ಸಾಮಾನ್ಯ ವರ್ಗಕ್ಕೆ ಮೀಸಲಾದ ಗ್ರಾಮದ ಬ್ಲಾಕ್‌–1ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ತಂಬೂರಿ ಕಲಾವಿದ ಸಿದ್ದಶೆಟ್ಟಿ ವಿನೂತನವಾಗಿ ಮತಭಿಕ್ಷೆ ಕೇಳುತ್ತಿದ್ದರು. ಹೆಗಲಿಗೆ ಜೋಳಿಗೆ ‌‌ಹೇರಿಕೊಂಡು ತಂಬೂರಿ ಬಾರಿಸುತ್ತಾ ಮನೆಗೆ ತೆರಳಿ ಮತಭಿಕ್ಷೆ ಕೇಳುತ್ತಿದ್ದರು. ಇವರ ಚುನಾವಣೆ ಚಿಹ್ನೆಯೂ ತಂಬೂರಿಯೇ ಆಗಿದೆ.
ಇದನ್ನೂ ಓದಿ:ಎಣಿಕೆಗೂ ಮುನ್ನವೇ ಅಂಚೆ ಮತಪತ್ರಗಳು ಬಯಲು
ಮಂಟೇಸ್ವಾಮಿ, ಮಲೆಮಹದೇಶ್ವರ ಸ್ವಾಮಿ, ಬಿಳಿಗಿರಿರಂಗಸ್ವಾಮಿ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಕುರಿತ ಪದಗಳನ್ನು ಹಾಡುತ್ತಾ ಸಿದ್ದಶೆಟ್ಟಿಯವರು, ಮತ ನೀಡಬೇಕೆಂದು ಕೋರಿದ್ದರು. ಇವರ ವಿರುದ್ಧ‌ 7 ಜನ ಸ್ಪರ್ಧೆ ಮಾಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಚಿಕ್ಕಪ್ಪನ ವಿರುದ್ಧ ಮಗ ಸ್ಪರ್ಧೆ, ಕುತೂಹಲ ಕೆರಳಿಸಿದ ಫಲಿತಾಂಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
