ಬೆಂಗಳೂರು :ಲಘುವಿಮಾನ ಬಳಸಿಕೊಂಡು ಆ್ಯಂಟಿಮೈಕ್ರೋಬಿಯಲ್​ ಸಾವಯವ ಔಷಧವನ್ನು ಸಿಂಪಡಿಸಿ ಕರೊನಾ ವೈರಸ್ ಹತೋಟಿಗೆ ತರುವ ಪ್ರಯತ್ನವೊಂದನ್ನು ಕೈಗೆತ್ತಿಕೊಳ್ಳಲಾಗಿದೆ. ಮೊಟ್ಟ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ನಗರದಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಏರಿಯಲ್ ವರ್ಕ್ಸ್ ಏರೋ ವತಿಯಿಂದ ಬಿಬಿಎಂಪಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ.
ಬೆಂಗಳೂರಿನ ಗಲ್ಲಿಗಲ್ಲಿಗೂ ಎಂಟ್ರಿ ಕೊಡಲಿರುವ ಈ ಲಘುವಿಮಾನವು ಮೂರು ದಿನಗಳಲ್ಲಿ ನಗರದ ವಿವಿಧೆಡೆ ಆಂಟಿ ಮೈಕ್ರೋಬಯಲ್ ಸಲ್ಯೂಷನ್ಅನ್ನು ಸಿಂಪಡಿಸಲಿದೆ. ಕೇವಲ 8 ನಿಮಿಷಗಳಲ್ಲಿ ವೈರಸ್​​ನ ಕಥೆ ಮುಗಿಸುವ ಸಾಮರ್ಥ್ಯ ಹೊಂದಿರುವ ಆರ್ಗ್ಯಾನಿಕ್ ಸ್ಪ್ರೇ ಇದಾಗಿದೆ. ಈ ಔಷಧಿ ಸಿಂಪಡಿಸಿದರೆ ಶೇಕಡ 88 ರಷ್ಟು ವೈರಸ್ ಹರಡುವಿಕೆ ತಡೆಗಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:ಮೂರನೇ ಅಲೆ ತಡೆಗೆ ಸಕಲ ಸಿದ್ಧತೆ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿಕೆ
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರಯೋಗ ಮಾಡುತ್ತಿದ್ದು, 1 ಗಂಟೆಗೆ 300 ಹೆಕ್ಟೇರ್ ಕವರ್ ಮಾಡುವ ಸಾಮರ್ಥ್ಯವನ್ನು ಈ ಲಘು ವಿಮಾನ ಹೊಂದಿರುತ್ತದೆ. ಡ್ರೋನ್​​ಗಿಂತಲೂ ಹೆಚ್ಚು ವೇಗವಾಗಿ ಔಷಧಿ ಸಿಂಪಡಿಸುವ ಸಾಮರ್ಥ್ಯವಿದ್ದು, ಇಡೀ ಬೆಂಗಳೂರಿಗೆ ಔಷಧಿ ಸಿಂಪಡಿಸಲು 25 ದಿನಗಳು ಹಿಡಿಯಲಿವೆ ಎನ್ನಲಾಗಿದೆ.
ಪ್ರಾಯೋಗಿಕ ಚಾಲನೆ :ಇಂದು ಜಕ್ಕೂರು ಏರೋಡ್ರಮ್ ಆವರಣದಲ್ಲಿ ಸಾವಯವ ಸೋಂಕುನಿವಾರಕದ ಪ್ರಾಯೋಗಿಕ ವೈಮಾನಿಕ ಸಿಂಪಡಣೆಗೆ ಕಂದಾಯ ಸಚಿವರಾದ ಆರ್.ಅಶೋಕ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಶಾಸಕ ಕೃಷ್ಣ ಭೈರೇಗೌಡ ಚಾಲನೆ ನೀಡಿದರು. ಈ ವೇಳೆ ಆಡಳಿತ ಅಧಿಕಾರಿ ರಾಕೇಶ್ ಸಿಂಗ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಮತ್ತು ಜಂಟಿ ಆಯುಕ್ತ ಸರ್ಫರಾಜ್ ಖಾನ್ ಉಪಸ್ಥಿತರಿದ್ದರು.
ಇದನ್ನೂ ಓದಿ:ರೆಮ್​ಡೆಸಿವಿರ್​ ಚುಚ್ಚುಮದ್ದು : ಬೇಡಿಕೆಗಿಂತ ಹೆಚ್ಚಿದ ಪೂರೈಕೆ
“ಬೆಂಗಳೂರನ್ನು ಕೋವಿಡ್​​ನಿಂದ ಕಾಪಾಡುವತ್ತ ಸರ್ಕಾರ ಗಮನ ಹರಿಸಿದೆ. ಮೊದಲಿಗೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಔಷಧಿ ಸಿಂಪಡಿಸುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಈ ಹಿಂದೆಯೂ ಇವರು ಸ್ವಯಂಪ್ರೇರಿತರಾಗಿ ಔಷಧಿ ಸಿಂಪಡಿಸಿದ್ದಾರೆ. ಮಾರ್ಕೆಟ್ ಅಂತಹ ಜಾಗಗಳಲ್ಲಿ ಈ ಔಷಧಿ ಸಿಂಪಡಿಸುವ ಯೋಚನೆ ಇದೆ” ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಾರುಕಟ್ಟೆ ಪ್ರದೇಶಗಳಲ್ಲಿ ನಾಳೆಯಿಂದ ಈ ದ್ರಾವಣವನ್ನು ಸ್ಪ್ರೇ ಮಾಡಲಾಗುತ್ತದೆ. ಶಿವಾಜಿನಗರ, ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್​​ಗಳಲ್ಲಿ ಸೋಮವಾರದಿಂದ ಬೆಳಗ್ಗೆ 8-10 ರವರೆಗೆ ದ್ರಾವಣ ಸಿಂಪಡಣೆ ನಡೆಯಲಿದೆ. ಈಗ ಸದ್ಯಕ್ಕೆ ರಾಜ್ಯ ಸರ್ಕಾರ ಯಾವುದೇ ಹಣ ಕೊಡ್ತಿಲ್ಲ. ಇದು ಪೈಲೆಟ್ ಪ್ರಾಜೆಕ್ಟ್​​ ಆಗಿದ್ದು, ಫಲಿತಾಂಶ ನೋಡಿಕೊಂಡು ಸರ್ಕಾರ ನಿರ್ಧರಿಸಲಿದೆ. ಇದು ಪರಿಣಾಮಕಾರಿಯಾದರೆ ಎಲ್ಲೆಡೆ ಅಳವಡಿಸುತ್ತೇವೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಮತ್ತೆ ಏರಿತು ಪೆಟ್ರೋಲ್-ಡೀಸೆಲ್ ದರ: ಈ ಮಹಾನಗರದಲ್ಲಿ ದಾಟಿತು ಶತಕ!

ರಾಜ್ಯದಲ್ಲಿ ಜೂನ್​ 7 ಕ್ಕೂ ಮುಂದಕ್ಕೆ ಲಾಕ್ಡೌನ್ ವಿಸ್ತರಣೆ ? ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು ?

ರಕ್ಷಿತ್ ಶೆಟ್ಟಿ ಚಿತ್ರ ‘777ಚಾರ್ಲಿ’ಯ ಟೀಸರ್​ ಬಿಡುಗಡೆಗೆ ಡೇಟ್​ ಫಿಕ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
