ಬೆಂಗಳೂರು:ಶ್ರೀನಿಡುಮಾಮಿಡಿ ಜಗದ್ಗುರು ಮಠದ ಪೀಠಾಧಿಪತಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಎರಡನೆಯ ಸಲ ಕರೊನಾ ಸೋಂಕಿಗೆ ಒಳಗಾಗಿದ್ದು, ಸ್ವಲ್ಪ ಉಸಿರಾಟದ ಸಮಸ್ಯೆಯನ್ನೂ ಅನುಭವಿಸುತ್ತಿದ್ದು, ಮಠದಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಅವರಿಗೆ ಚಿಂತೆಯೊಂದು ಕಾಡುತ್ತಿದ್ದು, ಆ ಸಂಬಂಧ ಸುದೀರ್ಘವಾದ ಪತ್ರವೊಂದನ್ನು ಬರೆದು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿರುವುದಷ್ಟೇ ಅಲ್ಲದೆ, ಭಕ್ತರಿಂದ-ಅನುಯಾಯಿಗಳಿಂದ ಅಭಿಪ್ರಾಯವನ್ನೂ ಕೋರಿದ್ದಾರೆ.
ಕಳೆದ ಸೆಪ್ಟೆಂಬರ್​ನಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ನಾನು ಶೀಘ್ರವಾಗಿ ಗುಣಮುಖನಾಗಿದ್ದೆ. ಈಗ ಮತ್ತೊಮ್ಮೆ ಅಂದರೆ ಎರಡನೆಯ ಅಲೆಯಲ್ಲೂ ಕರೊನಾ ಸೋಂಕು ತಗುಲಿದ್ದು, ಸ್ವಲ್ಪ ಉಸಿರಾಟದ ಸಮಸ್ಯೆಯೂ ಇದೆ. ಒಂದು ವೇಳೆ ಕೋವಿಡ್​ನಿಂದ ನನ್ನ ಅಂತ್ಯವೇನಾದರೂ ಸಂಭವಿಸಿ ಪೀಠದ ಪ್ರಗತಿಗೆ ತೊಂದರೆ ಆಗಬಾರದು ಎಂಬ ಏಕೈಕ ಕಾರಣಕ್ಕಾಗಿ ನಾನು ತುರ್ತಾಗಿ ಒಂದು ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಆ ಸಂಬಂಧ ತಮ್ಮ ಅಭಿಪ್ರಾಯ-ಅನಿಸಿಕೆಗಳನ್ನು ಕೇಳುತ್ತಿರುವುದಾಗಿ ಅವರು ಸುದೀರ್ಘವಾಗಿ ಪತ್ರವೊಂದನ್ನು ಬರೆದು ಕೋರಿಕೊಂಡಿದ್ದಾರೆ.
ಪತ್ರದಲ್ಲಿ ನಿಡುಮಾಮಿಡಿ ಜಗದ್ಗುರು ಮಠ, ಧರ್ಮಗುರು ಪೀಠ, ಗೂಳೂರು ಮಹಾಸಂಸ್ಥಾನಗಳಿಗೆ ಉತ್ತರಾಧಿಕಾರಿಗಳನ್ನು ನೇಮಿಸುವ ವಿಚಾರವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದು, ಆ ಪೈಕಿ ಒಂದು ಪೀಠಕ್ಕೆ ಮಹಿಳೆಯೊಬ್ಬರನ್ನು ಉತ್ತರಾಧಿಕಾರಿ ಆಗಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ಕೋರಿರುವ ಅವರ ಪತ್ರದ ವಿವರಗಳು ಈ ಕೆಳಗಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
