ಬೆಂಗಳೂರು:ಓಲಾ ಕಂಪನಿಗೆ ನಾಲ್ವರು ಖತರ್ನಾಕ್ ಚಾಲಕರ ಹೈಟೆಕ್​ ವಂಚನೆ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ 2 ಇನ್ನೋವಾ ಕಾರು, 1 ಸ್ವಿಫ್ಟ್ ಕಾರು, 500 ಸಿಮ್ ಕಾರ್ಡ್, 16 ಮೊಬೈಲ್, ಲ್ಯಾಪ್​ಟ್ಯಾಪ್ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾಹಕರಂತೆ ಕಾರುಗಳನ್ನು ತಾವೇ ಬುಕ್​ ಮಾಡಿಕೊಂಡು ಎಲ್ಲಿಗೂ ಹೋಗದೆ ದಿನಕ್ಕೆ ಸುಮಾರು 20 ಟ್ರಿಪ್​ ಮಾಡಿದ್ದೇವೆಂದು ಕುಳಿತಲ್ಲೇ ಓಲಾ ಕಂಪನಿಯಿಂದ ಪ್ರೋತ್ಸಾಹಧನ ಪಡೆದಿರುವ ಈ ಹೈಟೆಕ್​ ವಂಚನೆಯ ಪರಿ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ.
ಇದನ್ನೂ ಓದಿರಿಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?
ಭರತ್​ ನಗರದ ನಾಗೇಶ್(36), ಹೊಸಕೆರೆಹಳ್ಳಿ ರವಿ(21), ಬಸವಾಪುರದ ಮನು (27), ಕೆಂಪೇಗೌಡ ನಗರದ ಸತೀಶ್(32) ಬಂಧಿತರು. ಓಲಾ ಕಂಪನಿಯ ಇಡೀ ವ್ಯವಹಾರ ತಂತ್ರಜ್ಞಾನದಿಂದಲೇ ನಡೆಯುತ್ತಿದೆ. ಈ ತಂತ್ರಜ್ಞಾನವನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿಗಳು ಅದೇ ಕಂಪನಿಗೆ ಮಾಕ್ ಆ್ಯಪ್ ಬಳಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.
ಇದನ್ನೂ ಓದಿರಿರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?
ವಂಚನೆ ಹೇಗೆ?:ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ಸಿಮ್​ಕಾರ್ಡ್​ ಪಡೆಯುತ್ತಿದ್ದ ಆರೋಪಿಗಳು ತಮ್ಮ ಕಾರುಗಳನ್ನು ಓಲಾ ಕಂಪನಿಗೆ ಸೇರಿಸಲು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿದ್ದರು. ತಮ್ಮ ಬಳಿ 50 ಬುಕಿಂಗ್​ ಐಡಿ ಇರುವುದಾಗಿ ಸುಳ್ಳು ಹೇಳಿ ಕಂಪನಿಯಿಂದ ತಮ್ಮ ಕಾರುಗಳಿಗೆ ಟ್ರಿಪ್​ ಒದಗಿಸಲು ಅನುಮತಿ ಪಡೆದಿದ್ದರು.
ಆರೋಪಿಗಳು ನಕಲಿ ಸಿಮ್ ಕಾರ್ಡ್​ಗಳನ್ನು ಬಳಸಿ ಗ್ರಾಹಕರಂತೆ ಕ್ಯಾಬ್ ಬುಕ್ ಮಾಡಿಕೊಳ್ಳುತ್ತಿದ್ದರು. ಟ್ರಿಪ್ ಬುಕ್ ಮಾಡಿದ ನಂತರ ಒಂದು ಮೀಟರ್ ಕೂಡ ಕ್ಯಾಬ್ ಮುಂದೆ ಹೋಗಿರುವುದಿಲ್ಲ. ಆದರೂ ತಂತ್ರಜ್ಞಾನ ಬಳಸಿ ಒಂದು ಲೋಕೇಷನ್​ನಿಂದ ಮತ್ತೊಂದು ಲೋಕೇಷನ್​ಗೆ ಸಂಚಾರ ಮಾಡಿದೆ ಎಂದು ಆ್ಯಪ್​ನಲ್ಲಿ ನಮೂದಾಗುವಂತೆ ಮಾಡುತ್ತಿದ್ದರು.
ಇದನ್ನೂ ಓದಿರಿಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!
ಪ್ರತಿನಿತ್ಯ 15ರಿಂದ 20 ಟ್ರಿಪ್ ಮಾಡುವ ಕ್ಯಾಬ್ ಚಾಲಕರಿಗೆ ಓಲಾ ಕಂಪನಿ ಇನ್ಸೆಟಿವ್ ನೀಡುತ್ತಿದೆ. ಇದನ್ನು ಕುಳಿತಲ್ಲೇ ಪಡೆಯಲು ಸಂಚು ರೂಪಿಸಿದ ಈ ಖತರ್ನಾಕ್​ ಚಾಲಕರು ಆ್ಯಪ್ ಬಳಸಿ ಕಂಪನಿಗೆ ಮೋಸ ಮಾಡಿದ್ದಾರೆ.
ಈ ಪ್ರಕರಣ ಭೇದಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ, ನಾಲ್ವರು ವಂಚಕರನ್ನು ಬಂಧಿಸಿದೆ. ಅವರಿಂದ 23 ಲಕ್ಷ ರೂ. ಬೆಲೆಯ 2 ಇನ್ನೋವಾ ಕಾರು, ಒಂದು ಸ್ವಿಫ್ಟ್ ಕಾರು, 500 ಸಿಮ್ ಕಾರ್ಡ್​ಗಳು, 16 ಮೊಬೈಲ್, ಲ್ಯಾಪ್​ಟಾಪ್. ಐಡಿ ಕಾರ್ಡ್ ಮುದ್ರಿಸುವ 2 ಪ್ರಿಂಟರ್​ ಅನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿರಿ6 ಮತ್ತು 7ನೇ ತರಗತಿಗೆ ಆನ್​ಲೈನ್​ ಶಿಕ್ಷಣ ಇರುತ್ತಾ-ಇಲ್ವಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 11 =
Remember me
