ಕಾರವಾರ:ಕರೊನಾ ಸೋಂಕಿತ ಯುವಕನ ಅಜ್ಜಿ ಕ್ವಾರಂಟೈನ್​ ಕೇಂದ್ರದಲ್ಲೇ ಶುಕ್ರವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಳೆಯ ದಾಂಡೇಲಿ ಮೂಲದ 24 ವರ್ಷದ ಯುವಕನೊಬ್ಬನಿಗೆ ಕೋವಿಡ್​-19 ಸೋಂಕು ಇರುವುದು ಬುಧವಾರ (ಮೇ 20) ಖಚಿತವಾಗಿತ್ತು. ಸದ್ಯ ಈತನಿಗೆ ಕಾರವಾರ ಕ್ರಿಮ್ಸ್ ಕರೊನಾ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಯುವಕನ ಪ್ರಾಥಮಿಕ ಸಂಪರ್ಕಕ್ಕೆ ಬಂದ‌ 62 ವರ್ಷದ ಅಜ್ಜಿ ಸೇರಿ 23 ಜನರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಕ್ವಾರಂಟೈನ್​ ಮಾಡಲಾಗಿತ್ತು. ಇದೇ ಆಸ್ಪತ್ರೆಯ ಕಿಟಕಿಗೆ ನೇಣುಬಿಗಿದುಕೊಂಡು ಅಜ್ಜಿ ಮೃತಪಟ್ಟಿದ್ದಾರೆ.
ಇದನ್ನೂ ಓದಿರಿಅತ್ತಿಗೆ ಜತೆ ಸಂಸಾರ ನಡೆಸುತ್ತಿದ್ದವ ಅಣ್ಣನ‌ ಮಗಳ ಜತೆ ಎಸ್ಕೇಪ್…!
ಚಾಲಕ ವೃತ್ತಿ ಮಾಡುತ್ತಿದ್ದ ಅಜ್ಜಿಯ ಮೊಮ್ಮಗ ಗುಜರಾತ್, ಗೋವಾ, ಹಳಿಯಾಳ ಸುತ್ತಾಡಿ ದಾಂಡೇಲಿಗೆ ಬಂದಿದ್ದ. ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗದ ಈತನನ್ನು ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ ಹಿಡಿದು ಕ್ವಾರಂಟೈನ್ ಮಾಡಿದ್ದರು. ಆರೋಗ್ಯ ತಪಾಸಣೆ ಮಾಡಿದಾಗ ಈತನ ಕರೊನಾ ಸೋಂಕು ಇರುವುದು ದೃಢ ಪಟ್ಟಿತ್ತು.
ಇದನ್ನೂ ಓದಿರಿಸುಳ್ಳು ಹೇಳಿ ಮನೆ ಸೇರಿಕೊಂಡಿದ್ದ ಕುಟುಂಬಕ್ಕೆ ತಡರಾತ್ರಿ ಶಾಕ್​ ಕೊಟ್ಟ ಆಂಬುಲೆನ್ಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
