ಬೆಂಗಳೂರು:ಇಲ್ಲಿನ ಯಲಹಂಕದ ಮೇಲ್ಸೇತುವೆಗೆ ಸ್ವಾತಂತ್ರೃವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಹೆಸರಿಡಲು ನಿರ್ಧರಿಸಿರುವುದನ್ನು ವಿರೋಧ ಪಕ್ಷಗಳ ಕೆಲವು ನಾಯಕರು ಖಂಡಿಸಿದ್ದಾರೆ.
‘‘ಸಾವರ್ಕರ್ ಹೆಸರಿಡುವುದು ಈ ಮಣ್ಣಿನ ಸ್ವಾತಂತ್ರೃ ಯೋಧರಿಗೆ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ನಮ್ಮ ನಾಡಿನ ಸ್ವಾತಂತ್ರೃ ಹೋರಾಟಗಾರರ ಹೆಸರನ್ನು ಇಡಬೇಕು’’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರವಲ್ಲ ಎಂಬುದು ಈ ನಾಮಕರಣ ನಿರ್ಧಾರದಿಂದ ಬಯಲಾಗಿದೆ. ಇಂತಹ ಜನವಿರೋಧಿ ನಿರ್ಧಾರಗಳಿಗಾಗಿ ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿದ್ದೀರಾ’’ ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘‘ಸಾವರ್ಕರ್ ಹೆಸರಿಡುತ್ತಿರುವುದು ನಾಡಿನ ಅಭ್ಯುದಯಕ್ಕೆ ಹೋರಾಡಿದವರಿಗೆ ಮಾಡುತ್ತಿರುವ ಅವಮಾನ. ನಮ್ಮ ನಾಡಿನ ಹೋರಾಟಗಾರರ ಹೆಸರನ್ನೇ ಇಡಬೇಕು. ನಮ್ಮ ನಾಡಿನವರ ಹೆಸರನ್ನು ಬೇರೆ ರಾಜ್ಯದವರು ಇಡುತ್ತಾರೆಯೇ? ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು’’ ಎಂದಿದ್ದಾರೆ.
https://www.facebook.com/VVani4U/photos/a.983112878383377/3430054320355875/?type=3&__xts__%5B0%5D=68.ARCqQopy7FjgmQlpadEHoh5mldTwYBI3oyJCVsWtVt_pv7KfvS35N0LCeqQyueAasIGZIhBfZdi93_ZsvR1x24OSknuV7vLIe7P4PJ4YqLzkLUBXBXHmsBhfNbsu3IqBfNZvcJMVtyMYpn7kXmnwa77KOy3Idg37_-81SvfcBzGYBxjFqSGk8hPmZ1YulLBnY5n8k0puFCSomlaTnJwkR5hzTClDeXiBVd_FbuFsDL5EE8p-2gTZcMhapOzgcU1DdPa6EDH5yktW4Yaq6kNyT7z3V7KdGP5YAz2uARbCESYMV-WxvPXLD7xdPpQijTm4yxZzoCbaZeFrIZVvMkkY77oSNg&__tn__=-R
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
