ಬೆಂಗಳೂರು:ವಿಧಾನ ಪರಿಷತ್​ಗೆ ಅವಿರೋಧ ಆಯ್ಕೆ ಕನಸು ಕಾಣುತ್ತಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಪಕ್ಷೇತರ ಅಭ್ಯರ್ಥಿ ಅನಿಲ್​ಕುಮಾರ್ ಅಡ್ಡಗಾಲು ಹಾಕಿದ್ದು, ಬಿಜೆಪಿ ಅಭ್ಯರ್ಥಿ ಸವದಿ ಆಯ್ಕೆಗೆ ಅಗತ್ಯ ಸಂಖ್ಯಾಬಲವಿದ್ದರೂ ಫೆ.17ರಂದು ಮತದಾನದ ಮೂಲಕವೇ ಆಯ್ಕೆ ಅಂತಿಮಗೊಳ್ಳಬೇಕಿದೆ.
ನಾಮಪತ್ರ ವಾಪಸ್​ಗೆ ಕೊನೆಯ ದಿನವಾದ ಸೋಮವಾರ ಯಾರೊಬ್ಬರೂ ಹಿಂಪಡೆದಿಲ್ಲ. ಸವದಿ ಎದುರು ಸ್ಪರ್ಧಿಸಿರುವ ಅನಿಲ್ ಅವರ ನಾಮಪತ್ರ ವಾಪಸ್ ತೆಗೆಸಲು ಇಡೀ ದಿನ ಕಸರತ್ತು ನಡೆಯಿತು. ಮೂವರು ಸಚಿವರ ಮಾತಿಗೂ ಕಿಮ್ಮತ್ತು ಸಿಗದೆ ಇದ್ದಾಗ, ಕೆಲ ಸ್ವಾಮೀಜಿಗಳ ಮೂಲಕ ಅವರನ್ನು ಸಂರ್ಪಸಲಾಯಿತು. ಆದರೂ ಫಲ ಸಿಗದಾಯಿತು. ಫೆ.18ರೊಳಗೆ ವಿಧಾನಸಭೆ ಅಥವಾ ಪರಿಷತ್​ಗೆ ಸವದಿ ಸದಸ್ಯರಾಗಲೇಬೇಕಾದ ಅನಿವಾರ್ಯತೆ ಇದ್ದು, ಆಯ್ಕೆಯಲ್ಲಿ ಹೆಚ್ಚು ಕಡಿಮೆಯಾದರೆ ಮುಜುಗರಕ್ಕೀಡಾಗುವುದಲ್ಲದೆ, ಡಿಸಿಎಂ ಸ್ಥಾನ ತೊರೆಯಬೇಕಾಗುತ್ತದೆ.
ವಿರೋಧಿಗಳ ತಂತ್ರವೇ?:ಬಿಜೆಪಿಯಲ್ಲಿ ಒಂದು ಗುಂಪಿಗೆ ಒಲ್ಲದ ಶಿಶುವಾಗಿರುವ ಸವದಿ ಅವರನ್ನು ಕಟ್ಟಿ ಹಾಕಲು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮೂಲಕ ರಾಜಕೀಯ ತಂತ್ರ ಹೆಣೆಯಲಾಗಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿವೆ. ಸೂಚಕರ ಖಾಲಿ ಪತ್ರಕ್ಕೆ ಪಕ್ಷದ ಶಾಸಕರ ಸಹಿ ಹಾಕಿಸಿಕೊಂಡಿದ್ದ ರೇವಣ್ಣ, ರಿಯಲ್ ಎಸ್ಟೇಟ್ ಉದ್ಯಮ ದಲ್ಲಿರುವ ಅನಿಲ್ ಕೈಯಲ್ಲಿ ನಾಮಪತ್ರ ಹಾಕಿಸಿದ ಬಳಿಕವಷ್ಟೇ ಯಾರನ್ನು ಅಭ್ಯರ್ಥಿ ಮಾಡಿದ್ದಾರೆ ಎಂಬ ವಾಸ್ತವ ಸಹಿ ಹಾಕಿದ್ದ ಶಾಸಕರಿಗೆ ತಿಳಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
