ನೆಲಮಂಗಲ: ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ರೀತಿಯ ಕಸರತ್ತು ಮಾಡೋದು ಸಹಜ. ಅದ್ರಲ್ಲೂ ಚುನಾವಣೆ ಹತ್ತಿರ ಬಂತದ್ರೆ ಸಾಕು, ಎಲ್ಲಾ ಕಡೆಗಳಲ್ಲೂ ಗಿಫ್ಟ್​ ಪಾಲಿಟಿಕ್ಸ್​ನದ್ದೇ ಸುದ್ದಿ. ಇದೀಗ ಟಿಕೆಟ್​ ಆಕಾಂಕ್ಷಿ ಶ್ರೀನಿವಾಸ್​​ ಕಾಂಗ್ರೆಸ್​​ನಿಂದ ಟಿಕೆಟ್​ ಪಡೆಯುವ ಸಲುವಾಗಿ ವಿವಿಧ ಆಮಿಷದ ಗಿಮಿಕ್ ಮಾಡಲು ಮುಂದಾಗಿದ್ದಾರೆ.
ಈ ಬಾರಿ ನೆಲಮಂಗಲ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀನಿವಾಸ್​ ಕಳೆದ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಆಗ ವೇದಿಕೆಯಲ್ಲಿದ್ದ ಸ್ಥಳೀಯರು ಶ್ರೀನಿವಾಸ್​ ಮೇಲೆ ಗರಿಗರಿ ನೋಟಿನ ಮಳೆ ಸುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರು ಸ್ಥಳೀಯರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಇಬ್ಬರು ಮಕ್ಕಳು ಸೇರಿ 11 ಮಂದಿ ಮೃತ್ಯು, 10ಕ್ಕೂ ಅಧಿಕ ಜನರಿಗೆ ಗಾಯ
ಮರುದಿನ ಬೆಳಗ್ಗೆ ಶ್ರೀನಿವಾಸ್​ ಹಬ್ಬದ ಉಡುಗೊರೆಯ ನೆಪದಲ್ಲಿ ತಾಲೂಕಿನಲ್ಲಿ ಜನರಿಗೆ ಕುಕ್ಕರ್​​ ಹಂಚಿದ್ದು, ತಾಲೂಕಿನ ಜನರು ಕುಕ್ಕರ್​ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನಡೆದಿದೆ. ಚುನಾವಣೆಗೂ ಮುನ್ನವೇ ಆಕಾಂಕ್ಷಿಯ ಗಿಮಿಕ್​ ಪ್ರಚಾರ ಕಂಡು ಟೀಕೆಗಳು ಕೇಳಿಬರುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
