ಕಲಬುರಗಿ:ನಿನ್ನೆಯಷ್ಟೇ ಮಣಿಕಂಠ ರಾಠೋಡ್​ ತಮ್ಮ ಮೇಲೆ ಪ್ರಿಯಾಂಕ್​ ಖರ್ಗೆ ಮತ್ತು ಬೆಂಬಲಿಗರಿಂದ ಕೊಲೆ ಪ್ರಯತ್ನ ನಡೆದಿದೆ ಎಂದು ಹೊಸ ಬಾಂಬ್​ ಸಿಡಿಸಿದ್ದರು. ಇದೀಗ ಪ್ರಿಯಾಂಕ್​ ಖರ್ಗೆ ಬಲಗೈ ಬಂಟ ರಾಜು ಕಪನೂರ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸರು ರಾಜು ಕಪನೂರ್​ನ್ನು ಇದೀಗ ಬಂಧಿಸಿದ್ದಾರೆ. ಈ ಹಿಂದೆ ವಿಚಾರಣೆ ಸಂದರ್ಭ ಗುರಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಸ್ಟೇಟ್ ಮೆಂಟ್ ನಲ್ಲಿ ಕಪನೂರ್ ಹೆಸರು ಉಲ್ಲೇಖವಾಗಿತ್ತು. ಅದರ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಗುರಲಿಂಗಪ್ಪ ಎಂಬುವರಿಂದ ಕಪನೂರ್, ಎರಡು ಕಂಟ್ರಿಮೇಡ್ ಗನ್ ಮತ್ತು 30 ಗುಂಡು ಖರೀದಿಸಿದ್ದರು. ರಾಜು ಕಪನೂರ್ ಹೆಸರು ಉಲ್ಲೇಖದ ಬಳಿಕ‌ ಪೊಲೀಸರು ಎರಡು ನೋಟಿಸ್ ನೀಡಿದ್ದರು.
ಆದರೆ ಪೊಲೀಸರ ನೋಟಿಸಿಗೆ ಕ್ಯಾರೆ ಎನ್ನದ ರಾಜು ಕಪನೂರ್​ನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ತನ್ನನ್ನು ಕೊಲೆ ಮಾಡೋದಕ್ಕೆ ರಾಜು ಕಪನೂರ್ ಗನ್ ಖರೀದಿ ಮಾಡಿದ್ದ ಎಂದು ಸುದ್ದಿಗೋಷ್ಟಿ ನಡೆಸಿದ್ದ ಸಂದರ್ಭ ಹೇಳಿದ್ದರು. ಜೊತೆಗೆ ಮಣಿಕಂಠ ರಾಠೋಡ್​ ಸುದ್ದಿಗೋಷ್ಟಿ ನಡೆಸಿ ಸುದ್ದಿಗೋಷ್ಟಿಯಲ್ಲಿ ವಿಡಿಯೋ ಕಕೂಡ ರಿಲೀಸ್ ಮಾಡಿದ್ದರು. ಮಣಿಕಂಠ ರಾಠೋಡ್ ವಿಡಿಯೋ ರಿಲೀಸ್ ಆದ ಬಳಿಕ ಇದೀಗ ರಾಜು ಕಪನೂರ್​ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
