ಬೆಳಗಾವಿ:ಇಬ್ಬರು ಪುತ್ರಿಯರಿಗೆ ಸ್ಪೂರ್ತಿ-ಕೀರ್ತಿ ಎಂಬ ಹೆಸರಿಟ್ಟು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ಸಂಭವಿಸಿದೆ.
ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ ನೋವಿನಿಂದ ಹೊರಬರಲಾಗದ ಪತಿ ಜತೆಗೆ ದಂಪತಿಯ ಇಬ್ಬರೂ ಪುತ್ರಿಯರು ತಂದೆ ಜತೆಗೆ‌ ಭಾನುವಾರ ಬೆಳಗಿನ ಜಾವ ನೇಣಿಗೆ ಕೊರಳೊಡ್ಡಿರುವ ಘಟನೆ ಇಡೀ ಗ್ರಾಮಕ್ಕೆ ದಿಗ್ಬ್ರಮೆ ಮೂಡಿಸಿದೆ.
ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದ ನಿವಾಸಿ ಕಾಡಪ್ಪಾ ರಂಗಾಪುರೆ(48), ಕೀರ್ತಿ(20) ಮತ್ತು ಸ್ಪೂರ್ತಿ(18) ಆತ್ಮಹತ್ಯೆಗೆ ಶರಣಾದ ತಂದೆ-ಮಕ್ಕಳು. ಘಟನಾ ಸ್ಥಳಕ್ಕೆ ಪಿಎಸ್‌ಐ ರಾಕೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಜೂ.11ರಂದು ಚನ್ನವ್ವ ರಂಗಾಪುರೆ(40) ಹೃದಯಾಘಾತದಿಂದ ನಿಧನರಾಗಿದ್ದು. ಕಳೆದ ಹಲವು ವರ್ಷಗಳಿಂದ ಚನ್ನವ್ವ ಕಾಡಪ್ಪ ರಂಗಾಪುರೆ ಕುಟುಂಬ ತೋಟದ ಮನೆಯಲ್ಲಿಯೇ ವಾಸವಾಗಿದ್ದರು. ಮೊದಲಿನಿಂದಲೂ ಕಾಡಪ್ಪ ತಾನಾಯ್ತು ತನ್ನ ದುಡಿಮೆ ಆಯ್ತು ಎಂದಷ್ಟೇ ಜೀವನ ಸಾಗಿಸುತ್ತಿದ್ದ ಎನ್ನಲಾಗಿದ್ದು, ದಂಪತಿ ಇಬ್ಬರೂ ಪುತ್ರಿಯರನ್ನು ಪಿಯುಸಿ ವರೆಗೂ ಓದಿಸಿದ್ದರು.
ಚನ್ನವ್ವ ಅವರಿಗೆ ಇದಕ್ಕೂ ಮುನ್ನ ಮೂರು ಬಾರಿ ಹೃದಯಾಘಾತ ಉಂಟಾಗಿತ್ತು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರಿಂದ ಗುಣಮುಖರಾಗಿದ್ದರು. ಆದರೆ, ಜೂ.11ರಂದು ಶುಕ್ರವಾರ ಮತ್ತೇ ಹೃದಯಾಘತ ಸಂಭವಿಸಿ, ಆಸ್ಪತ್ರೆಗೆ ಕರೆದೋಯ್ದರೂ ಫಲಕಾರಿಯಾಗದೇ ಮೃತಪಟ್ಟಿದ್ದರು. ಘಟನೆಯಿಂದ ಪತಿ ಹಾಗೂ ಇಬ್ಬರೂ ಪುತ್ರಿಯರು ತೀವ್ರ ಮನನೊಂದಿದ್ದರು ಹೀಗಾಗಿಯೇ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಚಿಕ್ಕೋಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸೆಕ್ಸ್​ ಬಗ್ಗೆ ಮಾತಾಡೋ ಹುಡ್ಗಿರ್ಗೆ 5 ಲಕ್ಷ! 3 ವರ್ಷದಲ್ಲಿ 75 ಕೋಟಿ ಗಳಿಸಿ ತಗ್ಲಾಕೊಂಡ ಯೂಟ್ಯೂಬರ್​ ದಂಪತಿ

ಮೃತಳು ಸತ್ತ ಘಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರ ಸಂಚು ಬಿಚ್ಚಿಟ್ಟ ಟೆಕ್ಕಿ

ದೈಹಿಕ ಅಂತರ, ಮಾಸ್ಕ್​ ಇಲ್ಲದೆ ಜನರ ಮಧ್ಯೆ ಸಚಿವರ ಪತ್ನಿಯ ಜನ್ಮದಿನಾಚರಣೆ; ಕರೊನಾಗೆ ಡೋಂಟ್​ ಕೇರ್!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
