ಮೈಸೂರು:ಮಹಾಮಾರಿ ಕರೊನಾ ಸಂಕಷ್ಟದ ನಡುವೆಯೂ ಸ್ಪಾ ಹೆಸರಿನಲ್ಲಿ ಮಸಾಜ್​ ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿಡಿಗೇಡಿಗಳ ಅಡ್ಡೆ ಮೇಲೆ ವಿಜಯನಗರ ಪೊಲೀಸರು ದಾಳಿ ಮಾಡಿದ್ದಾರೆ.
ದಂಧೆ ನಡೆಸುತ್ತಿದ್ದ ಮಹಿಳೆ ಹಾಗೂ ಪ್ರಜ್ವಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಲ್ಯಾವೆಂಡರ್ ಯ್ಯೂನಿಸೆಕ್ಸ್ ಬ್ಯೂಟಿ ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ಕಿಡಿಗೇಡಿಗಳು ದಂಧೆ ನಡೆಸುತ್ತಿದ್ದರು. ಆನ್‌ಲೈನ್‌ನಲ್ಲೇ ಪುರುಷರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಆನ್‌ಲೈನ್‌‌ನಲ್ಲೇ ಸಮಯ ನಿಗದಿ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಯುವತಿಯರಿಂದ ಮಸಾಜ್ ಮಾಡಿಸುತ್ತಿದ್ದರು. ಇದರೊಂದಿಗೆ ಬೇರೆ ಚಟುವಟಿಕೆಗಳು ಸಹ ನಡೆಯುತ್ತಿದ್ದವು.
ಆತಂಕಕಾರಿ ವಿಚಾರವೆಂದರೆ ಲಾಕ್‌ಡೌನ್ ವೇಳೆಯೂ ಸ್ಪಾ ಸುತ್ತಲೂ ವಾಹನಗಳು ಸಂಚರಿಸುತ್ತಿದ್ದವು. ಈ ವೇಳೆ ಗಸ್ತಿನಲ್ಲಿದ್ದ ಹೆಡ್‌ಕಾನ್ಸ್​ಟೇಬಲ್​ ಸೋಮಾರಾಧ್ಯ ಎಂಬುವರು ಪರಿಶೀಲನೆ ನಡೆಸಿದ ಬಳಿಕ ತಮ್ಮ ತಂಡದೊಂದಿಗೆ ದಾಳಿ ನಡೆಸಿದಾಗ ಕಿಡಿಗೇಡಿಗಳ ದಂಧೆ ಬಯಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಾರವೂ ಬಿಗ್​ಬಾಸ್​ಗೆ ಬರಲ್ಲ ಕಿಚ್ಚ ಸುದೀಪ್​! ಅನಾರೋಗ್ಯದಿಂದ ಚೇತರಿಸಿಕೊಂಡರೂ ಬಾರದಿರುವುದಕ್ಕೆ ಕಾರಣವೇನು?

ಮದ್ವೆ ಉಡುಗೊರೆ ವಿಚಾರದಲ್ಲಿ ಗಲಾಟೆ: ಬಸ್​ ಚಾಲಕನನ್ನೇ ಕೊಂದು ಹಾಕಿದ ಸ್ನೇಹಿತರು

9 ಮಕ್ಕಳಿದ್ದರೂ ವೃದ್ಧೆ ಬೀದಿಗೆ!; ಎರಡು ಮನೆಯಿದ್ದರೂ ಅನಾಥೆ, ಮರದ ಕೆಳಗೆ ಆಶ್ರಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
