ಮೈಸೂರು:ಚುನಾವಣೆಗೆ ಮುಂಚೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯನ್ನು ನಾವಿಂದು ಈಡೇರಿಸಿದ್ದೇವೆ. ಕಾಂಗ್ರೆಸ್​ ಏನು ಹೇಳುತ್ತದೆ ಅದನ್ನು ಮಾಡುತ್ತದೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಹೇಳಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬೃಹತ್​ ವೇದಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಬಳಿಕ ರಾಹುಲ್​ ಗಾಂಧಿ ಅವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿಬಿಟಿ ವರ್ಗಾವಣೆ ಬಟನ್ ಒತ್ತಿದೆ ಕೋಟ್ಯಂತರ ಮಹಿಳೆಯರಿಗೆ ಹಣ ವರ್ಗಾವಣೆ ಆಗಿದೆ. ಪ್ರತಿ ತಿಂಗಳು ಈ ಹಣ ವರ್ಗಾವಣೆ ಆಗುತ್ತದೆ. ಇದು ಕರ್ನಾಟಕ ಸರ್ಕಾರದ ಗ್ಯಾರಂಟಿ ಎಂದರು.
ಇದನ್ನೂ ಓದಿ:ರಂಗಾಯಣ ರಘು ನಟನೆಯ ‘ಶಾಖಾಹಾರಿ’ ಚಿತ್ರಕ್ಕೆ, ಯೋಗರಾಜ್ ಭಟ್ ರಿಲೀಸ್​ ಮಾಡಿದ ಟೈಟಲ್​ ಪೋಸ್ಟರ್​
ಮಹಿಳೆಯರು ಉಚಿತ ಪ್ರಯಾಣ ಮಾಡಲಿ ಅಂತ ಶಕ್ತಿ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ. ಅನ್ನಭಾಗ್ಯ ಯೋಜನೆ ಮೂಲಕ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವಿದ್ಯುತ್ ಕೊಡುತ್ತಿದ್ದೇವೆ. ಈ ಎಲ್ಲ ಯೋಜನೆಗಳು ಮಹಿಳೆಯರ ಪರವಾದ ಯೋಜನೆಗಳಾಗಿವೆ. ಶೀಘ್ರದಲ್ಲೇ ಯುವ ನಿಧಿ ಯೋಜನೆಯನ್ನು ಜಾರಿ‌ ಮಾಡುತ್ತೇವೆ ಎಂದು ರಾಹುಲ್​ ಗಾಂಧಿ ಹೇಳಿದರು.
ಈ ಯೋಜನೆಗಳ ಹಿಂದೆ ಆಳವಾದ ಯೋಚನೆ ಇದೆ. ಮರದ ಬೇರು ಸದೃಢ ಇಲ್ಲ ಅಂದ್ರೆ ಮರ ನಿಲ್ಲುವುದಿಲ್ಲ. ಮರದ ಬೇರು ಗಟ್ಟಿಯಾಗಿರಬೇಕು. ನಮ್ಮ ಕಟ್ಟಡ ಕಟ್ಟಲು ಭದ್ರವಾದ ಅಡಿಪಾಯ‌ ಹಾಕಿದ್ದೇವೆ ಎಂದರು. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಮಹಿಳೆಯರ ಜತೆ ಮಾತನಾಡಿದ್ದೇನೆ. ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಆಗಿತ್ತು. ಇದೆಲ್ಲವು ಪಾದಯಾತ್ರೆ ವೇಳೆ ನನಗೆ ಗೊತ್ತಾಯ್ತು. ಬೆಲೆ ಇಳಿಸಿ ಎಂದು ಸಾವಿರಾರು ಮಹಿಳೆಯರು ಕೇಳಿದರು. ಮಹಿಳೆಯರು ಇಲ್ಲದೆ ರಾಜ್ಯ ಇರಲು‌ ಸಾಧ್ಯವಿಲ್ಲ. ಮಹಿಳೆಯರು ರಾಜ್ಯದ ಶಕ್ತಿ ಎಂದರು. ರಾಜ್ಯಾದ್ಯಂತ ಇವತ್ತು ‌ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರ ನೂರು ದಿನ ಅವಧಿ ಪೂರೈಸಿದೆ. ಇದರಿಂದ ನನಗೆ ಸಂತೋಷ ಆಗಿದೆ. ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ. ವಿಶೇಷ ದಿನವಾದ ಇಂದು ಮಹಿಳೆಯರ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ, ದೆಹಲಿ ಸರ್ಕಾರ ಕೊಟ್ಯಾಧಿಪತಿಗಳಿಗಾಗಿ ಕೆಲಸ ಮಾಡುತ್ತದೆ. ಅವರ ಎರಡ್ಮೂರು ಗೆಳೆಯರ ಪರವಾಗಿ ಮಾತ್ರ‌ ಕೆಲಸ ಮಾಡುತ್ತದೆ ಎಂದರು. ಕರ್ನಾಟಕದ ಐದು ಗ್ಯಾರಂಟಿಗಳು, ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರ ಪರವಾದ ಸರ್ಕಾರ‌ ನಮ್ಮದು. ನಾವು ಯಾವುದೇ ಧರ್ಮ, ಜಾತಿ ಅಂತ‌ ನೋಡಲ್ಲ. ಎಲ್ಲರಿಗೂ ತಲುಪುವ ಕಾರ್ಯಕ್ರಮ ‌ಮಾಡುತ್ತೇವೆ. ದೇಶದಲ್ಲಿ ಕರ್ನಾಟಕ ಮಾದರಿ ಆಗಿದೆ. ದೇಶದ ಆಡಳಿತಕ್ಕೆ ಕರ್ನಾಟಕ ದಿಕ್ಸೂಚಿ ಆಗಿದೆ ಎಂದು ಹೊಗಳಿದರು.
ಇದನ್ನೂ ಓದಿ:ವಿಜಯ್​ ಹಿಡಿದಿರುವ ಕೈ ಯಾರದ್ದು? ಚರ್ಚೆ ಹುಟ್ಟುಹಾಕಿದ ವಿಜಯ್​ ದೇವರಕೊಂಡ ಇನ್​ಸ್ಟಾ ಸ್ಟೋರಿ!
ಗೃಹಲಕ್ಷ್ಮಿ ಯೋಜನೆ ವಿಶ್ವದ ಅತಿ ದೊಡ್ಡ ಯೋಜನೆಯಾಗಿದೆ. ಭಾರತದ ಬೃಹತ್ ಹಣ ವರ್ಗಾವಣೆ ಯೋಜನೆ ಇದು. ಮಕ್ಕಳ ಭವಿಷ್ಯದ ಯೋಜನೆ ಇದು. ನಾವು ಮಾತು ಕೊಟ್ಟಂತೆ ನಾವು ನಡೆದಿದ್ದೇವೆ. ಮಹಿಳೆಯರೇ ಈ ರಾಜ್ಯದ ಅಭಿವೃದ್ಧಿಗೆ ಕಾರಣ. ನಾವು ಯಾವತ್ತೂ ಸುಳ್ಳು ಭರವಸೆ ಕೊಡುವುದಿಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿ‌ ಮಹಿಳೆಯರ ಪರವಾಗಿ ಮಾತನಾಡಿ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಹಿಳೆಯರ ಪರವಾಗಿ ರಾಹುಲ್ ಬ್ಯಾಟ್​ ಬೀಸಿದರು.(ದಿಗ್ವಿಜಯ ನ್ಯೂಸ್​)
ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ​ ಖರ್ಗೆ

Gruhalakshmi Scheme Inauguration in Mysuru | ತಮಟೆ ಸದ್ದಿಗೆ ‘ಗೃಹಲಕ್ಷ್ಮೀ’ಯರ ಸಖತ್​ ಟಪ್ಪಾಂಗುಚ್ಚಿ

Gruhalakshmi Scheme Inauguration in Mysuru: ವೇದಿಕೆ ಮೇಲೆ ಕೈ ಎತ್ತಿ ಶಕ್ತಿ ಪ್ರದರ್ಶನ ಮಾಡಿದ ನಾಯಕರು​

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:5 × one =
Remember me
