ಬೆಂಗಳೂರು:87 ದೇಶಗಳ ಲಕ್ಷಾಂತರ ಜನರು ಉತ್ತಮ ಮಾನಸಿಕ ಆರೋಗ್ಯ ಮತ್ತು ಸಂತೋಷದ ಪಯಣವನ್ನು ಆರಂಭಿಸಲು ಆರ್ಟ್ ಆಫ್ ಲಿವಿಂಗ್ ನಿಂದ ಆಯೋಜಿಸಲ್ಪಟ್ಟಿದ್ದ ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಾಗತಿಕ ಮಾನವತಾವಾದಿಯಾದ, ಜಾಗತಿಕ ಶಾಂತಿದೂತರಾದ ಗುರುದೇವ್ ಶ್ರೀ ಶ್ರೀ ರವಿಶಂಕರರ 68ನೆಯ ಹುಟ್ಟು ಹಬ್ಬದ ಸಂಭ್ರಮವನ್ನೂ ಈ ಸಂದರ್ಭದಲ್ಲಿ ಆಚರಿಸಲಾಯಿತು.
ಭಾರತದಲ್ಲಿ ಲಕ್ಷಾಂತರ ಭಕ್ತರು ಈ ವಿಶೇಷ ದಿನವನ್ನು ಸೇವೆಯಲ್ಲಿ, ಸಂಗೀತದಲ್ಲಿ ಮತ್ತು ತಮ್ಮ ಸಮುದಾಯಗಳಲ್ಲಿ ಸಂತೋಷವನ್ನು ಹಂಚುವುದರಲ್ಲಿ ಕಳೆದರು. ರಮ್ಯಮನೋಹರವಾದ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರವಿಶಂಕರ್​ ಗುರೂಜಿ ಅವರು, ಜ್ಞಾನದಲ್ಲಿ ಮುಳುಗಿದ್ದಾಗ ಪ್ರತಿದಿನವೂ ಸಂತೋಷಮಯವಾದ ದಿನವೇ. ನಮ್ಮ ಜೀವನವು ಸೇವೆ, ಸತ್ಸಂಗ, ಸಾಧನಕ್ಕೆ ಮುಡುಪಾಗಿದ್ದಾಗ ಪ್ರತಿ ದಿನವೂ ಒಂದು ಸಂಭ್ರಮವೇ ಎಂದು ಕಂಡುಕೊಳ್ಳುತ್ತೇವೆ. ಎಲ್ಲರಿಗೂ ಸಂತೋಷವನ್ನು ತನ್ನಿ. ” ನಾನು ಇಲ್ಲಿ ಎಲ್ಲರಿಗೂ ಸಂತೋಷವನ್ನು ತರಲು ಇಲ್ಲಿದ್ದೇನೆ ಎಂಬ ಎಂಬ ಒಂದು ಆಲೋಚನೆಯೇ ಸಾಕು, ನಿಮ್ಮ ದಾರಿಯಲ್ಲಿರುವ ಅಡಚಣೆಗಳು ಮತ್ತು ನಿಮಗೆ ಹೇಗೆ ಬೇಕೋ ಹಾಗೆ ವಿಷಯ ನಡೆಯಲು ಎಂದು ಹೇಳಿದ್ದಾರೆ.
ಇದನ್ನೂ ಓದಿ:LSGvsDC; ಈ ಪಂದ್ಯದಲ್ಲಿ ಯಾರು ಗೆದ್ದರೆ ಆರ್​ಸಿಬಿ ಪಾಲಿಗೆ ಪ್ಲಸ್​
ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಂತೋಷವಾಗಿರುವ, ಮನಸ್ಸು ತಿಳಿಯಾಗಿ, ಸ್ಪಷ್ಟವಾಗಿರುವ, ನೋವು ಮತ್ತು ಒತ್ತಡ ರಹಿತರಾಗಿರುವರೆಂದು, ಕೇವಲ ನಾಲ್ಕು ದಿವಸಗಳ ಪ್ರಾಣಾಯಾಮ, ಯೋಗ ಮತ್ತು ಸುದರ್ಶನ ಕ್ರಿಯೆಯ ಅಭ್ಯಾಸದಿಂದ ಅನುಭವಿಸಿದ್ದರಲ್ಲದೆ, ಕೆಲವು ಆಳವಾದ ಒಳನೋಟವನ್ನೂ ಪಡೆದುಕೊಂಡರೆಂದರು. ಆರ್ಟ್ ಆಫ್ ಲಿವಿಂಗ್ ನ ಶಾಲೆಗಳಿಂದ ಮರಗಳನ್ನು ನೆಡಲಾಯಿತು. ರಕ್ತದಾನದ ಶಿಬಿರಗಳನ್ನು, ವೈದ್ಯಕೀಯ ಶಿಬಿರಗಳನ್ನು ಮತ್ತು ಆಯುಷ್ಯ ಹೋಮಗಳನ್ನು ಸಾವಿರಾರು ಆರ್ಟ್ ಆಫ್ ಲಿವಿಂಗ್ ನ ಕೇಂದ್ರ ಗಳಲ್ಲಿ ನಡೆಸಲಾಯಾತು.
ಮಹಾರಾಷ್ಟ್ರದ ಸತಾರ ಜಿಲ್ಲೆಯ 68 ಹಳ್ಳಿಗಳಲ್ಲಿ ಆರ್ಟ್ ಆಫ್ ಲಿವಿಂಗ್ ಹಾಗೂ ಸಹ್ಯಾದ್ರಿ ದೇವ್ ರಾಯ್ ( ಪ್ರಸಿದ್ಧ ನಟರಾದ ಸಯ್ಯಾಜಿ ಶಿಂಧೆಯವರ ಯೋಜನೆ) ಜಂಟಿಯಾಗಿ ಅಪಾರ ಸಂಖ್ಯೆಯಲ್ಲಿ ಗಿಡಗಳನ್ನು ನೆಡಲಾಯಿತು.ರಾಯ್ಪುರ್ ನ ಹೊಸ ಧ್ಯಾನದ ಕೇಂದ್ರವಾದ ಗ್ಯಾನ್ ಕ್ಷೇತ್ರವನ್ನು ಗುರುದೇವರು ವರ್ಚುಯೃಲ್ ಆಗಿ ಉದ್ಘಾಟಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twenty =
Remember me
