ಬೆಂಗಳೂರು: ಕೃಷಿ ಮತ್ತಿತರ ಕ್ಷೇತ್ರದಲ್ಲಿ ಹೊಸ ಪ್ರಯೋಗದ ಕೆಟ್ಟ ಪರಿಣಾಮಗಳು ಕೂಡಲೇ ಗೊತ್ತಾಗುವುದಿಲ್ಲ. ಅಂಥ ದುಷ್ಪರಿಣಾಮಗಳನ್ನು ತಪ್ಪಿಸಲು ಸಾವಯವ- ನೈಸರ್ಗಿಕ ಕೃಷಿ ಪದ್ಧತಿ ಅನಿವಾರ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅಭಿಮತ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ಪಕ್ಷದ ರಾಜ್ಯ ಕಾರ್ಯಾಲಯ ದಲ್ಲಿ ಶನಿವಾರ ಏರ್ಪಡಿಸಿದ್ದ ‘ನೈಸರ್ಗಿಕ ಕೃಷಿ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಯವ ಕೃಷಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ ಎಂದು ವಿವರಿಸಿದರು. ರೈತ ಮೋರ್ಚಾ ಅತ್ಯಂತ ಸಕ್ರಿಯವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಪ್ರಸ್ತುತ 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದ 10 ಜನರಲ್ಲಿ 6 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಕನಿಷ್ಠ 5-6 ಜನರಿಗೆ ರಕ್ತದೊತ್ತಡ ಇದೆ. ಈ ವಯೋಮಾನದವರಲ್ಲಿ ಯಾವುದಾದರೂ ರೋಗಕ್ಕೆ ಕಾಯಿಲೆಗೆ ಔಷಧಿ ಸೇವಿಸದವರು ಅತ್ಯಂತ ವಿರಳ ಎಂದು ನುಡಿದರು. ಸಾವಯವ- ನೈಸರ್ಗಿಕ ಕೃಷಿ ಮೂಲಕ ಹಲವಾರು ರೋಗಗಳು ಬರದಂತೆ ತಡೆಯಬಹುದೆಂದು ತಿಳಿಸಿದರು.
ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ನಾವು ಸಾಕಷ್ಟು ಕೆಲಸ ಮಾಡಬೇಕಿದೆ. ಅಭಿವೃದ್ಧಿ ಆದಾಗ ಅದರ ಋಣಾತ್ಮಕ ಪರಿಣಾಮ ನಮ್ಮ ಪರಿಸರದ ಮೇಲೂ ಬೀರುತ್ತದೆ. ಆಹಾರ ಕ್ರಾಂತಿಯಿಂದ ಆಹಾರದ ಸಮಸ್ಯೆ ಪರಿಹಾರವಾಯಿತು. ಆದರೆ, ರೋಗಗಳ ಸಂಖ್ಯೆಯೂ ಹೆಚ್ಚಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕ್ಯಾನ್ಸರ್ ಇವತ್ತು ಸರ್ವಸಾಮಾನ್ಯವಾಗಿದೆ. 20 ವರ್ಷಗಳ ಕಾಲ ಎಂಡೋ ಸಲ್ಫಾನ್ ಅನ್ನು ಹೆಲಿಕಾಪ್ಟರ್ ಮೂಲಕ ಸಿಂಪಡಿಸುತ್ತಿದ್ದರು. ಇದರಿಂದ ಪುಟ್ಟ ಮಕ್ಕಳು ಬುದ್ಧಿಮಾಂದ್ಯ ಮತ್ತು ಅಂಗವಿಕಲರಾಗಿ ಹುಟ್ಟುವಂತಾಯಿತು ಎಂದು ನಿರ್ಮಲ್ ಕುಮಾರ್ ಸುರಾನಾ ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ಕೃಷಿಗೆ ಹಲವಾರು ಆಯಾಮಗಳಿವೆ. ನೈಸರ್ಗಿಕ ಕೃಷಿ ಎಂದರೆ ನಿಸರ್ಗದತ್ತ ಕೃಷಿ ಮುಂದುವರಿಸುವಿಕೆ ಎಂದು ತಿಳಿಸಿದರು. ಹಿಂದೆ ಹಸಿರು ಕ್ರಾಂತಿಗೆ ಪೂರಕವಾಗಿ ರಾಸಾಯನಿಕ ಬಳಕೆ ಹೆಚ್ಚಾಯಿತು. ಆರ್ಥಿಕವಾಗಿ ಲಾಭ ಆದರೂ ಆ ಲಾಭದ ಹಣವನ್ನು ಆಸ್ಪತ್ರೆಗೆ ಕೊಡುವಂತಾಯಿತು ಎಂದು ವಿಶ್ಲೇಷಣೆ ಮಾಡಿದರು.
ಕೃಷಿ ಸುಧಾರಣೆ ವೇಳೆ ವೆಚ್ಚ ಹೆಚ್ಚಾಗಿ ಸಾಲವೂ ಹೆಚ್ಚಾಯಿತು. ಮನುಷ್ಯ ಸತ್ತರೆ ಮಣ್ಣಿಗೆ ಹಾಕಬಹುದು; ಆದರೆ ಮಣ್ಣು ಸತ್ತರೆ ಎಲ್ಲಿ ಹಾಕಬೇಕು ಎಂಬ ರೈತರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದ ಅವರು, ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಅನಿವಾರ್ಯ ಎಂದು ತಿಳಿಸಿದರು. ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ ಎಂದರು.
ಸಗಣಿ, ಗಂಜಲು, ಹಸಿರು ಎಲೆಗಳನ್ನು ಗೊಬ್ಬರವಾಗಿ ಬಳಸಬೇಕು. ನೈಸರ್ಗಿಕ ಕೃಷಿಗೆ ಅದು ಅಗತ್ಯ. ಶೂನ್ಯ ಬಂಡವಾಳದ ಕೃಷಿಯೂ ಇದೆ ಎಂದ ಅವರು, ಮಣ್ಣಿನ ಗುಣಧರ್ಮ, ನೀರಿನ ಲಭ್ಯತೆ, ಕೃಷಿ ಕೂಲಿಕಾರರ ಲಭ್ಯತೆ, ಹವಾಮಾನದ ಆಧಾರದಲ್ಲಿ ಸೂಕ್ತ ಕೃಷಿ ಬೆಳೆಯ ಕುರಿತು ನಿರ್ಧರಿಸಲು ಸಲಹೆ ನೀಡಿದರು.
ಕೃಷಿಯ ವಾಣಿಜ್ಯೀಕರಣ ಆಗಿದೆ. ಆದರೆ, ಮತ್ತೊಂದೆಡೆ ಆರೋಗ್ಯ ಕಳಕೊಂಡಿದ್ದೇವೆ ಎಂದು ತಿಳಿಸಿದ ಅವರು, ಸಮಾಜಕ್ಕೆ ಒಳಿತು ಕೊಡುವ ನೈಸರ್ಗಿಕ ಕೃಷಿ ಕುರಿತು ರೈತರಿಗೆ ಮಾಹಿತಿ ಕೊಡಬೇಕು ಎಂದು ಈರಣ್ಣ ಕಡಾಡಿ ತಿಳಿಸಿದರು.
ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗುರುಲಿಂಗ ಗೌಡ, ರಾಜ್ಯ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ರಾಜ್ಯ ಕಾರ್ಯದರ್ಶಿ ಡಾ.ನವೀನ್ ಕುಮಾರ್, ರೈತ ಮೋರ್ಚಾ ಮಾಧ್ಯಮ ಸಂಚಾಲಕ ಶರತ್ ಹೆಗಡೆ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಸಂಚಾಲಕರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 9 =
Remember me
