ನವದೆಹಲಿ:ಪ್ರಸಕ್ತ ವರ್ಷದ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’ಯ ಸರಕು ಸಾಗಣೆ ವಿಭಾಗದಲ್ಲಿ ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ‘ವರ್ಷದ ವ್ಯಕ್ತಿ’ (ಬಿಜಿನೆಸ್ ಪರ್ಸನ್ ಆಫ್ ದ ಇಯರ್) ಪುರಸ್ಕಾರ ಪಡೆದಿದ್ದಾರೆ. ಸಂಸ್ಥೆಯನ್ನು ಮುನ್ನಡೆಸುವಲ್ಲಿ ಅವರ ಗಣನೀಯ ಪ್ರಯತ್ನಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಟಿವಿ9 ನೆಟ್​ವರ್ಕ್ ಮತ್ತು ಲೀಡರ್ಸ್ ಆಫ್ ರೋಡ್ ಟ್ರಾನ್ಸ್ ಪೋರ್ಟ್ ಅವಾರ್ಡ್ಸ್ ಸಂಸ್ಥೆಯು ಕಾಂಟಿನೆಂಟಲ್ ಟೈರ್ಸ್ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಈ ಸಂದರ್ಭದಲ್ಲಿ ಡಾ.ಆನಂದ ಸಂಕೇಶ್ವರ ಅವರು ಮಾತನಾಡಿ, ವಿಆರ್​ಎಲ್ ಸಮೂಹದ ಪ್ರತಿಯೊಬ್ಬ ಉದ್ಯೋಗಿಯ ಪರಿಶ್ರಮ ಮತ್ತು 1976ರಲ್ಲಿ ಕೇವಲ ಒಂದು ಟ್ರಕ್​ನೊಂದಿಗೆ ಕಂಪನಿ ಆರಂಭಿಸಿ ಈ ಮಟ್ಟಕ್ಕೆ ಬೆಳೆಸಿದ ತಮ್ಮ ತಂದೆ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ದೂರದರ್ಶಿತ್ವವನ್ನು ಸ್ಮರಿಸಿದರು. ‘ಕಂಪನಿ ಇಂದು 6100ಕ್ಕೂ ಹೆಚ್ಚು ವಾಹನಗಳನ್ನು ಹೊಂದಿದೆ. ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ’ ಎಂದು ಡಾ. ಆನಂದ ಸಂಕೇಶ್ವರ ಅವರು ವಿವರಿಸಿದಾಗ, ಸಭಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ವಿಜಯಾನಂದ ಟ್ರಾವೆಲ್ಸ್​ಗೂ ಪುರಸ್ಕಾರ:ಇದೇ ವೇಳೆ, ಶಿವಾ ಸಂಕೇಶ್ವರ ನೇತೃತ್ವದ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್, ಬಸ್ ಆಪರೇಟರ್ಸ್ ವಿಭಾಗದಲ್ಲಿ ‘ಎಮರ್ಜಿಂಗ್ ಬ್ರ್ಯಾಂಡ್ ಆಫ್ ದ ಇಯರ್’ ಪ್ರಶಸ್ತಿಗೆ ಪಾತ್ರವಾಯಿತು. ಬಸ್ ಕಾರ್ಯಾಚರಣೆ ಬಿಜಿನೆಸ್ ಅನ್ನು ವಿಆರ್​ಎಲ್ ಲಾಜಿಸ್ಟಿಕ್ಸ್​ನಿಂದ 2023ರಲ್ಲಿ ಪ್ರತ್ಯೇಕಿಸಲಾಗಿದೆ. ಅದು ಈಗ ಸ್ವತಂತ್ರ ಕಂಪನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚು ಬಸ್​ಗಳನ್ನು ಕ್ಷಿಪ್ರ ಅವಧಿಯಲ್ಲಿ ಸೇರ್ಪಡೆ ಮಾಡಿರುವುದು, ಹೊಸಹೊಸ ಮಾರ್ಗಗಳನ್ನು ಪ್ರಾರಂಭಿಸಿರುವುದು, ನವನವೀನ ಅಭ್ಯಾಸಗಳನ್ನು ಅಳವಡಿಸಿರುವುದು ಸೇರಿ ಮುಂತಾದ ಕಾರಣಗಳಿಂದ ಮುಂದಿನ ದಿನಗಳಲ್ಲಿ ಭಾರಿ ಯಶಸ್ಸು ಸಾಧಿಸಲಿರುವ ಹಿನ್ನೆಲೆಯಲ್ಲಿ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಅನ್ನು ‘ವರ್ಷದ ಎಮರ್ಜಿಂಗ್ ಬ್ರ್ಯಾಂಡ್’ ಆಗಿ ಆಯ್ಕೆ ಮಾಡಲಾಗಿದೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾಡಿರುವ ಸಾಧನೆ ಗುರುತಿಸಿ ಪುರಸ್ಕರಿಸುವುದು ಈ ಪ್ರಶಸ್ತಿಯ ಹಿಂದಿನ ಉದ್ದೇಶವಾಗಿದೆ. ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದೆ, ಸಂಪೂರ್ಣವಾಗಿ ಸಾಧನೆಯನ್ನೇ ಆಧರಿಸಿ ಆಯ್ಕೆ ಮಾಡಿದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ವಿಆರ್​ಎಲ್​ನ ಎರಡೂ ಸಂಸ್ಥೆಗಳು ಈ ಮೂಲಕ ರಾಷ್ಟ್ರಮಟ್ಟದ ಗೌರವಕ್ಕೆ ಭಾಜನವಾಗಿವೆ.
ವಿವಿಧ ಕಂಪನಿಗಳಿಗೆ ಗೌರವ:ಇದೇ ಸಂದರ್ಭದಲ್ಲಿ ವಿ-ಟ್ರಾನ್ಸ್, ಗ್ಯಾನ್ ಲಾಜಿಸ್ಟಿಕ್ಸ್ ಪ್ರೖೆ.ಲಿ., ಜೆಕೆಎಂ ಟ್ರಾನ್ಸ್​ಪೋರ್ಟ್, ಎಚ್​ಬಿಆರ್ ಟ್ರಾನ್ಸ್​ಪೋರ್ಟ್, ಪಂಕಜ್ ಟ್ರಾನ್ಸ್​ಪೋರ್ಟ್ ಮುಂತಾದ ಕಂಪನಿಗಳಿಗೂ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 50-200 ವಾಣಿಜ್ಯ ವಾಹನಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಕೆಲವು ಮಹಿಳಾ ಉದ್ಯಮಿಗಳನ್ನೂ ಗುರುತಿಸಿ ಪುರಸ್ಕರಿಸಲಾಯಿತು.
ಡಿಸೆಂಬರ್‌ನಲ್ಲಿ ಗಗನಯಾನ ಮೊದಲ ಪರೀಕ್ಷಾರ್ಥ ಉಡಾವಣೆ: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
