ಬೆಂಗಳೂರು:ರೌಡಿ ಮಗ ಮತ್ತೊಬ್ಬ ರೌಡಿನೇ ಆಗ್ಬೇಕಾ? ಪೊಲೀಸರೇ ನನ್ನ ಮಗನನ್ನ ಕ್ರಿಮಿನಲ್ ಮಾಡ್ತಿದ್ದಾರೆ. ಕಮಿಷನರ್ ಕಚೇರಿಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮನೆ ಮಂದಿಯೆಲ್ಲಾ ಸಾಯ್ತೀವಿ… ಹೀಗಂತ ಕಣ್ಣೀರಿಟ್ಟದ್ದು ಕುಖ್ಯಾತ ರೌಡಿ ಸೈಕಲ್ ರವಿ ಪತ್ನಿ ಕೋಮಲಾ.
ಕೆಂಪೇಗೌಡ ನಗರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿರುವ ಸೈಕಲ್ ರವಿ ಪತ್ನಿ, ನನ್ನ ಮಗನನ್ನು ಪೊಲೀಸರು ಠಾಣೆಗೆ ಕರೆ ತಂದು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದಾರೆ. ನನ್ನ ಮಗ ಶಿವಶಂಕರ್ ಬಿಎ ಓದುತ್ತಿದ್ದಾನೆ. ಅವನನ್ನ ಒಳ್ಳೆಯ ಮನುಷ್ಯನನ್ನಾಗಿ ಮಾಡ್ಬೇಕು ಅಂತ ಕಷ್ಟ ಪಡ್ತಾ ಇದೀವಿ‌. ಎಲ್ಲ ಪೊಲೀಸರು ‘ರೌಡಿ ಮಗ ರೌಡಿ ಮಗ’ ಅಂತ ಹೀಯಾಳಿಸುತ್ತಿದ್ದಾರೆ‌… ಎಂದು ಕಣ್ಣೀರಿಟ್ಟರು.ಇದನ್ನೂ ಓದಿರಿಆನೆಗೆ ಇಬ್ಬರು ಬಲಿ: ಬಹಿರ್ದೆಸೆಗೆ ಹೋದವ ಮಸಣ ಸೇರಿದ, ಮತ್ತೊಬ್ಬ ಕಾಫಿ ಕಣದಲ್ಲೇ ಪ್ರಾಣಬಿಟ್ಟ
ಸೈಕಲ್ ರವಿ ಬೇಕು ಅಂದಾಗ ಪೊಲಿಸರು ಮನೆಯವರನ್ನ ಕರ್ಕೊಂಡು ಹೋಗ್ತಾರೆ. ನನ್ನ‌ ದೊಡ್ಡ ಮಗನನ್ನು ಕೆಜಿ ನಗರ ಪೊಲೀಸರು ಅಕ್ರಮವಾಗಿ ಕೂಡಿಟ್ಟಿದ್ದಾರೆ. ನನ್ನ ಮಗನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡ್ಬೇಕು ಎಂದು ಹೊರಾಡುತ್ತಿದ್ದೇನೆ. ಆದರೆ ಪೊಲೀಸರು ನನ್ನ ಕುಟುಂಬವನ್ನ ಬಿಡ್ತಿಲ್ಲ. ನನ್ನ ಗಂಡನ ಮುಖ ನೋಡಿ ಎಷ್ಟೋ ದಿನ ಆಯ್ತು. ನನ್ನ ತಮ್ಮ ರಾಜೇಂದ್ರನನ್ನೂ ಕರ್ಕೊಂಡು ಹೋಗಿ‌ ಟಾರ್ಚರ್ ಕೊಡ್ತಿದ್ರು. ಅವನ ಮೇಲೆ ರೌಡಿಶೀಟರ್ ಓಪನ್ ಮಾಡಿದ್ರು. ಆರು ತಿಂಗಳ ಹಿಂದೆ ರಾಜೇಂದ್ರ ಮೃತಪಟ್ಟಿದ್ದಾನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸೈಕಲ್ ರವಿ ವಾಸವಿಲ್ಲ ಎಂದು ಕೋಮಲಾ ಗೋಳಾಡುತ್ತಿದ್ದರು.
ಇನ್ನು ತನ್ನ ಮಗನನ್ನು ಅಕ್ರಮವಾಗಿ ಕೂಡಿಟ್ಟಿದ್ದಾರೆ ಎಂದು ಕೆಜಿ ನಗರ ಪೊಲೀಸರ‌ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸೈಕಲ್ ರವಿ ಪತ್ನಿ ಕೋಮಲಾ ಸಜ್ಜಾಗಿದ್ದಾರೆ. ಹೇಬಿಯಸ್​ ಕಾರ್ಪಸ್ ಫೈಲ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ…

ಖಾಸಗಿ ಶಾಲೆ ಮಾಲೀಕ ಆತ್ಮಹತ್ಯೆ! ಸಾವಿಗೂ ಮುನ್ನ ಬರೆದ ಡೆತ್​ನೋಟ್​ನಲ್ಲಿದೆ ನೋವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 11 =
Remember me
