ಆನೇಕಲ್​ (ಬೆಂಗಳೂರು ಗ್ರಾಮಾಂತರ):ಬಡಾವಣೆ ನಿರ್ಮಾಣ ಮಾಡುವ ಉದ್ದೇಶದಿಂದ ಅಕ್ಕಪಕ್ಕದ ಮನೆಯವರನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಿ ನಡೆದಿದೆ.
ಇದರಿಂದ ನೊಂದ ಜನರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ! ಬೆಂಗಳೂರು ನಗರ ಮಧ್ಯದಲ್ಲಿ ಹಾಡುಹಗಲೇ ಸ್ಫೋಟಕಗಳ ಬಳಕೆ ಮಾಡಿದರೂ ಇದು ಯಾರ ಗಮನಕ್ಕೂ ಬರುತ್ತಿಲ್ಲ! ಗೊಟ್ಟಿಗೆರೆ ಸರ್ವೆ ನಂಬರ್ 61ರಲ್ಲಿ ಈ ಕಾರ್ಯ ನಡೆಯುತ್ತಿದೆ. ಮಾರುತಿ ನಗರದ ಕಮ್ಮನಹಳ್ಳಿ ಬ್ರಹ್ಮಕುಮಾರಿ ಆಶ್ರಮದ ಬಳಿ ವಾಸ ಇರುವ ಕಡುಬಡವರ ಸ್ಥಿತಿ ಹೇಳತೀರದಾಗಿದೆ.ಅಕ್ಕಪಕ್ಕದಲ್ಲೇ ಬೃಹತ್ ಕಟ್ಟಡಗಳು ಇದ್ದರೂ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟ್ ಮಾಡಲಾಗುತ್ತಿದ್ದು, ಬಡಾವಣೆ ನಿರ್ಮಾಣ ಮಾಡಲು ಇದು ಅನಿವಾರ್ಯ ಎನ್ನುತ್ತಿದ್ದಾರೆ ಬಿಲ್ಡರ್​ಗಳು.
ಕಲ್ಲುಬಂಡೆ ಸ್ಫೋಟಕ್ಕೆ ಅಕ್ಕಪಕ್ಕದ ಮನೆಗಳು ಬಿರುಕುಬಿಟ್ಟಿದ್ದು ಒಂದೆಡೆಯಾದರೆ ಮನೆ ಖಾಲಿ ಮಾಡಲು ಬಲಾಢ್ಯರ ಬೆದರಿಕೆಗೆ ಹಾಕುತ್ತಿರುವ ಕಾರಣ ಬಡವರು ಬಳಲಿ ಹೋಗಿದ್ದಾರೆ. ಅಚ್ಚರಿಯ ವಿಷಯ ಎಂದರೆ ಇದು ಸರ್ಕಾರಿ ಜಮೀನು ಆಗಿದ್ದು, 25 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ ಸ್ಥಳೀಯರು. ಇಲ್ಲಿ 53 ಮನೆಗಳು ಇದ್ದು, ಸರ್ಕಾರದಿಂದಲೇ ಹಲವರಿಗೆ ಖಾತೆ ಆಗಿದೆ.
ಮೂರು ಲಕ್ಷ ಕೊಡುತ್ತೇನೆ ಮನೆ ಖಾಲಿ ಮಾಡಿ ಅಂತ ಬೆದರಿಕೆ ಹಾಕುತ್ತಿದ್ದಾರೆ. ನಾವು ಹೋಗಲ್ಲ ಎಂದುದಕ್ಕೆ ನಿಮ್ಮನ್ನ ಒದ್ದು ಕಳಿಸುತ್ತೇನೆ. ಯಾವ ಸರ್ಕಾರ, ಪೊಲೀಸ್ ಠಾಣೆಗೆ ಹೋದರೂ ನಿಮಗೆ ಸಹಾಯ ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಉಮ್ರಾ ಗ್ರೂಪ್ ಆಫ್​ ಕಂಪೆನಿ‌ ಇಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.
ಪ್ರಧಾನಿ ಕಾಲಿಗೆ ಬೀಳಲು ಬಂದ ಮಹಿಳೆ- ಮುಂದೇನಾಯ್ತು ನೋಡಿ, ಜಾಲತಾಣದಲ್ಲಿ ಶ್ಲಾಘನೆಗಳ ಮಹಾಪೂರ

ನಿರುದ್ಯೋಗಿಗಳಗೆ ಗುಡ್​ನ್ಯೂಸ್ ಕೊಟ್ಟ ಸಿಎಂ: ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
