ಬೆಂಗಳೂರು:ಪ್ರವಾಹದಿಂದಾಗಿ ಅನೇಕ ಜಿಲ್ಲೆಗಳು ನಲುಗಿ ಹೋಗಿರುವ ನಡುವೆಯೇ ಕೆಲವರಿಗೆ ಅದರಲ್ಲಿಯೂ ಹೆಚ್ಚಾಗಿ ಯುವತಿಯರಿಗೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ಶುರುವಾಗಿದೆ.
ಇದಾಗಲೇ ಸೆಲ್ಫಿ ವ್ಯಾಮೋಹಕ್ಕೆ ಬಿದ್ದು ಎಷ್ಟೋ ಮಂದಿ ಜೀವ ಕಳೆದುಕೊಂಡಿದ್ದರೂ ಬುದ್ಧಿ ಇಲ್ಲದ ಜನರು, ಪ್ರವಾಹದ ಸಂದರ್ಭದಲ್ಲಿಯೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಹಸ ಮಾಡುವವರಿದ್ದಾರೆ.
ಇದು ಕೆಲವು ಕಡೆಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ, ಜಪಲಾತಗಳ ಬಳಿ, ಪ್ರವಾಹದಿಂದ ನೀರು ಧುಮ್ಮಿಕ್ಕುತ್ತಿರುವ ಸ್ಥಳಗಳ ಕಡೆಗಳಲ್ಲಿ ಇಂಥ ಹುಚ್ಚಾಟ ಪ್ರದರ್ಶಿಸುವವರಿಗೆ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಆರು ಟಿಎಂಸಿ ನೀರು; ನಾಲ್ಕು ತಾಲೂಕುಗಳಲ್ಲಿ ಪ್ರವಾಹ ಭೀತಿ
ಮಳೆಯ ಅಬ್ಬರದಿಂದಾಗಿ ಜಲಪಾತಗಳು ಭೋರ್ಗರೆಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಿರುವ ಸಂದರ್ಭದಲ್ಲಿಯೇ ಧುಮುಕುತ್ತಿರುವ ಜನಪಾತ ಸೇರಿದಂತೆ ಪ್ರವಾಹದ ಅಪಾಯವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಅಂಥವರಿಗೆ ಆರು ತಿಂಗಳು ಶಿಕ್ಷೆ ನೀಡಲಾಗುವುದು ಎಂಬ ಎಚ್ಚರಿಕಾ ಫಲಕವನ್ನು ಎಲ್ಲೆಡೆ ಅಳವಡಿಸುವಂತೆ ಸಚಿವ ಆರ್‌ ಅಶೋಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾಸನಕ್ಕೆ ಭೇಟಿ ಕೊಟ್ಟಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಈ ಕುರಿತು ಮಾತನಾಡಿ, ಫಲಕ ಅಳವಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಒಂದು ವೇಳೆ ಈ ಎಚ್ಚರಿಕೆ ಫಲಕವನ್ನು ಮೀರಿ ಸೆಲ್ಫಿ ತೆಗೆದುಕೊಂಡರೆ ಅಂಥವರನ್ನು ಬಂಧಿಸಬೇಕು ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 6 =
Remember me
