ಧಾರವಾಡ:ತಲೆತರಾಂತರಗಳ ಶಿಷ್ಟಾಚಾರಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್​ ತಿಲಾಂಜಲಿ ಇತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೇಯರ್​ ಎಂದಾಕ್ಷಣ ನೆನಪಾಗುವುದು, ಗೌನ್​. ಬ್ರಿಟಿಷರ ಕಾಲದಿಂದಲೂ ಗೌನ್​ ಧರಿಸಿಕೊಂಡು ಮೇಯರ್​ ಸಭೆಗೆ ಹಾಜರಾಗುವುದು ಸಂಪ್ರದಾಯ. ಆದರೆ ಇದೇ ಸಂಪ್ರದಾಯಕ್ಕೆ ತಿಲಾಂಜಲಿ ಇತ್ತು ಇತಿಹಾಸ ಸೃಷ್ಟಿಸಿದ್ದಾರೆ ಬಿಜೆಪಿಯ ಮೇಯರ್​ ಈರೇಶ ಅಂಚಟಗೇರಿ.
ಕಳೆದ ವಾರ ರಾಷ್ಟ್ರಪತಿ, ಮುಖ್ಯಮಂತ್ರಿಗಳು ಆಗಮಿಸಿದ್ದ ವೇಳೆ ಕೂಡ ಈ ಸಂಪ್ರದಾಯವನ್ನು ಮುರಿದು ಗೌನ್​ ಧರಿಸದೇ ಅವರನ್ನು ಸ್ವಾಗತಿಸಿದ್ದ ಮೇಯರ್​ ಈರೇಶ ಅಂಚಟಗೇರಿ ಅವರು, ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಗೌನ್‌ ಧರಿಸದೇ ಭಾಗವಹಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಈ ಬಗ್ಗೆ ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಹಿರಿಯ ರಾಜಕಾರಣಿಗಳು ಬಂದಾಗ ಅವರ ಸ್ವಾಗತಕ್ಕೆ ಮೇಯರ್ ಗೌನ್ ಧರಿಸಿ ಬರೋದು ಶಿಷ್ಠಾಚಾರ. ಇದೇ ಶಿಷ್ಠಾಚಾರಕ್ಕೆ ಬ್ರೇಕ್ ಹಾಕಿದ ಈರೇಶ ಅವರ ಕುರಿತು ಭಾರಿ ಚರ್ಚೆ ಶುರುವಾಗಿದೆ.
ರಾಜ್ಯದ 10 ಮಹಾನಗರ ಪಾಲಿಕೆಯಗಳಲ್ಲಿ ಬ್ರಿಟಿಷ್​ ಕಾಲದ ಈ ಸಂಪ್ರದಾಯ ಜಾರಿಯಲ್ಲಿದ್ದು, ಸಂಪ್ರದಾಯ ಮುರಿದ ರಾಜ್ಯದ ಮೊದಲ ಮೇಯರ್ ಎಂಬ ಹೆಗ್ಗಳಿಕೆ ಈರೇಶ ಅವರದ್ದು.
ಈ ಬಗ್ಗೆ ಅವರು ಹೇಳಿದ್ದೇನೆಂದರೆ, ‘ಮಹಾಪೌರರ ವಿಷಯದಲ್ಲಿ ಹೇಗಿರಬೇಕು ಅಂತ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದೆ. ಈ ಪದ್ಧತಿ ಶುರುವಾಗಿದ್ದು ಬ್ರಿಟಿಷರ ಕಾಲದಿಂದ ಎಂದು ತಿಳಿಯಿತು. ಗೌನ್​ ಧರಿಸುವುದು ಕೂಡ ಅವರದ್ದೇ ಸಂಪ್ರದಾಯ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಂಡಿರುವ ನಾವು ಇನ್ನೂ ಬ್ರಿಟಿಷ್​ ಸಂಪ್ರದಾಯವನ್ನು ಪಾಲಿಸುತ್ತಿರುವುದು ಎಷ್ಟು ಸರಿ ಎಂದು ಎನಿಸಿ ಅದನ್ನು ತ್ಯಜಿಸಿದೆ’ ಎಂದಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ತಾವು ಅನುಮತಿ ಕೋರಿದ್ದಾರೆ ಹೇಳಿದ್ದಾರೆ. ಮೇಯರ್ ಪತ್ರಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ ನಂತರ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಅಂದ ಹಾಗೆ, ಈ ವಿಷಯ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರಿ ಎನಿಸಿದ್ದು, ರಾಜ್ಯದ ಎಲ್ಲ ಮೇಯರ್ ಗಳಿಗೂ ಗೌನ್ ಧರಿಸದಂತೆ ಆದೇಶ ಮಾಡಲು ನಿರ್ಧರಿಸಿದ್ದಾರೆ. ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಈ ಕೊಡುಗೆ ಎನ್ನಲಾಗಿದೆ.ಆದರೆ, ಇಂದು ಮೇಯರ್​ ಅವರು ಗೌನ್​ ಧರಿಸದೇ ಬಂದ ಕಾರಣ, ಸಭೆಯಲ್ಲಿ ಭಾರಿ ಕೋಲಾಹಲ, ಗದ್ದಲವೂ ಆಯಿತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಇದಕ್ಕೆ ಕ್ಯಾತೆ ತೆಗೆದರು. ಗೌನ್ ಧರಿಸಿಯೇ ಸಭೆಗೆ ಬರಬೇಕೆಂದು ಆಗ್ರಹಿಸಿದರು. ಮೇಯರ್ ಮನವಿಗೂ ಸ್ಪಂದಿಸದೇ ಕೈ ಕಾರ್ಪೊರೇಟರ್ಸ್ ಗಲಾಟೆ ಮಾಡಿದ್ದರಿಂದ ಮೇಯರ್ ಈರೇಶ ​ ಅವರು ಹೊರಕ್ಕೆ ನಡೆದ ಘಟನೆಯೂ ಆಯಿತು.(ದಿಗ್ವಿಜಯ ನ್ಯೂಸ್​)
ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್​: ಹೈಕೋರ್ಟ್​ ನೀಡಿದೆ ಈ ಗಡುವು….
ಅಮೆರಿಕ ಅಧ್ಯಕ್ಷನಿಗೆ ನಿಜಕ್ಕೂ ಅರುಳು-ಮರುಳಾ? ಮೃತಪಟ್ಟ ನಾಯಕಿ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ ಎಂದು ಕೇಳಿದ ಬೈಡೆನ್​!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × three =
Remember me
