ಮದುವೆಯಾದ ಮೊದಲ ಎರಡು ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯಿತು . ಈಗ ಎರಡು ವರ್ಷಗಳ ಹಿಂದೆ ಯಾವುದೋ ಸಣ್ಣ ದೂರು ನನ್ನ ಮೇಲೆ ಹೇಳಿ ನನ್ನನ್ನು ನನ್ನ ತವರಿಗೆ ನಮ್ಮ ಯಜಮಾನರು ಬಿಟ್ಟು ಹೋದವರು ಮತ್ತೆ ನನ್ನನ್ನು ಕರೆದುಕೊಳ್ಳುವ ಯೋಚನೆಯೇ ಮಾಡುತ್ತಿಲ್ಲ. ಅವರ ತಪ್ಪುಗಳು ನೂರಾರು ಇವೆ.
ಆದರೆ ನನಗೆ ನನ್ನ ಮದುವೆಯನ್ನು ಉಳಿಸಿಕೊಳ್ಳಬೇಕು ಎಂದಿದೆ. ಹೀಗಾಗಿ ಕೇಸು ಹಾಕಿ, ಅವರ ಮೇಲೆ ದೂರು ಹೇಳಿ ಆಮೇಲೆ ನನ್ನನ್ನು ಕರೆದುಕೊಂಡು ಹೋಗಿ ಎಂದು ಕೇಳಿದರೆ ಅವರು ಕೆರಳಿ ಬಿಡುತ್ತಾರೇನೋ ಎಂದು ಹೆದರಿಕೆ. ಸಂಬಂಧಿಕರನ್ನು ಕಳಿಸಿದರೆ , ಸಬೂಬು ಹೇಳಿ ಅವರನ್ನು ಕಳಿಸಿಬಿಡುತ್ತಿದ್ದಾರೆ. ನಾನು ಏನು ಮಾಡಬೇಕು ಎಂದು ತಿಳಿಸಿ ಮೇಡಂ.
ಉತ್ತರ:ನಿಮ್ಮ ವಿವಾಹ ಜೀವನವನ್ನು ಉಳಿಸಿಕೊಳ್ಳಬೇಕೆನ್ನುವ ನಿಮ್ಮ ಯೋಚನೆ ಒಳ್ಳೆಯದಿದೆ. ಕೇಸು ಹಾಕುವಾಗ ಏನಾದರೂ ಆಪಾದನೆ ಮಾಡಿದರೆ ಕೆಲವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ.ಕೆಲವರು ಕೆರಳುವ ಸಾಧ್ಯತೆಯೂ ಇದೆ. ಹೀಗಾಗಿ ಮೊದಲಿಗೆ ನೀವು ನಿಮ್ಮ ಊರಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರವನ್ನು ಸಂಪರ್ಕಿಸಿ. ಅಲ್ಲಿ ನೀವು ಮಧ್ಯಸ್ಥಿಕೆ ಕೇಂದ್ರದ ಕಾರ್ಯದರ್ಶಿಗಳಿಗೆ , ನಿಮ್ಮ ಮತ್ತು ನಿಮ್ಮ ಪತಿಯ ನಡುವೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಿ ಎಂದು ಕೇಳಿಕೊಳ್ಳಿ. ಅವರು ಇಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಮೂಲಕ ಮಾತಾಡಿಸುತ್ತಾರೆ. ಆ ನಂತರವೂ ಸಮಸ್ಯೆ ಬಗೆಹರಿಯದೇ ಹೋದರೆ ಮಾತ್ರ ಪ್ರಕರಣ ದಾಖಲಿಸಿ.
ಅರ್ಜಿಯಲ್ಲಿ “ ನಾನು… ವಿಳಾಸ …., ಮೊಬೈಲ್.ನಂಬರ್‌ ….,ಮೈಲ್‌ ಐಡಿ… ತಿಳಿಸಿ. ತಾರೀಖು ….ರಂದು ಶ್ರೀ..ರವರನ್ನು ಮದುವೆ ಆಗಿದ್ದೇನೆ. ನಮ್ಮ ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗಲು ನಮ್ಮಿಬ್ಬರ ನಡುವೆ ಮಧ್ಯಸ್ಥಿಕೆ ನಡೆಸಿಕೊಡಬೇಕಾಗಿ ಪ್ರಾರ್ಥನೆ. ನನ್ನ ಪತಿಯ ವಿಳಾಸ …., ಮೊಬೈಲ್.ನಂಬರ್‌ ….,ಮೈಲ್‌ ಐಡಿ….ಇದೆ” ಎಂದು ಅರ್ಜಿ ಕೊಟ್ಟರೆ ಸಾಕು. ಕೇಂದ್ರದವರೇ ಇಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಸಹಾಯವನ್ನು ಒದಗಿಸುತ್ತಾರೆ. ಇದಕ್ಕೆ ಒಂದು ರೂಪಾಯಿಯ ಖರ್ಚೂ ಆಗುವುದಿಲ್ಲ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ಅಮ್ಮನನ್ನು ನೋಡಿಕೊಳ್ಳಲಿ ಎಂದು ನನ್ನ ಜತೆ ಪತ್ನಿಯನ್ನು ಕರೆದುಕೊಂಡು ಬರದಿದ್ರೆ ತಪ್ಪಾ?

ಕೋರ್ಟ್​ನಲ್ಲಿ ಕೇಸು ಇರುವುದು ತಿಳಿಯದೇ ಜಮೀನು ಕೊಂಡೆವು- ಕಾನೂನಲ್ಲಿ ನಮಗಿರುವ ದಾರಿಗಳೇನು?

ಪತಿ ಒಳ್ಳೆಯವರು, ಆದ್ರೆ ಸೆಕ್ಸ್‌ನಲ್ಲಿ ಇಂಟರೆಸ್ಟೇ ಇಲ್ಲ, ಕೌನ್ಸೆಲಿಂಗ್‌ಗೂ ಬರಲ್ಲ- ಡಿವೋರ್ಸ್‌ ಪಡೀಬಹುದಾ?

ಮದುವೆಯಾಗಿ ವರ್ಷ ಆಗುತ್ತಾ ಬಂದರೂ ಒಂದು ದಿನವೂ ಅವಳಿಂದ ಸುಖ ಸಿಕ್ಕಿಲ್ಲ- ವಿಚ್ಛೇದನ ನೀಡಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + five =
Remember me
