ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್​ ಅವರ ಭಾವಚಿತ್ರವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಳವಡಿಸಿದ್ದ ವಿವಾದದಿಂದಾಗಿ ಶಿವಮೊಗ್ಗ ಧಗಧಗಿಸುತ್ತಿದೆ. ಸಾವರ್ಕರ್​ ಫೋಟೋ ತೆಗೆದು ಆ ಜಾಗದಲ್ಲಿ ಟಿಪ್ಪು ಸುಲ್ತಾನ್​ ಫೋಟೋ ಹಾಕಲು ಮುಂದಾಗುತ್ತಿದ್ದಂತೆಯೇ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು.
ಇದೇ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಯುವಕರ ಮೇಲೆ ಕೆಲವು ಮುಸ್ಲಿಂ ವ್ಯಕ್ತಿಗಳು ಚಾಕು ಇರಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.
ಈ ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವ್ಯಕ್ತಿಗಳಲ್ಲಿ ಒಬ್ಬ ನದೀಮ. 20 ವರ್ಷದ ಯುವಕ ಪ್ರೇಮ್​ಸಿಂಗ್​ ನಿನ್ನೆ ತನ್ನ ಬಟ್ಟೆ ಅಂಗಡಿ ಮುಚ್ಚಿ ಮನೆಗೆ ಹೋಗುವ ಸಂದರ್ಭದಲ್ಲಿ ಈತ ಸೇರಿದಂತೆ ಕೆಲವು ಮುಸ್ಲಿಂಮರು ಪ್ರೇಮ್​ ಸಿಂಗ್​ ಮೇಲೆ ಚಾಕು ಇರಿದಿದ್ದರು.
ಈತನನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ನದೀಮ್​ ಕರಾಳ ಇತಿಹಾಸ ಇದೀಗ ಬಹಿರಂಗಗೊಂಡಿದೆ.
2016ರಲ್ಲಿ ಶಿವಮೊಗ್ಗದಲ್ಲಿ‌ ನಡೆದ ಕೋಮು ಗಲಭೆಯಲ್ಲಿ ಈತನೇ ಪ್ರಮುಖ ಪಾತ್ರ ವಹಿಸಿದ್ದ. 2016ರಲ್ಲಿ ನಡೆದ ಗಣೇಶೋತ್ಸವದಲ್ಲಿ ಕಲ್ಲು ತೂರಾಟ ಹಾಗೂ ಚಪ್ಪಲಿ ತೂರಾಟದಲ್ಲೂ ಇವನದ್ದೇ ಪ್ರಮುಖ ಪಾತ್ರ. ಈ ಮೂಲಕ ಗಲಭೆ ಹೆಚ್ಚಾಗಲು ಕಾರಣನಾಗಿದ್ದ ನದೀಮ್. ಇದೀಗ ಚಾಕು ಇರಿತದ ಮೂಲಕ ಮತ್ತೆ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ ಈತ.
ಇದು ನದೀಂ ಇತಿಹಾಸವಾದರೆ, ಇನ್ನೋರ್ವ ಆರೋಪಿ ಜಬಿವುಲ್ಲಾಗೂ ಇದೆ ಕಳ್ಳತನದ ಇತಿಹಾಸ. ಈತನಿಗೆ ಕಳ್ಳತನವೇ ಜೀವನಾಧಾರ. ಹತ್ತಾರು ಕಳ್ಳತನ ಪ್ರಕರಣಗಳು ಜಬೀವುಲ್ಲಾ ಮೇಲಿದೆ. ಕೋಮುದ್ವೇಷದ ಬಗ್ಗೆ ಯಾವಾಗಲೂ ಈತ ಸಿಡಿದೇಳುತ್ತಿರುವುದು ತಿಳಿದುಬಂದಿದೆ. ಇವರಿಬ್ಬರೂ ಸೇರಿದಂತೆ ಉಳಿದ ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಪೊಲೀಸರು(ದಿಗ್ವಿಜಯ ನ್ಯೂಸ್​)

ಶಿವಮೊಗ್ಗದಲ್ಲಿ ಹಿಂದೂ ಯುವಕರ ಮೇಲೆ ಚಾಕು ಇರಿತ: ನಾಲ್ವರು ಆರೋಪಿಗಳು ಅರೆಸ್ಟ್​- ಉಳಿದವರಿಗಾಗಿ ಶೋಧ

ಶಿವಮೊಗ್ಗದಲ್ಲಿ ಚಾಕು ಇರಿತ: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಹೋಗಿದ್ದ ಆರೋಪಿಗೆ ಗುಂಡೇಟು

ಮನೆ ಮನೆಗೆ ಭಾರತದ ಧ್ವಜ ಹಂಚಿದ್ದಕ್ಕೆ ಕುಟುಂಬಕ್ಕೆ ಕೊಲ್ಲುವ ಬೆದರಿಕೆ: ಗೋಡೆಗೆ ಅಂಟಿಸಿದ ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
