ಬೆಂಗಳೂರು:ಹಿರಿಯ ವಿದ್ವಾಂಸ, ಪ್ರವಚನಕಾರ, ಗ್ರಂಥಕರ್ತ ಮತ್ತು ಪ್ರಕಾಶಕರು ಉಡುಪಿ ಮೂಲದ ಸಗ್ರಿ ರಾಘವೇಂದ್ರ ಉಪಾಧ್ಯಾಯ (71) ಬೆಂಗಳೂರಿನಲ್ಲಿ ಶನಿವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ. 1953ಯಲ್ಲಿ ಶ್ರೀ ನರಸಿಂಹ ಉಪಾಧ್ಯಾಯ ಮತ್ತು ಸೀತಾಲಕ್ಷ್ಮಿ ದಂಪತಿಗಳಲ್ಲಿ ಜನಿ‌ಸಿದ ಅವರು ಪ್ರಾತ: ಸ್ಮರಣೀಯ ಶ್ರೀ ವಿದ್ಯಾ ಮಾನ್ಯತೀರ್ಥರು, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಅವರಲ್ಲದೆ ಶ್ರೀ ಕಾಪು ಹಯಗ್ರೀವಾಚಾರ್ಯರು, ಮೊದಲಾದ ಪಂಡಿತರಲ್ಲಿ ಅಧ್ಯಯನ ಮಾಡಿ, ವೇದಾಂತ ಶಾಸ್ತ್ರದಲ್ಲಿ, ಸಂಸ್ಕೃತದಲ್ಲಿ ಎಂಎ ಪಡೆದು SMSP ಸಂಸ್ಕೃತ ಕಾಲೇಜು, ಉಡುಪಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಕೆ ಪ್ರಕರಣ, ಅಧಿಕಾರಿಗಳ ‘ಲೆಫ್ಟ್-ರೈಟ್’ ತೆಗೆದುಕೊಂಡ ಸಚಿವ ಎಂ.ಬಿ. ಪಾಟೀಲ
ತಮ್ಮದೇ ಆದ ಪರವಿದ್ಯಾ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ನೂರಾರು ಗ್ರಂಥಗಳನ್ನು ರಚಿಸಿದ್ದಾರೆ.ಉಡುಪಿಯ ಹಲವಾರು ಮಠಗಳಿಗೆ ಆಸ್ಥಾನ ವಿದ್ವಾಂಸರಾಗಿ ಗೌರವ ಮತ್ತು ಮಾನ್ಯತೆಗೆ ರಾಜನರಾಗಿದ್ದರು. ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿ ಉತ್ತಮ ಹೆಸರು ಗಳಿಸಿರುವ ತತ್ವವಾದ ಮತ್ತು ಸರ್ವಮೂಲ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಅವರ ಕೆಲವು ಕೃತಿಗಳು ಈ ಕೆಳಕಂಡಂತಿವೆ:
1. ಸಾಧಕರಿಗೊಂದು ಕಿವಿಮಾತು2. ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರ ಉಪನ್ಯಾಸ ಸಂಗ್ರಹವಾದ ವಿಷ್ಣು ಸಹಸ್ರನಾಮ ಟಿಪ್ಪಣಿ.3. ಮುಖ್ಯಪ್ರಾಣ ಚಿಂತನೆ4. ಸುವರ್ಣ ಸಂದೇಶ5. ವೈಷ್ಣವ ದೀಕ್ಷೆ6. ಪಾತಿವ್ರತ್ಯ ಪ್ರದೀಪಿಕಾ7. ಶ್ರೀನಿವಾಸೇsಸ್ತು ಮೇ ಮನ: ಮೊದಲಾದವು.
ಇದನ್ನೂ ಓದಿ:ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ನಾಡಿನ ಬಹುತೇಕ ಮಠಾಧೀಶರ ಪ್ರವಚನವನ್ನು ಆಲಿ‌ಸಿ ಅದನ್ನು ಗ್ರಂಥರೂಪದಲ್ಲಿ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.ರಾಮಾಯಣ, ಭಾಗವತ, ತಾತ್ಪರ್ಯ ನಿರ್ಣಯ, ಸರ್ವಮೂಲ ಪ್ರಮೇಯಗಳ ಬಗ್ಗೆ ನೂರಾರು ಪ್ರವಚನಗಳನ್ನು ಸಗ್ರಿ ಅವರು ನೀಡಿದ್ದಾರೆ. ವಿಷ್ಣು ಸಹಸ್ರನಾಮದಲ್ಲಿ ಅತ್ಯಂತ ಹೆಚ್ಚಿನ ಅಧ್ಯಯನ, ಸಂಶೋಧನಾ ಲೇಖನ ಮಾಡಿ ಇವರು ಸಾಧನೆ ಮಾಡಿದ್ದಾರೆ.‌ ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರ ಸೇವೆ ಮಾಧ್ವ ವಾಂಗ್ಮಯ ಪ್ರಪಂಚಕ್ಕೆ ಅತ್ಯದ್ಭುತ ಕೊಡುಗೆಯಾಗಿದೆ.
ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರು ನಿನ್ನೆ ಸಂಜೆ ಬೆಂಗಳೂರಿನ ಶ್ರೀಭಂಡಾರಕೇರಿ ಮಠದಲ್ಲಿ ಶ್ರೀ ಶ್ರೀ ವಿದ್ಯೇಶತೀರ್ಥರ 70ನೇ ವರ್ಷದ ವರ್ಧಂತಿ ಕಾರ್ಯಕ್ರಮದಲ್ಲಿ ತಮ್ಮ ಕೊನೆಯ ಉಪನ್ಯಾಸ ನೀಡಿ, ನಂತರದ ಕೆಲವೇ ನಿಮಿಷಗಳಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ರಾಮಾಯಣದ ಪ್ರಸಂಗ ವ್ಯಾಖ್ಯಾನ ಮಾಡಿದ ಅವರು ” ದಶಾವತಾರದಲ್ಲಿ ಶ್ರೀ ರಾಮ ಮಾತ್ರ ಎಲ್ಲರಿಗೂ ಮುಕ್ತಿ ಕೊಡಿಸಿದ ” …..ಎಂಬುದೇ ಅವರ ಕೊನೆಯ ವಾಕ್ಯ ಆಗಿದ್ದು ವಿಪರ್ಯಾಸ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಕಮಿಷನ್ ದಾಹದಿಂದ ದಲಿತ ಗುತ್ತಿಗೆದಾರರಿಗೆ ಮೋಸ: ಆರ್​. ಅಶೋಕ
ಹೃದಯಾಘಾತದಿಂದ ಬಳಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳಲಾಗದೆ, ಶನಿವಾರ ಬೆಳಗ್ಗೆನಿಧನರಾದರು.ಚಾಮರಾಜ ಪೇಟೆ ಚಿತಾಗಾರದಲ್ಲಿ ನೂರಾರು ವಿದ್ವಾಂಸರ ಸಮ್ಮುಖ ಅಂತ್ಯಕ್ರಿಯೆ ನಡೆಯಿತು.
ಪ್ರಮುಖ ಮಠಾಧೀಶರಿಂದ ಗುಣಗಾನ: ವಿದ್ವಾಂಸ ಸಗ್ರಿ ಅವರ ಜೀವನ, ಸಾಧನೆ ಬಗ್ಗೆ ಗುಣಗಾನ ಮಾಡಿದ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಉಡುಪಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಯವರು ಮೃತ ರಿಗೆ ಸದ್ಗತಿ ದೊರಕಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve + fifteen =
Remember me
