ಬೆಂಗಳೂರು:ಸಣ್ಣ ವಯಸ್ಸಿನ ವ್ಯಕ್ತಿಗಳಿಗೆ ಓಲ್ಡೇಜ್ ಪೆನ್ಶನ್ ಮಾಡಿಸುತಿದ್ದ ಏಜೆಂಟ್ ಅರೆಸ್ಟ್ ಆಗಿದ್ದಾನೆ. ಸಿಸಿಬಿ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು ಮೂರು ಕಡೆ ಸಿಸಿಬಿ ದಾಳಿ ನಡೆಸಿದೆ. ದಾಳಿಯ ವೇಳೆ 200 ಹೆಚ್ಚು ಜನರು ನಕಲಿ ವೃದ್ದಾಪ್ಯ ವೇತನ ಪಡೆಯುತಿದ್ದದ್ದು ಪತ್ತೆಯಾಗಿದೆ. ಈ ಏಜೆಂಟ್​​ಗಳು ಹೆಚ್ಚು ಹಣವನ್ನು ಪಡೆದು ವೃದ್ಧರಲ್ಲದವರಿಗೂ, ಚಿಕ್ಕ ವಯಸ್ಸಿನ ವ್ಯಕ್ತಿಗಳಿಗೂ ಆಧಾರ್​ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಮಾಡಿಸಿ ವೃದ್ಧಾಪ್ಯ ವೇತನ ಸಿಗುವಂತೆ ಮಾಡುತ್ತಿದ್ದರು.
ಆಧಾರ್ ಕಾರ್ಡ್​ನಲ್ಲಿ ವಯಸ್ಸಿನ ಲೆಕ್ಕವನ್ನು ಕಡಿಮೆ ಮಾಡುತ್ತಿದ್ದರು. ಈ ಏಜೆಂಟ್​ಗಳು ರಾಜಾಜಿನಗರ, ಕೆಂಗೇರಿ ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮುಖ್ಯ ಏಜೆಂಟ್​ನನ್ನು ಚತುರ್ ಎಂದು ಗುರುತಿಸಲಾಗಿದೆ. ಓರ್ವರಿಗೆ ನಕಲಿ ಮಾಡುವ ಕೆಲಸ ಮಾಡಿಸಿಕೊಡಲು 5 ರಿಂದ ಹತ್ತು ಸಾವಿರ ಹಣ ಪಡೆಯುತಿದ್ದ ಎನ್ನಲಾಗಿದೆಸದ್ಯ ನಗರದದಲ್ಲಿ ಹಲವೆಡೆ ಇದೇ ರೀತಿ ಕೃತ್ಯ ನಡೆದಿರುವ ಸಾದ್ಯತೆ. ಇದ್ದು ಈಗಾಗಲೇ ಹಲವಾರು ಸರ್ಕಾರಿ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ. ರೆವಿನ್ಯೂ ಇನ್ಸ್ಪೆಕ್ಟರ್ ಹಾಗು ವಿಲೇಜ್ ಅಕೌಂಟೆಂಟ್​ಗಳಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು ಏಜೆಂಟ್ ಜತೆ ಶಾಮೀಲಾಗಿ ಕೃತ್ಯ ಎಸಗಿದ್ದಾರಾ ಅನ್ನುವುದರ ಬಗ್ಗೆ ಕೂಡ ಸಿಸಿಬಿ ಪರಿಶೀಲನೆ ನಡೆಸುತ್ತಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + two =
Remember me
