ಭಾಲ್ಕಿ: ತಾಯಿಯ ಜನ್ಮದಿನದಂದು ಉಡುಗೊರೆ ತಂದುಕೊಡಲು ವರ್ಷವಿಡೀ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹಿಸಿದ್ದ ಹಣವನ್ನು ಶಾಲಾ ಬಾಲಕನೊಬ್ಬ ಕರೊನಾ ನಿಧಿಗೆ ನೀಡಿ, ಅಪರೂಪದ ಔದಾರ್ಯ ಮೆರೆದಿದ್ದಾನೆ.
ಪಾಲಕರು ಮತ್ತು ಸಂಬಂಧಿಕರು ಬಿಸ್ಕೆಟ್, ಚಾಕೋಲೆಟ್‌ಗಾಗಿ ಕೊಡುತ್ತಿದ್ದ ಹಣದಲ್ಲಿ ಒಂದಿಷ್ಟು ಉಳಿಸಿಕೊಳ್ಳುತ್ತಿದ್ದ ಸತ್ಯಸಾಯಿ ಪಬ್ಲಿಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಆರ್ಯನ್, ಅದನ್ನು ಗಲ್ಲಾ ಪೆಟ್ಟಿಗೆಗೆ ಹಾಕುತ್ತಿದ್ದ. ಹೀಗೆ ಸಂಗ್ರಹವಾದ ಹಣವನ್ನು ತನ್ನ ತಾಯಿ ಡಾ. ವಿಜಯಶ್ರೀಯವರ ಜನ್ಮ ದಿನದಂದು ಹೊರತೆಗೆದು ಅದರಿಂದ ಏನಾದರೂ ಗಿಫ್ಟ್ ತಂದು ಕೊಟ್ಟು ಸಂಭ್ರಮಿಸುತ್ತಿದ್ದ. ಈ ಸಲ ಕರೊನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ಕಳಿಸಲು ನಿರ್ಧರಿಸಿದ. ಗಲ್ಲಾ ಪೆಟ್ಟಿಗೆ ಒಡೆದು ನೋಡಿದಾಗ ಅದರಲ್ಲಿ 1664 ರೂ. ಇದ್ದವು. ಅದನ್ನೇ ಸಿಎಂ ಪರಿಹಾರ ನಿಧಿಗೆ ಕೊಡುವುದಾಗಿ ತಂದೆ-ತಾಯಿಗೆ ಹೇಳಿದಾಗ ಅವರಿಗೂ ಖುಷಿಯಾಗಿದೆ.
ಕೂಡಲೇ ಈ ಮೊತ್ತಕ್ಕೆ ಚೆಕ್ ರೆಡಿ ಮಾಡಿದ್ದಾರೆ. ಶುಕ್ರವಾರ ಭಾಲ್ಕಿಗೆ ಆಗಮಿಸಿದ್ದ ತಹಸೀಲ್ದಾರ್ ಅಣ್ಣಾರಾವ ಪಾಟೀಲ್ ಅವರಿಗೆ ಆ ಚೆಕ್ ಅನ್ನು ಬಾಲಕನೇ ಹಸ್ತಾಂತರಿಸಿದ್ದಾನೆ. ಈತನ ಕಾಳಜಿಗೆ ಅಧಿಕಾರಿಗಳು ಭೇಷ್ ಎಂದಿದ್ದಾರೆ. ಮುಂದೆ ಸೈನ್ಯಕ್ಕೆ ಸೇರಿ ದೇಶ ಸೇವೆ ಸಲ್ಲಿಸುವ ಧ್ಯೇಯ ಈ ಬಾಲಕನದು.
ಕೊವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡಿ, ಅದರಲ್ಲೇ ಪ್ರಾಣ ಬಿಟ್ಟ ನನ್ನ ಪತಿಗೆ ಈಗ ಅವಮಾನ ಮಾಡಲಾಗುತ್ತಿದೆ; ವೈದ್ಯರ ಪತ್ನಿಯ ಅಳಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
