ಶಿವಮೊಗ್ಗ:ಹಣವಿರುವ ಬ್ಯಾಗನ್ನು ಆಟೋದಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್​ ಮರಳಿಸುವ ಮೂಲಕ ಆಟೋ ಚಾಲಕ ನಾಗರಾಜ್​ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳವಾರ ಬೆಳಗ್ಗೆ ಚನ್ನಗಿರಿ ತಾಲೂಕು ತಾವರೆಕೆರೆಯ ಮೊಹಸಿನ್​ ಎಂಬಾಕೆ ಶಿವಮೊಗ್ಗಕ್ಕೆ ಬಸ್​ನಲ್ಲಿ ಬಂದಿಳಿದಿದ್ದಾರೆ. ನಾಗರಾಜ್​ ಅವರ ಆಟೋದಲ್ಲಿ ಆಕೆ ತಿಲಕನಗರದ ಆಸ್ಪತ್ರೆಯೊಂದಕ್ಕೆ ಪ್ರಯಾಣಿಸಿದ್ದು ಆಟೋ ಇಳಿಯುವಾಗ 8,500 ರೂ. ನಗದು ಇರಿಸಿದ್ದ ಪರ್ಸ್​ ಹಾಗೂ ಬ್ಯಾಗನ್ನು ಆಟೋದಲ್ಲಿ ಬಿಟ್ಟುಹೋಗಿದ್ದಾರೆ.
ಕೆಲ ಸಮಯದ ಬಳಿಕ ಬ್ಯಾಗ್​ ಅನ್ನು ಗಮನಿಸಿದ ನಾಗರಾಜ್​, ಸಂಚಾರ ಠಾಣೆ ಪೊಲೀಸರಿಗೆ ಬ್ಯಾಗ್​ ಒಪ್ಪಿಸಿ ಮಹಿಳೆ ಆಸ್ಪತ್ರೆ ಹೋಗಿದ್ದನ್ನು ತಿಳಿಸಿದರು. ಇದಿಷ್ಟು ನಡೆದ ಕೆಲವೇ ತಾಸಿನಲ್ಲಿ ಮಹಿಳೆಯನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದಾರೆ. ಅತ್ತ ನಾಗರಾಜ್​ ಅವರನ್ನೂ ಕರೆಸಿಕೊಂಡು ಅವರ ಮೂಲಕವೇ ಮಹಿಳೆಗೆ ಬ್ಯಾಗ್​ ಮರಳಿಸಿದ್ದಾರೆ. ಟ್ರಾಫಿಕ್​ ಪೊಲೀಸ್​ ಇನ್ಸ್​ಪೆಕ್ಟರ್​ ಸಂತೋಷ್​ಕುಮಾರ್​ ಸಮ್ಮುಖದಲ್ಲಿ ಮಹಿಳೆಗೆ ಹಣವಿದ್ದ ಬ್ಯಾಗ್​ ಅನ್ನು ನಾಗರಾಜ್​ ಮರಳಿಸಿದರು.
ಹಳೇ ಸ್ಕೂಟರ್​ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ

ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಅವಘಡ: ಮಾಲ್ಗುಡಿ ಎಕ್ಸ್​ಪ್ರೆಸ್ ರೈಲಿಗೆ ಸಿಲುಕಿ ಮಹಿಳೆಯರಿಬ್ಬರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
