ಬೆಂಗಳೂರು:ಗೋ‌ಹತ್ಯೆ ನಿಷೇಧ ಕಾಯ್ದೆಯಿಂದರೈತರಿಗೆ ನಷ್ಟವಾಗುತ್ತಿದೆ. ವಯಸ್ಸಾದ ರಾಸುಗಳನ್ನು ಕಾಡಿಗೆ ಬಿಡುತ್ತಿದ್ದಾರೆ. ಗೋ ಶಾಲೆಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಹೇಳಿದರು.
ರೈತರಿಗೆ ಅನುಪಯುಕ್ತ ದನಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಗೋ ರಕ್ಷಣೆ ಮಾಡಿದ್ದೇವೆ ಎಂದು ಬೆನ್ನು ತಟ್ಟೋದು ಬೇರೆ. ಗೋ ಹತ್ಯಾ ನಿಷೇಧದ ಬಳಿಕೆ ವಾಸ್ತವವಾಗಿ ಏನೆಲ್ಲಾ ಸಮಸ್ಯೆಗಳಾಗುತ್ತಿವೆ ಎಂಬುದು ಗೊತ್ತಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇ ನಾನ್ ಕರೆಕ್ಟ್. ನಾನು ಪಶುಸಂಗೋಪನಾ ಇಲಾಖೆಗೆ ಪ್ರಶ್ನೆ ಕೇಳಿದ್ದೆ. 2019 ರಲ್ಲಿ 1 ಕೋಟಿ 29 ಲಕ್ಷ ರಾಸುಗಳು ಇವೆ ಅಂದಿದ್ದರು. 2020ರಲ್ಲಿ ಮತ್ತೆ ಉತ್ತರಿಸುತ್ತಾ, 1 ಕೋಟಿ 14 ಲಕ್ಷ ರಾಸುಗಳಿವೆ ಎಂದು ಹೇಳಿದ್ದಾರೆ. ಒಂದೇ ವರ್ಷದಲ್ಲಿ 13 ಲಕ್ಷ ದನಗಳು ಕಣ್ಮರೆಯಾದವಾ? ಅತ್ಯಂತ ಕಡಿಮೆ ಸಮಯದಲ್ಲಿ ಇಷ್ಟೊಂದು ದನಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
