ಬೆಂಗಳೂರು:ಸರ್ಕಾರದ ಅಳಿವು-ಉಳಿವಿನ ಮೇಲಾಗಲಿ, ಪ್ರತಿಪಕ್ಷಗಳ ಸ್ಥಾನ-ಮಾನದ ಮೇಲಾಗಲಿ ಕಿಂಚಿತ್ತೂ ಪರಿಣಾಮ ಬೀರದಿದ್ದರೂ ಸಾಕಷ್ಟು ಕುತೂಹಲ ಮೂಡಿಸಿದ್ದ ಇಂದಿನ (ನ.3) ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಜ ರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣೆಯ ಮತಎಣಿಕೆ ಮುಕ್ತಾಯವಾಗಿದ್ದು, ಎರಡರಲ್ಲೂ ಬಿಜೆಪಿ ಭರ್ಜರಿ ಜಯ ಸಾಧಿಸಿದೆ.
03:39 PM- ಶಿರಾ ಉಪಚುನಾವಣೆ:24ನೇ ಹಾಗೂ ಕೊನೆಯ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 74522, ಜೆಡಿಎಸ್​ನ ಅಮ್ಮಾಜಮ್ಮ 35982 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 61573 ಮತಗಳನ್ನು ಪಡೆದಿದ್ದು, ರಾಜೇಶ್​ ಗೌಡ ಗೆಲುವು ಸಾಧಿಸಿದ್ದಾರೆ.

03:20 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:25ನೇ ಹಾಗೂ ಕೊನೆಯ ಸುತ್ತಿನಲ್ಲಿ ಸುತ್ತಿನ ಮುಕ್ತಾಯದ ಬಳಿಕ ಮುನಿರತ್ನ 125734, ಕುಸುಮಾ 67798 ಹಾಗೂ ಕೃಷ್ಣಮೂರ್ತಿ 10251 ಪಡೆದುಕೊಂಡಿದ್ದು, ಅಂತಿಮವಾಗಿ ಮುನಿರತ್ನ ಪ್ರಚಂಡ ಗೆಲುವು ದಾಖಲಿಸಿದ್ದಾರೆ.

02:54 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:24ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 124446, ಕುಸುಮಾ 67405 ಹಾಗೂ ಕೃಷ್ಣಮೂರ್ತಿ 10187 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅಧಿಕಾರ ಮತ್ತು ಹಣ ಕೆಲಸ ಮಾಡಿದೆಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಉಪಚುನಾವಣೆಯಲ್ಲಿ ಅಧಿಕಾರ ಮತ್ತು ಹಣ ಕೆಲಸ ಮಾಡಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆರ್​ಆರ್ ನಗರ ಮತ್ತು ಶಿರಾ ಗೆಲ್ಲುತ್ತೇವೆ ಅಂದುಕೊಂಡಿದ್ದೇವು. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಆದರೆ, ಸರ್ಕಾರದಲ್ಲಿ ಇರುವವರು ಚುನಾವಣೆ ನಿಷ್ಪಕ್ಷಪಾತ ಹಾಗೂ ಮುಕ್ತವಾಗಿ ನಡೆಸುವುದು ಜವಾಬ್ದಾರಿ. ನನ್ನ ಮಾಹಿತಿಯಂತೆ ಬಿಜೆಪಿ ಅಧಿಕಾರ ದುರಪಯೋಗ ಮಾಡಿಕೊಂಡಿದೆ ಎಂದು ಹೇಳಿದರು.
ಡಿಕೆಶಿಯಿಂದ ಮಾಧ್ಯಮ ಆಹ್ವಾನ2:51-ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚುನಾವಣೆ ಫಲಿತಾಂಶ ಕುರಿತು ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಇಂದು ಮಧ್ಯಾಹ್ನ 3.30 ಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೈಲಿಗಲ್ಲು2:40-ಶಿರಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. 75 ವರ್ಷದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಭದ್ರಕೊಟೆಯನ್ನು ಬಿಜೆಪಿ ಭೇದಿಸಿದೆ. ಇಲ್ಲೂ ಕೂಡ ಬಿ.ವೈ.ವಿಜಯೇಂದ್ರ ಮಾಸ್ಟರ್ ಪ್ಲ್ಯಾನ್​ ಕೆಲಸ ಮಾಡಿದೆ.
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು1:30-ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್​ಗೌಡ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಶಿರಾದಲ್ಲಿ ಇನ್ನು ಮೂರು ಸುತ್ತುಗಳಷ್ಟೇ ಬಾಕಿ ಇದೆ.
12:52 PM- ಶಿರಾ ಉಪಚುನಾವಣೆ:20ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 63294, ಜೆಡಿಎಸ್​ನ ಅಮ್ಮಾಜಮ್ಮ 29166 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 52914 ಮತಗಳನ್ನು ಪಡೆದಿದ್ದು, 20ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.
02:15 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:23ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 118981, ಕುಸುಮಾ 65501 ಹಾಗೂ ಕೃಷ್ಣಮೂರ್ತಿ 9957 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆರ್​ಆರ್​ನಗರದಲ್ಲಿ ಮುನಿರತ್ನ ಭರ್ಜರಿ ವಿನ್​ಮತಎಣಿಕೆ ಆರಂಭದಿಂದಲೂ ಭಾರಿ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಅಂತರದಿಂದ ಜಯ ದಾಖಲಿಸಿದ್ದಾರೆ. ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. 20ನೇ ಸುತ್ತಿನ ಮತಎಣಿಕೆ ಮುಕ್ತಾಯದ ಹೊತ್ತಿಗೆ ಮುನಿರತ್ನ 1,03,291 ಹಾಗೂ ಕುಸುಮಾ 58743 ಮತಗಳನ್ನು ಪಡೆದುಕೊಂಡಿದ್ದು, ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಠೇವಣಿ ಕಳೆದುಕೊಂಡಿದ್ದಾರೆ. ಇನ್ನು 5 ಸುತ್ತಿನ ಮತಎಣಿಕೆ ಬಾಕಿಯಿದೆ.
ವಿಜಯೇಂದ್ರ ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆಮುಖ್ಯಮಂತ್ರಿಗಳು ಮತ್ತು ಅವರ ಆಡಳಿತದ ಮೇಲೆ ಜನ ನಂಬಿಕೆ ಇಟ್ಟಿದ್ದರು. ಆ‌ಕಾರಣದಿಂದ ಇವತ್ತು ನಾವು ಗೆಲ್ತಿದ್ದೇವೆ. ನಮ್ಮ ಯುವ ನಾಯಕ ವಿಜಯೇಂದ್ರ ಮುಂದಾಳತ್ವದಲ್ಲಿ ಗೆಲುವಾಗ್ತಿದೆ. ನಾನು ಹಿಂದೆ ಒಂದು ಮಾತು ಹೇಳಿದ್ದೆ, ವಿಜಯೇಂದ್ರ ಎಲ್ಲೇ ಹೊದ್ರು ಗೆಲ್ತಾರೆ ಅಂತ ಹೇಳಿದ್ದೆ, ಅದ್ರಂತೆ ಗೆಲುವು ಆಗುತ್ತಿದೆ. ವಿಜಯೇಂದ್ರ ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆ ಎಂದು ಸಚಿವ ಶ್ರೀರಾಮುಲು ಹೇಳಿದರು.
12:52 PM- ಶಿರಾ ಉಪಚುನಾವಣೆ:13ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 41642, ಜೆಡಿಎಸ್​ನ ಅಮ್ಮಾಜಮ್ಮ 20356 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 33171 ಮತಗಳನ್ನು ಪಡೆದಿದ್ದು, 13ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

12:50 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:14ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 73932, ಕುಸುಮಾ 39415 ಹಾಗೂ ಕೃಷ್ಣಮೂರ್ತಿ 4660 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

ವಿಜಯೇಂದ್ರ ಉಸ್ತುವಾರಿಗೆ ಹೆಚ್ಚಿದ ಬೇಡಿಕೆಬೈಎಲೆಕ್ಷನ್​ಗಳ ಗೆಲುವಿನ ಹಿಂದೆ ಬಿವೈ ವಿಜಯೇಂದ್ರ ಮಾಸ್ಟರ್ ಮೈಂಡ್ ಇರುವ ಕಾರಣ ವಿಜಯೇಂದ್ರ ಉಸ್ತುವಾರಿಗೆ ಬೇಡಿಕೆ ಹೆಚ್ಚಾಗಿದೆ. ಮಸ್ಕಿ ಉಪಚುನಾವಣೆಗೂ ವಿಜಯೇಂದ್ರ ಅವರಿಗೆ ಉಸ್ತುವಾರಿ ಕೊಡಿ ಎಂದು ಸಿಎಂಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬೇಡಿಕೆ ಸಲ್ಲಿಸಿದ್ದಾರೆ. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತರು ಇದ್ದಾರೆ. ಹಾಗಾಗಿ ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಿದರೆ ಉತ್ತಮ ಎಂದು ಸಿಎಂ ಬಳಿ ಕೇಳಿಕೊಂಡಿದ್ದೇವೆ ಎಂದಿದ್ದಾರೆ.
12:23 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:12ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 64703, ಕುಸುಮಾ 33527 ಹಾಗೂ ಕೃಷ್ಣಮೂರ್ತಿ 3336 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

12:03 PM- ಶಿರಾ ಉಪಚುನಾವಣೆ:10ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 30883, ಜೆಡಿಎಸ್​ನ ಅಮ್ಮಾಜಮ್ಮ 16911 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 24908 ಮತಗಳನ್ನು ಪಡೆದಿದ್ದು, 10ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

12:10 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:11ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 60519, ಕುಸುಮಾ 30906 ಹಾಗೂ ಕೃಷ್ಣಮೂರ್ತಿ 2637 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

12:03 PM- ಶಿರಾ ಉಪಚುನಾವಣೆ:9ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 27428, ಜೆಡಿಎಸ್​ನ ಅಮ್ಮಾಜಮ್ಮ 15230 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 22622 ಮತಗಳನ್ನು ಪಡೆದಿದ್ದು, 8ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

12:01 PM- ರಾಜರಾಜೇಶ್ವರಿ ನಗರ ಉಪ ಚುನಾವಣೆ:10ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 55103, ಕುಸುಮಾ 27923 ಹಾಗೂ ಕೃಷ್ಣಮೂರ್ತಿ 2256 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಲೋಕಲ್ ಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ಬಿಜಿಬಾಗಲಕೋಟೆ ಬಾದಾಮಿ ಕ್ಷೇತ್ರದ ಸ್ಥಳೀಯ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜಿಯಾಗಿದ್ದಾರೆ. ಬಾದಾಮಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಗಾಗಿ ಕಾಂಗ್ರೆಸ್​ನಲ್ಲಿ ಪೈಪೋಟಿ ನಡೆದಿದೆ. ಖಾಸಗಿ ಹೋಟೆಲ್​ನಲ್ಲಿ ಸದಸ್ಯರ ಜೊತೆ ಸಭೆ ನಡೆಸಿದ್ದು, ಪುರಸಭೆ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದಿಂದ ಒಮ್ಮತದ ಅಭ್ಯರ್ಥಿಯನ್ನು ಸಿದ್ದರಾಮಯ್ಯ ಆಯ್ಕೆ ಮಾಡಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕೈ ಪಕ್ಷದ ಅಭ್ಯರ್ಥಿಯಾಗಿ ಮಂಜು ಹೊಸಮನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಮವ್ವ ಮಾದಾರ ಹೆಸರು ಸಭೆಯಲ್ಲಿ ಫೈನಲ್ ಆಗಿದೆ.
11:56- ಶಿರಾ ಉಪಚುನಾವಣೆ:8ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 24300, ಜೆಡಿಎಸ್​ನ ಅಮ್ಮಾಜಮ್ಮ 13191 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 20327 ಮತಗಳನ್ನು ಪಡೆದಿದ್ದು, 8ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

11:52- ರಾಜರಾಜೇಶ್ವರಿ ನಗರ ಉಪ ಚುನಾವಣೆ:9ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 50387, ಕುಸುಮಾ 25161 ಹಾಗೂ ಕೃಷ್ಣಮೂರ್ತಿ 1862 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕುಸುಮಾಗೆ ಶುರುವಾಯ್ತಾ ಸೋಲಿನ ಭಯ?11:33-ಮತಎಣಿಕೆ ಆರಂಭವಾದಾಗಿನಿಂದ ಆರ್​ಆರ್​ ನಗರದಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಡುತ್ತಿರುವುದರಿಂದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾಗೆ ಭಯ ಶುರುವಾಗಿದೆ ಎನ್ನಲಾಗಿದೆ.
11:28- ಶಿರಾ ಉಪಚುನಾವಣೆ:7ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 21401, ಜೆಡಿಎಸ್​ನ ಅಮ್ಮಾಜಮ್ಮ 11648 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 18076 ಮತಗಳನ್ನು ಪಡೆದಿದ್ದು, 7ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮಹಿಳೆಯರ ಸಂಭ್ರಮಆರ್​ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಕೌಂಟಿಂಗ್ ಸೆಂಟರ್ ಬಳಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಮುನಿರತ್ನ ಪರ ಘೋಷಣೆ ಕೂಗಿ ಮಹಿಳಾ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
11:18- ಶಿರಾ ಉಪಚುನಾವಣೆ:6ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 16909, ಜೆಡಿಎಸ್​ನ ಅಮ್ಮಾಜಮ್ಮ 10345 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 15515 ಮತಗಳನ್ನು ಪಡೆದಿದ್ದು, 5ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ 1394 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

11:17- ಶಿರಾ ಉಪಚುನಾವಣೆ:6ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 16909, ಜೆಡಿಎಸ್​ನ ಅಮ್ಮಾಜಮ್ಮ 10345 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 15515 ಮತಗಳನ್ನು ಪಡೆದಿದ್ದು, 5ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ 1394 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
11:14- ರಾಜರಾಜೇಶ್ವರಿ ನಗರ ಉಪ ಚುನಾವಣೆ:8ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 44802, ಕುಸುಮಾ 22125 ಹಾಗೂ ಕೃಷ್ಣಮೂರ್ತಿ 1711 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಸಂಭ್ರಮ11:10-ತುಮಕೂರು: ಮೂರನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಬಿಜೆಪಿ ಕಾರ್ಯಕರ್ತರು ಗುಂಪುಗೂಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
11:00- ರಾಜರಾಜೇಶ್ವರಿ ನಗರ ಉಪ ಚುನಾವಣೆ:7ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 39087, ಕುಸುಮಾ 19315 ಹಾಗೂ ಕೃಷ್ಣಮೂರ್ತಿ 1572 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

10:59- ಶಿರಾ ಉಪಚುನಾವಣೆ:5ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 14206, ಜೆಡಿಎಸ್​ನ ಅಮ್ಮಾಜಮ್ಮ 8879 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 12718 ಮತಗಳನ್ನು ಪಡೆದಿದ್ದು, 5ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

10:34-ರಾಜರಾಜೇಶ್ವರಿ ನಗರ ಉಪ ಚುನಾವಣೆ:6ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 34189, ಕುಸುಮಾ 16513 ಹಾಗೂ ಕೃಷ್ಣಮೂರ್ತಿ 1288 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ.

10:30- ಶಿರಾ ಉಪಚುನಾವಣೆ:4ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 11770, ಜೆಡಿಎಸ್​ನ ಅಮ್ಮಾಜಮ್ಮ 6614 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 10251 ಮತಗಳನ್ನು ಪಡೆದಿದ್ದು, 4ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

10: 16- ರಾಜರಾಜೇಶ್ವರಿ ನಗರ ಉಪ ಚುನಾವಣೆ:ಐದನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 28867, ಕುಸುಮಾ 13943 ಹಾಗೂ ಕೃಷ್ಣಮೂರ್ತಿ 829 ಪಡೆದುಕೊಂಡಿದ್ದು, ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ.

10:09- ಶಿರಾ ಉಪಚುನಾವಣೆ:3ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 8462, ಜೆಡಿಎಸ್​ನ ಅಮ್ಮಾಜಮ್ಮ 4657 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 7339 ಮತಗಳನ್ನು ಪಡೆದಿದ್ದು, ಮೂರನೇ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ 1303 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

10:03 AM- ಆರ್​ಆರ್​ ನಗರ 4ನೇ ಸುತ್ತಿನ ಫಲಿತಾಂಶರಾಜರಾಜೇಶ್ವರಿ ನಗರ ಉಪ ಚುನಾವಣೆ: ನಾಲ್ಕನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಮುನಿರತ್ನ 22845, ಕುಸುಮಾ 11121 ಹಾಗೂ ಕೃಷ್ಣಮೂರ್ತಿ 728 ಪಡೆದುಕೊಂಡಿದ್ದು, ಮುನಿರತ್ನ ಅವರು 11,724 ಮತಗಳ ಮುನ್ನಡೆ ಸಾಧಿಸಿದ್ದಾರೆ.

9:50- ರಾಜರಾಜೇಶ್ವರಿ ನಗರ ಉಪ ಚುನಾವಣೆ:ಮೂರನೇ ಸುತ್ತಿನ ಹೊತ್ತಿಗೆ ಮುನಿರತ್ನ 16575, ಕುಸುಮಾ 8666 ಹಾಗೂ ಕೃಷ್ಣಮೂರ್ತಿ 619 ಮತಗಳನ್ನು ಪಡೆದಿದ್ದು, ಮುನಿರತ್ನ ಅವರು 7909 ಮುನ್ನಡೆ ಪಡೆದುಕೊಂಡಿದ್ದಾರೆ.
ಆರ್​ಆರ್​ ನಗರ ಮೂರನೇ ಸುತ್ತಿನ ಫಲಿತಾಂಶ

9:41- ತುಮಕೂರು:ಶಿರಾ ಬೈಎಲೆಕ್ಷನ್ ಪಕ್ಷೇತರ ಅಭ್ಯರ್ಥಿ ಆಂಬ್ರೋಸ್ ಡಿ.ಮೆಲ್ಲೊ ಮತ ಎಣಿಕೆ ಕೇಂದ್ರದೊಳಗೆ ತಮ್ಮನ್ನು ಬಿಡುತ್ತಿಲ್ಲವೆಂದು ಆರೋಪಿಸಿ ಎಣಿಕೆ ಕೇಂದ್ರದ ಆವರಣದಲ್ಲಿ ಪ್ರತಿಭಟಿಸಿದರು.
ಶಿರಾ ಎರಡನೇ ಸುತ್ತಿನ ಫಲಿತಾಂಶದ ಪಟ್ಟಿ

9:33-ರಾಜರಾಜೇಶ್ವರಿ ನಗರ ಉಪ ಚುನಾವಣೆ: ಮೂರನೇ ಸುತ್ತಿನ‌ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಮುನಿರತ್ನ ಒಂಬತ್ತು ಸಾವಿರ ಮತಗಳ‌ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೂರನೇ ಸುತ್ತಿನ‌ ಮತ ಎಣಿಕೆ ಮುಕ್ತಾಯದ ಬಳಿಕ ಜೆಡಿಎಸ್ 205 ಮತ ಪಡೆದಿದೆ.
ಆರ್​ಆರ್​ ನಗರ ಎರಡನೇ ಸುತ್ತಿನ ಫಲಿತಾಂಶ

8:59 AM- ಶಿರಾ ಉಪಚುನಾವಣೆ:ತುಮಕೂರಿನ ಶಿರಾ ಕ್ಷೇತ್ರದ ಮೊದಲ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ರಾಜೇಶ್​ಗೌಡ 3224, ಜೆಡಿಎಸ್​ನ ಅಮ್ಮಾಜಮ್ಮ 1135 ಹಾಗೂ ಕಾಂಗ್ರೆಸ್​ನ ಟಿ.ಬಿ. ಜಯಚಂದ್ರ 2329 ಮತಗಳನ್ನು ಪಡೆದಿದ್ದು, ಮೊದಲ ಸುತ್ತಿನ ಮುಕ್ತಾಯದ ಹೊತ್ತಿಗೆ ರಾಜೇಶ್​ ಗೌಡ ಮುನ್ನಡೆ ಸಾಧಿಸಿದ್ದಾರೆ.

8:50 AM- ರಾಜರಾಜೇಶ್ವರಿ ನಗರ ಉಪಚುನಾವಣೆ:ಇವಿಎಂ ಮತಎಣಿಕೆಯ ಮೊದಲ ಸುತ್ತಿನ ಮುಕ್ತಾಯದ ಹೊತ್ತಿಗೆ ಬಿಜೆಪಿ ಮುನಿರತ್ನ 6164 ಮತಗಳು, ಕಾಂಗ್ರೆಸ್​ನ ಕುಸುಮಾ 2915 ಹಾಗೂ ಜೆಡಿಎಸ್​ನ ಕೃಷ್ಣಮೂರ್ತಿ 136 ಮತಗಳನ್ನು ಪಡೆದಿದ್ದು, ಮುನಿರತ್ನ ಅವರು 3249 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ಇವಿಎಂ ಮತ ಎಣಿಕೆ ಆರಂಭವಾಗಿದ್ದು, 25 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಇದಕ್ಕೂ ಮುನ್ನ ನಡೆದ ಪೋಸ್ಟಲ್​ ಎಣಿಕೆಯಲ್ಲಿ ಬಿಜೆಪಿಯ ಮುನಿರತ್ನ- 253, ಕಾಂಗ್ರೆಸ್​​ನ ಕುಸುಮಾ-116, ಜೆಡಿಎಸ್​ನ ಕೃಷ್ಣಮೂರ್ತಿ- 34 ಮತಗಳನ್ನು ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 3 =
Remember me
