ಧಾರವಾಡ:ಹಾವಿಗೂ ಕ್ಯಾನ್ಸರ್​ ಬರುತ್ತಾ? ಎನ್ನುವ ಪ್ರಶ್ನೆ ಮೂಡಿರಬಹುದು. ಹೌದು, ಧಾರವಾಡದ ಈ ಪಶು ವೈದ್ಯರು ಹಾವಿಗೆ ಆಗಿರುವ ಕ್ಯಾನ್ಸರ್​ ಅನ್ನು ಗಮನಿಸಿ ಶಸ್ತ್ರಚಿಕಿತ್ಸೆ ಮಾಡಿ ಪ್ರಾಣ ಉಳಿಸಿದ್ದಾರೆ.
ಧಾರವಾಡದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದ್ದು ಪ್ರಾಣಿ ರಕ್ಷಕ ಸೋಮಶೇಖರ್ ಎಂಬುವವರಿಗೆ ಸಿಕ್ಕಿದ್ದ ಹಾವಿನ ಪ್ರಾಣವನ್ನು ವೈದ್ಯರು ಉಳಿಸಿದ್ದಾರೆ. ಮನೆಯೊಂದರಲ್ಲಿ ಆಭರಣ ಹಾವು ಸಿಕ್ಕಿದ್ದು ಅದನ್ನು ರಕ್ಷಿಸಿ ಹೊರಗೆ ಬಿಡೊವಾಗ ತಲೆ ಮೇಲೆ ಉಬ್ಬು ಇರೋದು ಪತ್ತೆಯಾಗಿದೆ. ಅದನ್ನು ಪ್ರಾಣಿ ರಕ್ಷಕ ಸೋಮಶೇಖರ ಕೃಷಿ ವಿವಿ ಪಶು ಚಿಕಿತ್ಸಾ ವಿಭಾಗಕ್ಕೆ ತಂದಿದ್ದು ವೈದ್ಯ ಡಾ. ಅನಿಲಕುಮಾರ ಪಾಟೀಲ ಹಾವನ್ನು ಪರಿಶೀಲಿಸಿದ್ದಾರೆ.
ತಪಾಸಣೆ ಮಾಡುವಾಗ ಹಾವಿಗೆ ಕ್ಯಾನ್ಸರ್ ಗಡ್ಡೆ ಇರುವುದ ಖಚಿತವಾಗಿದ್ದು ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ಡಾ. ಅನಿಲಕುಮಾರ ಹೊರತೆಗೆದಿದ್ದಾರೆ. ಸದ್ಯ ಹಾವು ಆರೋಗ್ಯವಾಗಿದ್ದು ಪ್ರಣಿ ಪ್ರಿಯ ಸೋಮಶೇಖರ್ ಆರೈಕೆಯಲ್ಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
